ಕಾರ್ಗಿಲ್ ಹೀರೋಗೆ ಸೇನೆ ಶ್ರದ್ಧಾಂಜಲಿ
Team Udayavani, Jul 8, 2020, 8:31 AM IST
ಹೊಸದಿಲ್ಲಿ: ಕಾರ್ಗಿಲ್ ಯುದ್ಧದ ಸ್ಮರಣೆಯ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಹುತಾತ್ಮ ಯೋಧ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರಿಗೆ ಭಾರತೀಯ ಸೇನೆ ಶ್ರದ್ಧಾಂಜಲಿ ಅರ್ಪಿಸಿದೆ. ಯುದ್ಧದ ಸಂದರ್ಭದಲ್ಲಿ ಕಾರ್ಗಿಲ್ನ ಪಾಯಿಂಟ್ 4875 ಪ್ರಾಂತ್ಯವನ್ನು ಭಾರತದ ವಶಕ್ಕೆ ಪಡೆಯಲು ನಡೆಸಿದ ಹೋರಾಟದಲ್ಲಿ ಅವರು ಹುತಾತ್ಮರಾದರು. ಯೇ ದಿಲ್ ಮಾಂಗೆ ಮೋರ್ ಎಂಬ ಘೋಷವಾಕ್ಯವನ್ನು ಪದೇ ಪದೇ ಬಾಯಲ್ಲಿ ಉದ್ಗರಿಸುತ್ತಾ, ಎಲ್ಲರನ್ನೂ ಹುರಿದುಂಬಿಸುತ್ತಿದ್ದ ಆ ಯೋಧನಿಗೆ ಟ್ವಿಟರಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಿರುವ ಭಾರತೀಯ ಸೇನೆ, ಪಾಯಿಂಟ್ 4875 ಪ್ರಾಂತ್ಯವನ್ನು ಕೇವಲ 13 ಯೋಧರ ಜತೆಗೂಡಿ ವಶಪಡಿಸಿಕೊಂಡ, ಪರಮವೀರ ಚಕ್ರ ಸನ್ಮಾನಿತ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಸೇವೆಯನ್ನು ಸೇನೆ ಎಂದಿಗೂ ಸ್ಮರಿಸುತ್ತದೆ ಎಂದು ತಿಳಿಸಿದೆ.