O2 ಎಂಬ ಮೆಡಿಕಲ್ ಥ್ರಿಲ್ಲರ್ ಚಿತ್ರ
Team Udayavani, Jul 10, 2020, 4:49 AM IST
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಒಡೆತನದ ಪಿ. ಆರ್.ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈಗಾಗಲೇ “ಕವಲುದಾರಿ’, “ಮಾಯಾಬಜಾರ್’ ಚಿತ್ರಗಳು ತೆರೆಕಂಡು ಪ್ರೇಕ್ಷಕರನ್ನು ರಂಜಿಸಿದ್ದವರು. ಸದ್ಯ ಪುನೀತ್ ರಾಜಕುಮಾರ್ ಬ್ಯಾನರ್ನಲ್ಲಿ “ಲಾ’ ಮತ್ತು “ಫ್ರೆಂಚ್ ಬಿರಿಯಾನಿ’ ಚಿತ್ರಗಳು ಕೂಡ ತೆರೆಗೆ ಬರೋದಕ್ಕೆ ರೆಡಿಯಾಗಿವೆ. ಇದರ ನಡುವೆ ಪಿಆರ್ಕೆ ಪ್ರೊಡಕ್ಷನ್ಸ್ ಈಗ ಮೆಡಿಕಲ್ ಥ್ರಿಲ್ಲರ್ ಕಥಾಹಂದರದ ಚಿತ್ರವೊಂದನ್ನು ತೆರೆಗೆ ತರುವ ತಯಾರಿಯಲ್ಲಿದೆ.
ಈಗಾಗಲೇ ಚಿತ್ರಕ್ಕೆ “02′ ಎಂದು ಹೆಸರಿಡಲಾಗಿದ್ದು, “ಮಾಯಾ ಬಜಾರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಧಾಕೃಷ್ಣ ರೆಡ್ಡಿ, ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಪಿಆರ್ಕೆ ಪ್ರೊಡಕ್ಷನ್ ಜೊತೆಗೆ ಕೈ ಜೋಡಿಸಲಿದ್ದಾರೆ. ಇನ್ನು ಪ್ರಶಾಂತ್ ರಾಜ್ ಮತ್ತು ರಾಘವ್ ಎಂಬ ನವ ನಿರ್ದೇಶಕರೂ ಈ ತಂಡದಲ್ಲಿದ್ದು, ಇದರಲ್ಲಿ ರಾಘವ್ ಟ್ಯಾಟೂ ಕಲಾವಿದರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಮಾತನಾಡುವ ರಾಧಾಕೃಷ್ಣ ರೆಡ್ಡಿ, ಇಬ್ಬರು ಯುವ ನಿರ್ದೇಶಕರ ಪರಿಶ್ರಮದಿಂದ ಈ ಸಿನಿಮಾ ಸಿದಟಛಿವಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಸಿನಿಮಾದ ಸ್ಕ್ರಿಪ್ಟ್ ತಯಾರಿ ನಡೆದಿದೆ. ಕಥೆ ಮತು ಇಷ್ಟವಾಗಿದ್ದು, ತೆರೆಗೆ ತರುವುದಕ್ಕೆ ಅನುಕೂಲವಾಗಿದೆ ಎಂದು ನನಗೆ ಅನಿಸಿದ್ದರಿಂದ, ನಾನು ಯೋಜನೆಯ ಭಾಗವಾಗಲು ನಿರ್ಧರಿಸಿದೆ. ನನ್ನ ಆಲೋಚನೆಯನ್ನು ಪುನೀತ್ ರಾಜ ಕುಮಾರ್ ಅವರೊಂದಿಗೆ ಹಂಚಿಕೊಂಡೆ’ ಎಂದು ವಿವರಿಸುತ್ತಾರೆ.
ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ರಾಧಾಕೃಷ್ಣ ರೆಡ್ಡಿ, “ಇದೊಂದು ಮೆಡಿಕಲ್ ಹಿನ್ನೆಲೆಯ ಕಥೆಯಾಗಿರುವ ಕಾರಣ ಅಪ ರೂಪದ ವಿಷಯ ಇದರಲ್ಲಿದೆ. ಈಗಾಗಲೇ ಸ್ಕ್ರಿಪ್ಟ್ ಅನ್ನು ರಾಜ್ ಬಿ ಶೆಟ್ಟಿ ಸೇರಿ ಒಂದೆರಡು ನಿರ್ದೇಶಕರಿಗೆ ಪರಿಚಯಿಸಿ ದ್ದೇವೆ. ಲಾಕ್ಡೌನ್ ವೇಳೆ ಆನ್ಲೈನ್ನಲ್ಲಿ ನಡೆದ ಆಡಿಷನ್ ಪೂರ್ಣಗೊಳಿಸ ಲಾಗಿದೆ. ಈ ಸಿನಿಮಾದ ಭಾಗವಾಗಲು ಸಾಕಷ್ಟು ಯುವಕರು ಆಸಕ್ತಿ ಹೊಂದಿದ್ದಾರೆ.
ನಮ್ಮ ತಂಡವು ಕೆಲವು ಹೆಸರುಗಳನ್ನು ಶಾರ್ಟ್ಲಿಸ್ಟ್ ಮಾಡಿದ್ದರೂ ಫೈನಲ್ ರೌಂಡ್ ಆಡಿಷನ್ ಮುಗಿದ ನಂತರ ಅಂತಿಮ ತೀರ್ಮಾನಕ್ಕೆ ಬರುವುದಾಗಿ’ ಹೇಳಿದ್ದಾರೆ. ಒಟ್ಟಾರೆ ಈ ಹೊಸಚಿತ್ರದ ಕೆಲಸಗಳಿಗೆ ತೆರೆಮರೆಯಲ್ಲಿ ಚಾಲನೆ ಸಿಕ್ಕಿದ್ದು, ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Sandalwood; ‘ಫಾರೆಸ್ಟ್’ನಲ್ಲಿ ಚಿಕ್ಕಣ್ಣ & ಟೀಂ
Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !