ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆಯನ್ನು ಕಾಡಿದ್ದನಂತೆ ಈ ಬ್ಯಾಟ್ಸ್ ಮನ್! ಯಾರು ಆ ಲೆಫ್ಟೀ?


Team Udayavani, Jul 26, 2020, 8:32 PM IST

ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆಯನ್ನು ಕಾಡಿದ್ದನಂತೆ ಈ ಬ್ಯಾಟ್ಸ್ ಮನ್! ಯಾರು ಆ ಲೆಫ್ಟೀ?

ಹೊಸದಿಲ್ಲಿ: ಬೌಲರ್‌ ಓರ್ವ ಎಷ್ಟೇ ಘಾತಕನಾಗಿದ್ದರೂ, ಆತ ವಿಕೆಟ್‌ ಬೇಟೆಯಲ್ಲಿ ಎಷ್ಟೇ ನಿಷ್ಣಾತನಾದರೂ ಅವರಿಗೆ ಸವಾಲೊಡ್ಡಬಲ್ಲ ಬ್ಯಾಟ್ಸ್‌ಮನ್‌ ಓರ್ವ ಇದ್ದೇ ಇರುತ್ತಾನೆ. ಟೆಸ್ಟ್‌ ವಿಕೆಟ್‌ ಬೇಟೆಯಲ್ಲಿ ಭಾರತೀಯ ದಾಖಲೆ ಬರೆದಿರುವ ಸ್ಪಿನ್‌ ಮಾಂತ್ರಿಕ ಅನಿಲ್‌ ಕುಂಬ್ಳೆ ಕೂಡ ಇದಕ್ಕೆ ಹೊರತಲ್ಲ.

ಹಾಗಾದರೆ ಕುಂಬ್ಳೆ ಎಸೆತಗಳಿಗೆ ಸವಾಲೊಡ್ಡಿದ ಆಟಗಾರ ಯಾರು? ಕುಂಬ್ಳೆ ಯಾವ ಬ್ಯಾಟ್ಸ್‌ಮನ್‌ಗೆ ಬೌಲಿಂಗ್‌ ಮಾಡುವುದು ಅತ್ಯಂತ ಕಠಿನ ಎಂದು ಭಾವಿಸಿದ್ದರು?

ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಪೋಮಿ ಎಂಬಗ್ವ ನಡೆಸಿಕೊಟ್ಟ ಇನ್‌ಸ್ಟಾಗ್ರಾಮ್‌ ಲೈವ್‌ ಕಾರ್ಯಕ್ರಮದಲ್ಲಿ ಅನಿಲ್‌ ಕುಂಬ್ಳೆಗೆ ಇಂಥ ಪ್ರಶ್ನೆಗಳು ಎದುರಾದವು.

ಆದರೆ ನಮ್ಮ ಕರ್ನಾಟಕದ ಹೆಮ್ಮೆಯ ಬೌಲರ್‌ ಜಂಬೋ ಈ ಪ್ರಶ್ನೆಗೆ ಜಾಣ್ಮೆಯ ಉತ್ತರ ನೀಡಿದರು.

ಎಲ್ಲರೂ ನಮ್ಮಲ್ಲೇ ಇದ್ದರು!
‘ಇಂಥ ಅನೇಕ ಬ್ಯಾಟ್ಸ್‌ಮನ್‌ಗಳಿದ್ದಾರೆ. ಅದೃಷ್ಟವಶಾತ್‌ ನನ್ನ ಕಾಲದ ಅತ್ಯುತ್ತಮ ದರ್ಜೆಯ ಬ್ಯಾಟ್ಸ್‌ಮನ್‌ಗಳನೇಕರು ಭಾರತ ತಂಡದಲ್ಲೇ ಇದ್ದರು.ತೆಂಡುಲ್ಕರ್‌, ದ್ರಾವಿಡ್‌, ಲಕ್ಷ್ಮಣ್‌, ಗಂಗೂಲಿ, ಸೆಹವಾಗ್‌…ಹೀಗೆ. ಆದರೆ, ಇವರೆಲ್ಲರಿಗೂ ನಾನು ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡುತ್ತಿದ್ದೆ. ಆದರೆ ಪಂದ್ಯದಲ್ಲಿ ಇವರಿಗೆಲ್ಲ ಬೌಲಿಂಗ್‌ ಮಾಡಬೇಕಲ್ಲ ಎಂಬ ಚಿಂತೆ ನನಗಿರುತ್ತಿರಲಿಲ್ಲ…’ ಎಂದು ಕುಂಬ್ಳೆ ಹೇಳಿದರು.

ಆದರೆ ಅವನೊಬ್ಬನಿದ್ದ ‘ಲಾರಾ’
ಈ ಸಂದರ್ಭದಲ್ಲಿ ಅನಿಲ್‌ ಕುಂಬ್ಳೆ ನಿರ್ದಿಷ್ಟ ಬ್ಯಾಟ್ಸ್‌ಮನ್‌ ಓರ್ವನ ಹೆಸರು ಹೇಳಲು ಮರೆಯಲಿಲ್ಲ.ಆ ಕ್ರಿಕೆಟಿಗ ಬೇರೆ ಯಾರೂ ಅಲ್ಲ, ವೆಸ್ಟ್‌ ಇಂಡೀಸಿನ ಶ್ರೇಷ್ಠ ಬ್ಯಾಟ್ಸ್ ಮನ್ ಬ್ರಿಯಾನ್‌ ಲಾರಾ!

‘ನನ್ನ ಕಾಲದಲ್ಲೂ ಬೌಲಿಂಗಿಗೆ ಸವಾಲಾಗಬಲ್ಲ ಬಹಳಷ್ಟು ಬ್ಯಾಟ್ಸ್‌ಮನ್‌ಗಳಿದ್ದರು. ಇವರಲ್ಲಿ ಬ್ರಿಯಾನ್‌ ಲಾರಾ ಕಠಿನ ಎದುರಾಳಿಯಾಗಿದ್ದರು. ಯಾಕೆಂದರೆ, ಪ್ರತಿಯೊಂದು ಎಸೆತಕ್ಕೆ ನಾಲ್ಕು ವಿಭಿನ್ನ ರೀತಿಯ ಹೊಡೆತಗಳನ್ನು ಬಾರಿಸುವ ತಾಕತ್ತು ಅವರಲ್ಲಿ ಇರುತ್ತಿತ್ತು. ಬೌಲರ್‌ಗಳ ದಿಕ್ಕು ತಪ್ಪಿಸುವಲ್ಲಿ ಲಾರಾಗಿಂತ ಮಿಗಿಲಾದ ಬ್ಯಾಟ್ಸ್‌ಮನ್‌ ಮತ್ತೂಬ್ಬ ಇಲ್ಲ…’ ಎಂದು ಅನಿಲ್‌ ಕುಂಬ್ಳೆ ವಿವರಿಸಿದರು.

ಟಾಪ್ ನ್ಯೂಸ್

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

BCCI

T20 World Cup: ಇಂದು ಭಾರತ ತಂಡ ಪ್ರಕಟ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.