ಕೋವಿಡ್ ಸಂಕಷ್ಟ: ಹಾಲಿನ ದರ ಕುಸಿತ, ರೈತ ಕಂಗಾಲು

ಹೈನೋದ್ಯಮಕ್ಕೆ ಭಾರೀ ಹೊಡೆತ

Team Udayavani, Jul 20, 2020, 9:52 AM IST

ಕೋವಿಡ್ ಸಂಕಷ್ಟ: ಹಾಲಿನ ದರ ಕುಸಿತ, ರೈತ ಕಂಗಾಲು

ನೆಲಮಂಗಲ: ಹಾಲಿನ ಉತ್ಪಾದನೆ ಪ್ರಮಾಣ ಹೆಚ್ಚಿದ್ದು, ಕೋವಿಡ್ ಸಮಸ್ಯೆಯಿಂದಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೇಡಿಕೆ ಪ್ರಮಾಣ ಕಡಿಮೆ ಯಾಗಿದೆ. ಹೀಗಾಗಿ ಬಮೂಲ್‌ ನಷ್ಟ ಪರಿಹಾರಕ್ಕಾಗಿ ಲೀಟರ್‌ ಹಾಲಿಗೆ 4 ರೂ. ಕಡಿತಗೊಳಿಸಿದೆ. ಆದರೆ ಆದರೆ ಪಶು ಆಹಾರದ ದರ ಮಾತ್ರ ಯಥಾಸ್ಥಿತಿಯಲ್ಲಿ ಮುಂದು ವರಿದಿದ್ದು, ಹೈನೋದ್ಯಮಿಗಳು ಕಂಗಾಲಾಗಿದ್ದಾರೆ.

ಪ್ರತಿನಿತ್ಯ ಹಳ್ಳಿಗಳ ಡೇರಿಗಳಿಗೆ ಹಾಲು ಸರಬರಾಜು ಮಾಡುವ ಹೈನೋದ್ಯಮಿಗಳಿಗೆ ಒಂದು ಲೀಟರ್‌ ಹಾಲಿಗೆ ಈ ಹಿಂದೆ 28 ರೂ. ಜತೆ ಸಹಾಯ ಧನ 5 ರೂ. ನೀಡಲಾಗುತ್ತಿತ್ತು. ಒಂದು ತಿಂಗಳ ಹಿಂದೆ ಲೀಟರ್‌ಗೆ 1.5 ರೂ. ಕಡಿಮೆ ಮಾಡಿದ ಒಕ್ಕೂಟ ಮತ್ತೆ ಜು.16ರಿಂದ ಲೀಟರ್‌ಗೆ 2.5 ರೂ. ಕಡಿಮೆ ಮಾಡಿ, ಲೀಟರ್‌ಗೆ 24ರೂ. ಜತೆ 5 ರೂ. ಸಹಾಯ ಧನ ನೀಡಲು ಬಮೂಲ್‌ ನಿರ್ಧರಿಸಿ ಆದೇಶ ನೀಡಿದೆ. ಕೊರೊನಾದಿಂದ ಆರ್ಥಿಕ ಸಂಕಷ್ಟ ಎದುರಿಸುತಿದ್ದ ರೈತರಿಗೆ ಪಶುಸಂಗೋಪನೆ ವರವಾಗಿತ್ತು. ಆದರೆ ಈಗ ಹಾಲಿನ ದರ ಕಡಿಮೆ ಮಾಡಿ, ಪಶು ಆಹಾರ ದರ ದುಬಾರಿಯಾದ ಕಾರಣ ರೈತರು ಮತ್ತು ಹೈನುಗಾರಿಕೆ ಜೀವನೋಪಾಯ ಮಾಡಿಕೊಂಡಿರುವವರಿಗೆ ಸಂಕಷ್ಟ ಎದುರಾಗಿದೆ. ಹೆಚ್ಚಾಯ್ತು ಪಶು ಆಹಾರ ದರ: ಹಾಲಿನ ದರ ಏರಿಕೆ ವೇಳೆ ಪಶು ಆಹಾರದ ದರ ಹೆಚ್ಚಳವಾಗುತ್ತದೆ. 2-3 ತಿಂಗಳ ಹಿಂದೆಯಷ್ಟೇ ಒಕ್ಕೂಟ ನೀಡುವ 50 ಕೆ.ಜಿ.ಯ ಪಶು ಆಹಾರ (ಫೀಡ್‌)ದರ 25 ರೂ. ಹೆಚ್ಚಳ ಮಾಡಿತ್ತು. ಆದರೆ ಹಾಲಿನ ದರ ಕಡಿಮೆ ಮಾಡಿ, ಪಶು ಆಹಾರ ದರ ಇಳಿಕೆ ಮಾಡದಿರುವುದು ಹೈನೋದ್ಯಮಿ ಗಳು ಮತ್ತು ರೈತರಲ್ಲಿನ ಬೇಸರದ ಸಂಗತಿ ಎಂದು ಹಾಲು ಉತ್ಪಾದಕರು ಬೇಸರಿಸಿದ್ದಾರೆ.

ಆಹಾರ ನೀಡುವ ಪ್ರಮಾಣ: ಪಶು ಸಂಗೋಪನೆಯಲ್ಲಿ ತೊಡಗಿರುವ ಪ್ರಗತಿಪರ ರೈತ ಹಾಗೂ ಪಶು ವೈದ್ಯರ ಪ್ರಕಾರ 10 ಲೀ. ಹಾಲು ನೀಡುವ ಹಸುವಿಗೆ ದಿನಕ್ಕೆ 6 ರಿಂದ 7 ಕೆ.ಜಿ.ಯಷ್ಟು ಹಸಿಹುಲ್ಲು ಬಿಟ್ಟು ಎಲ್ಲ ರೀತಿಯ ಪಶು ಆಹಾರ ನೀಡಿದರೆ ತಿಂಗಳಿಗೆ ಒಂದು ಹಸುವಿಗೆ ಅಂದಾಜು 180ರಿಂದ 210 ಕೆಜಿ ಆಹಾರ ನೀಡಬೇಕಾಗುತ್ತದೆ. ಒಂದು ಹಸುವಿಗೆ ಕೇವಲ ಪಶು ಆಹಾರಕ್ಕಾಗಿಯೇ ಅಂದಾಜು 5ರಿಂದ 6 ಸಾವಿರದಷ್ಟು ಖರ್ಚು ಮಾಡಬೇಕಾಗಿದೆ.

ಮನವಿ: ಕೋವಿಡ್ ಸಂಕಷ್ಟದಲ್ಲಿ ಹಾಲಿನ ದರ ಕಡಿಮೆ ಮಾಡಿದಂತೆ ಪಶು ಆಹಾರ ಕಡಿಮೆ ಮಾಡುವುದು ಅಥವಾ ರಿಯಾಯಿತಿ ದರದಲ್ಲಿ ವಿತರಣೆ ಮಾಡಿದರೆ ಪಶುಸಂಗೋಪನೆ ಉಳಿಯಲು ಸಾಧ್ಯ. ಸರಕಾರ ಅದರ ಬಗ್ಗೆ ಗಮನ ವಹಿಸಿ, ರೈತರ ಪರ ನಿಲ್ಲ ಬೇಕು ಎಂದು ರೈತ ಸಂಘಟನೆಗಳು, ಹಾಲು ಉತ್ಪಾದಕರು ಮನವಿ ಮಾಡಿದ್ದಾರೆ.

16 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗಬೇಕಾಗಿದ್ದ ಸಮಯದಲ್ಲಿ 19 ಲಕ್ಷ ಲೀಟರ್‌ ಉತ್ಪಾದನೆಯಾಗುತ್ತಿದೆ. 12 ಲಕ್ಷ ಲೀಟರ್‌ ಬೇಡಿಕೆಯಿದ್ದ ಹಾಲಿನ ಮಾರಾಟ ಕೋವಿಡ್ ಆರಂಭವಾದ ನಂತರ 8 ಲಕ್ಷ ಲೀಟರ್‌ಗೆ ಕುಸಿತವಾಗಿದೆ. ಹಾಲಿನ ದರ ಕಡಿಮೆ ಮಾಡುವ ಅನಿವಾರ್ಯವಿದೆ. ಪಶು ಆಹಾರದ ಬಗ್ಗೆ ಚರ್ಚೆ ಮಾಡಲಾಗುತ್ತದೆ ನರಸಿಂಹಮೂರ್ತಿ, ಬಮೂಲ್‌ ಅಧ್ಯಕ

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.