ಅಮಾಸೆಬೈಲು: ಎರಡು ಲಾರಿಗಳಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಜಾನುವಾರು ವಶ, ನಾಲ್ವರ ಬಂಧನ
Team Udayavani, Sep 15, 2020, 12:37 PM IST
ಕುಂದಾಪುರ: ಎರಡು ಲಾರಿಗಳಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಜಾನುವಾರಗಳನ್ನು ಇಲ್ಲಿನ ಅಮಾಸೆಬೈಲಿನ ಹೊಸಂಗಡಿ ಚೆಕ್ ಪೋಸ್ಟ್ ನಲ್ಲಿ ವಶಕ್ಕೆ ಪಡೆಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ದಾವಣಗೆರೆಯ ಮೆಹಬೂಬ್, ಇಮ್ರಾನ್, ಬೆಳಗಾವಿ ಜಿಲ್ಲೆಯ ಬಾಪು ಸಾಹೇಬ್, ಆಸಿಫ್ ಎಂದು ಗುರತಿಸಲಾಗಿದೆ.
ಅಮಾಸೆಬೈಲಿನ ಹೊಸಂಗಡಿ ಚೆಕ್ ಪೋಸ್ಟ್ ನಲ್ಲಿ ಇಂದು ಬೆಳಿಗ್ಗೆ ಎರಡು ಲಾರಿಗಳನ್ನು ತಡೆದು ಪರಿಶೀಲಿಸಿದಾಗ ಅಕ್ರಮವಾಗಿ, ಹಿಂಸಾತ್ಮಕ ರೂಪದಲ್ಲಿ ಜಾನುವಾರು ಸಾಗಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಕೂಡಲೇ ಜಾನುವಾರುಗಳು ಮತ್ತು ಲಾರಿಯನ್ನು ವಶಕ್ಕೆ ಪಡೆದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಬೈಂದೂರು ಯೆಡ್ತರೆ: ಹೊಳೆಯಲ್ಲಿ ಯುವಕನ ಶವ ಪತ್ತೆ, ಕಾಲು ಜಾರಿ ಬಿದ್ದಿರುವ ಶಂಕೆ