ಸವಾರರ ರಕ್ಷಣೆಗೆ ರಸ್ತೆ ಮಧ್ಯೆ 7 ಗಂಟೆ ನಿಂತಿದ್ದ ಮಹಿಳೆಗೆ ದೇಣಿಗೆ
Team Udayavani, Aug 12, 2020, 6:00 AM IST
ಮುಂಬೈ: ಮಳೆಯನ್ನು ಲೆಕ್ಕಿಸದೇ ರಸ್ತೆ ಮಧ್ಯದಲ್ಲಿದ್ದ ಮ್ಯಾನ್ಹೋಲ್ ಬಳಿ ಸತತ ಏಳು ಗಂಟೆ ಕಾಲ ನಿಂತು ಟ್ರಾಫಿಕ್ ಪೊಲೀಸರಂತೆ ಕಾರ್ಯ ನಿರ್ವಹಿಸಿದ ಮಹಿಳೆಗೆ 1.5 ಲಕ್ಷ ರೂ.ದೇಣಿಗೆ ನೀಡಲಾಗಿದೆ. ಮುಂಬೈನಲ್ಲಿ ಆ.4ರಂದು ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿ ಸಂಚಾರ ವ್ಯತ್ಯಯವಾಗಿತ್ತು. ಈ ಸಂದರ್ಭದಲ್ಲಿ ಬೀದಿಬದಿ ಹೂ ವ್ಯಾಪಾರಿ ಕಾಂತಾ ಮೂರ್ತಿ(50) ಎಂಬಾಕೆ ರಸ್ತೆ ಮಧ್ಯದಲ್ಲಿದ್ದ ಮ್ಯಾನ್ಹೋಲ್ ಮುಚ್ಚಳವನ್ನು ತೆರೆದು ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದರು. ಅಲ್ಲದೆ, ಮ್ಯಾನ್ಹೋಲ್ ಬಳಿ 7 ಗಂಟೆಗಳ ಕಾಲ ನಿಂತು, ತನ್ನತ್ತ ವಾಹನಗಳು ಬಾರದಂತೆ ನೋಡಿಕೊಂಡಿದ್ದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಮಳೆಯಿಂದಾಗಿ ಈಕೆಯ ಹೂವಿನ ಟೆಂಟ್ ಕೂಡ ಕೊಚ್ಚಿಹೋಗಿತ್ತು.
ಇದರಿಂದಾಗಿ 10 ಸಾವಿರ ರೂ. ನಷ್ಟವಾಗಿತ್ತು. ಈ ಮಹಿಳೆಯ ನಿಸ್ವಾರ್ಥ ಸೇವೆಯನ್ನು ಮೆಚ್ಚಿಕೊಂಡು ಉದ್ಯಮಿಗಳು, ಸಾರ್ವಜನಿಕರು 1.5 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂತಾ ಮೂರ್ತಿ, “2017ರಲ್ಲಿ ಮಳೆಯಿಂದಾಗಿ ಮ್ಯಾನ್ಹೋಲ್ ತೆರೆದಿದ್ದಕ್ಕೆ ಓರ್ವ ಸವಾರ ಸಾವನ್ನಪ್ಪಿದ್ದನು. ಅಲ್ಲದೇ ಕಳೆದ ವಾರ ಸುರಿದ ಭಾರೀ ಮಳೆಯಿಂದ ರಸ್ತೆಗಳು ನೀರಿನಿಂದ ಕೂಡಿದ್ದವು. ಹೀಗಾಗಿ ಬೇರೆ ದಾರಿಯಿಲ್ಲದೇ ನಾನೇ ಖುದ್ದಾಗಿ ರಸ್ತೆಗೆ ತೆರಳಿ ಮ್ಯಾನ್ಹೋಲ್ ತೆರೆದು ನೀರು ಹರಿದು ಹೋಗುವಂತೆ ಮಾಡಿದ್ದೆ. ಅಲ್ಲದೇ ಸತತ 7 ಗಂಟೆ ಕಾಲ ನಿಂತು ಇತ್ತ ವಾಹನಗಳು ಬಾರದಂತೆ ಬಾರದಂತೆ ನೋಡಿಕೊಂಡಿದ್ದೆ’ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್