ವಿಸ್ಡನ್‌ ಟ್ರೋಫಿ ಉಳಿಸಿಕೊಂಡೀತೇ ವಿಂಡೀಸ್‌?


Team Udayavani, Jul 24, 2020, 10:47 AM IST

ವಿಸ್ಡನ್‌ ಟ್ರೋಫಿ ಉಳಿಸಿಕೊಂಡೀತೇ ವಿಂಡೀಸ್‌?

ಮ್ಯಾಂಚೆಸ್ಟರ್‌: ಕೋವಿಡ್ ಕಾಲದ ಪ್ರಥಮ ಟೆಸ್ಟ್‌ ಸರಣಿ ಕ್ಲೈಮ್ಯಾಕ್ಸ್‌ ಹಂತ ತಲುಪಿದೆ. 1-1 ಸಮಬಲ ಸಾಧಿಸಿರುವ ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳು ಶುಕ್ರವಾರದಿಂದ ಇಲ್ಲಿನ ಓಲ್ಡ್‌ ಟ್ರಾಫ‌ರ್ಡ್‌ ಅಂಗಳದಲ್ಲಿ 3ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯವನ್ನು ಆಡಲಿಳಿಯಲಿವೆ.

“ವಿಸ್ಡನ್‌ ಟ್ರೋಫಿ’ಯನ್ನು ಮರಳಿ ಪಡೆಯಬೇಕಾದರೆ ಇಂಗ್ಲೆಂಡ್‌ ಈ ಪಂದ್ಯವನ್ನು ಗೆಲ್ಲಬೇಕಾದುದು ಅಗತ್ಯ. ಅಕಸ್ಮಾತ್‌ ಡ್ರಾ ಫ‌ಲಿತಾಂಶ ದಾಖಲಾದರೂ ಟ್ರೋಫಿ ಕೆರಿಬಿಯನ್ನರ ಬಳಿಯೇ ಉಳಿಯಲಿದೆ. 2018 -19ರ ತವರಿನ ಸರಣಿಯನ್ನು ವಿಂಡೀಸ್‌ 2-1 ಅಂತರದಿಂದ ಗೆದ್ದು ವಿಸ್ಡನ್‌ ಟ್ರೋಫಿ ಮೇಲೆ ಹಕ್ಕು ಚಲಾಯಿಸಿತ್ತು. ಸಮಬಲಕ್ಕೆ ಬಂದ ಸರಣಿ: 3 ದಿನಗಳ ಹಿಂದೆ ಇದೇ
ಅಂಗಳದಲ್ಲಿ ಮುಗಿದ ಟೆಸ್ಟ್‌ ಪಂದ್ಯವನ್ನು ಇಂಗ್ಲೆಂಡ್‌ 113 ರನ್ನುಗಳಿಂದ ಗೆದ್ದು ಸರಣಿಯನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿತ್ತು. ಸೌತಾಂಪ್ಟನ್‌ ಪಂದ್ಯ ವನ್ನು 4 ವಿಕೆಟ್‌ಗಳಿಂದ ಗೆದ್ದ ಹೋಲ್ಡರ್‌ ಪಡೆ, ಮ್ಯಾಂಚೆ ಸ್ಟರ್‌ನಲ್ಲಿ ಕೊನೆಯ ದಿನದ ಬ್ಯಾಟಿಂಗ್‌ ಒತ್ತಡವನ್ನು ತಾಳಲಾಗದೆ ಆತಿಥೇಯರಿಗೆ ಶರಣಾಗಿತ್ತು. 312 ರನ್‌ ಗುರಿ ಲಭಿಸಿದಾಗ ವಿಂಡೀಸಿಗೆ ಇದನ್ನು ಸಾಧಿಸ ಲೇ ಬೇಕಾದ ಜರೂರತ್ತೇನೂ ಇರಲಿಲ್ಲ. ಪಂದ್ಯವನ್ನು ಡ್ರಾ ಮಾಡುವ ಹಾದಿ ತೆರೆದೇ ಇತ್ತು. ಆದರೆ ಇಂಗ್ಲೆಂಡ್‌ ಬೌಲರ್ ಘಾತಕ ದಾಳಿ ಸಂಘಟಿಸಿ ವಿಂಡೀಸಿನ ಬ್ಯಾಟಿಂಗ್‌ ಸರದಿಯನ್ನು
ಸೀಳಿಹಾಕುವಲ್ಲಿ ಯಶಸ್ವಿಯಾದರು.

ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಎನ್ನುವುದು ವಿಂಡೀಸ್‌ ಪಾಲಿಗೆ ಎರಡೂ ಟೆಸ್ಟ್‌ಗಳಲ್ಲಿ ಸಮಸ್ಯೆಯಾ ಗಿಯೇ ಉಳಿದಿದೆ. ಕ್ಯಾಂಬೆಲ್‌, ಹೋಪ್‌ ಭರವಸೆ ಮೂಡಿಸುವಲ್ಲಿ ವಿಫ‌ಲರಾಗಿದ್ದಾರೆ. ಇವರಿಬ್ಬರೂ ಹೊರಗುಳಿಯುವ ಸಾಧ್ಯತೆ ಇದೆ. ದ್ವಿತೀಯ ಪಂದ್ಯದ ಎರಡೂ ಇನ್ನಿಂಗ್ಸ್‌ ಗಳಲ್ಲಿ ಸೊನ್ನೆ ಸುತ್ತಿದ ಕೀಪರ್‌ ಡೌರಿಚ್‌ ಬದಲು ಜೋಶುವ ಡಿ ಸಿಲ್ವ ಅವಕಾಶ ಪಡೆಯಬಹುದು. ಸ್ಪಿನ್ನರ್‌ ರಖೀಂ ಕಾರ್ನ್ವಾಲ್‌ ಕೂಡ ರೇಸ್‌ನಲ್ಲಿದ್ದಾರೆ. ಬೆನ್‌ ಸ್ಟೋಕ್ಸ್‌ ಚೇತರಿಕೆ: ಇಂಗ್ಲೆಂಡ್‌ ತಂಡದಲ್ಲೂ ದೊಡ್ಡ ಮಟ್ಟದ ಬದಲಾವಣೆ ನಿರೀಕ್ಷಿಸಲಾಗಿದೆ. ವೋಕ್ಸ್‌, ಕರನ್‌ ಬದಲು ಆ್ಯಂಡರ್ಸನ್‌ ಮತ್ತು ಆರ್ಚರ್‌ ಆಡುವ ಬಳಗಕ್ಕೆ ಮರಳುವುದು ಬಹುತೇಕ ಖಚಿತ. ಕಳೆದ ಪಂದ್ಯದ ಹೀರೋ ಬೆನ್‌ ಸ್ಟೋಕ್ಸ್‌ ಚೇತರಿಸಿಕೊಂಡಿರುವುದು ಇಂಗ್ಲೆಂಡ್‌ ಪಾಲಿನ ಸಿಹಿ ಸುದ್ದಿ. ಮೈ ಕೈ ನೋವಿನಿಂದಾಗಿ ಅವರು ದ್ವಿತೀಯ ಇನ್ನಿಂಗ್ಸ್‌ ವೇಳೆ ಬೌಲಿಂಗ್‌ ನಿಂದ ಹಿಂದೆ ಸರಿದಿದ್ದರು.

ಮಳೆಯ ಮುನ್ಸೂಚನೆ
ಮ್ಯಾಂಚೆಸ್ಟರ್‌ ವಾತಾವರಣ ಟೆಸ್ಟ್‌ ಕ್ರಿಕೆಟಿಗೆ ಪ್ರಶಸ್ತವಾಗಿಲ್ಲ. ಮೊದಲ ದಿನ ಮೋಡ ಕವಿದ ವಾತಾವರಣವಿದ್ದು, ಅನಂತರದ ನಾಲ್ಕೂ ದಿನ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಇದರಿಂದ ಸರಣಿ ವಶಪಡಿಸಿಕೊಳ್ಳುವ ಯೋಜನೆಯಲ್ಲಿರುವ ಇಂಗ್ಲೆಂಡಿಗೆ ಹಿನ್ನಡೆಯಾದೀತು ಎಂಬ ಆತಂಕ ಎದುರಾಗಿದೆ.

ಟಾಪ್ ನ್ಯೂಸ್

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.