ಹರಿಕಥೆ ಅಲ್ಲಾ ಗಿರಿ ಕಥೆಗೆ ಇಬ್ಬರು ಹೊಸ ಹೀರೋಯಿನ್ಸ್
Team Udayavani, Sep 21, 2020, 1:40 PM IST
ನಟ ಕಂ ನಿರ್ದೇಶಕ ರಿಷಭ್ ಶೆಟ್ಟಿ ಅಭಿನಯದ ಹೊಸಚಿತ್ರ “ಹರಿಕಥೆ ಅಲ್ಲಾ ಗಿರಿಕಥೆ’ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ.ಕೊರೊನಾ ಲಾಕ್ ಡೌನ್ ವೇಳೆಯಲ್ಲಿ ಚಿತ್ರದ ಪ್ರೀ-ಪ್ರೊಡಕ್ಷನ್ಕೆಲಸಗಳನ್ನು ಪೂರ್ಣಗೊಳಿಸಿದ್ದ ಚಿತ್ರತಂಡ, ಲಾಕ್ಡೌನ್ ಸಡಿಲವಾಗುತ್ತಿದ್ದಂತೆ “ಹರಿಕಥೆ ಅಲ್ಲಾ ಗಿರಿಕಥೆ’ ಯ ಚಿತ್ರೀಕರಣ ಶುರು ಮಾಡಿದೆ.
ಇನ್ನು ಈ ಚಿತ್ರದಲ್ಲಿ ನಾಯಕ ನಟ ರಿಷಭ್ ಶೆಟ್ಟಿ ಅವರಿಗೆ ನಾಯಕಿಯಾರಾಗುತ್ತಾರೆ ಅನ್ನೋ ಪ್ರಶ್ನೆಗೂ ಈಗ ಉತ್ತರ ಸಿಕ್ಕಿದೆ. ಸದ್ಯ “ಹರಿಕಥೆ ಅಲ್ಲಾ ಗಿರಿಕಥೆ’ ಚಿತ್ರದಲ್ಲಿ ರಿಷಭ್ ಗೆ ನಾಯಕಿಯರಾಗಿ ಇಬ್ಬರ ಹೆಸರನ್ನು ಚಿತ್ರತಂಡ ಅನೌನ್ಸ್ ಮಾಡಿದೆ. ಹೌದು, “ಗಿರಿಕಥೆ’ ಚಿತ್ರದಲ್ಲಿ ರಿಷಭ್ ಶೆಟ್ಟಿಗೆ ನಾಯಕಿಯರಾಗಿ ತಪಸ್ವಿನಿ ಮತ್ತು ರಚನಾ ಎಂಬ ಇಬ್ಬರು ನಟಿಮಣಿ ಯರು ಜೋಡಿಯಾಗುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಈ ಇಬ್ಬರನ್ನು ಚಿತ್ರಕ್ಕೆ ನಾಯಕಿಯರನ್ನಾಗಿ ಆಯ್ಕೆ ಮಾಡಲಾಗಿದ್ದು, ಶೀಘ್ರದಲ್ಲಿಯೇ ಈ ಇಬ್ಬರೂ ನಾಯಕಿಯರು ಚಿತ್ರತಂಡ ಸೇರಿಕೊಳ್ಳಲಿದ್ದಾರೆ.
………………………………………………………………………………………………………………………………………………………..
ಕೋವಿಡ್ ಬಂದ್ರೂ “ಭೂಮಿ ಬದಲಾಗಿಲ್ಲ ದೈವ ಕೈಬಿಟ್ಟಿಲ್ಲ..’ : ಕೋವಿಡ್ ಹಾವಳಿಯಿಂದ ಈ ವರ್ಷ ಚಿತ್ರರಂಗದ ಬಹುತೇಕ ಚಟುವಟಿಕೆಗಳು ಸ್ಥಗಿತಗೊಂಡಿದೆ. ಮತ್ತೂಂದೆಡೆ ಅದೆಷ್ಟೋಕಲಾವಿದರು, ತಂತ್ರಜ್ಞರು, ಕಾರ್ಮಿಕರು ಸಿನಿಮಾರಂಗದಲ್ಲಿಕೆಲಸವಿಲ್ಲದೆ ಕಂಗಾಲಾಗಿದ್ದಾರೆ.
ಇದೇ ವೇಳೆ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಮತ್ತುಕಾರ್ಮಿಕರಿಗೆ ಧೈರ್ಯ ತುಂಬುವ ಸಲುವಾಗಿ ಈ ನಿಟ್ಟಿನಲ್ಲಿ ಡಿ.ಎಸ್ ಮ್ಯಾಕ್ಸ್ ಸಂಸ್ಥೆಯಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಸ್.ಪಿ ದಯಾನಂದ್ “ಭೂಮಿ ಬದಲಾಗಿಲ್ಲ, ದೈವ ಕೈಬಿಟ್ಟಿಲ್ಲ..’ ಎಂಬ ಕೋವಿಡ್ ಜಾಗೃತಿ ಗೀತೆಯನ್ನು ನಿರ್ಮಾಣ ಮಾಡಿದ್ದಾರೆ. ಯುವ ಪ್ರತಿಭೆ ಅಭಿಲಾಷ್ ಜಿ.ವಿ ಈ ಗೀತೆಯನ್ನು ರಚಿಸಿ, ಹಾಡಿದ್ದಾರೆ. ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.
ನಾವು ಮುನ್ನೆಚ್ಚರಿಕೆಯಿಂದ ಇದ್ದರೆ ಕೋವಿಡ್ ನ್ನು ಹೋಗಲಾಡಿಸುವುದು ಕಷ್ಟದಕೆಲಸವೇನಲ್ಲ ಎಂಬ ಸಾರಾಂಶವಿರುವ ಈ ಹಾಡಿನಲ್ಲಿ ವರನಟ ಡಾ. ರಾಜಕುಮಾರ್, ಸಾಹಸಸಿಂಹ ವಿಷ್ಣುವರ್ಧನ್,ಕರಾಟೆ ಕಿಂಗ್ ಶಂಕರ ನಾಗ್, ರೆಬೆಲ್ಸ್ಟಾರ್ ಅಂಬರೀಶ್ ಅವರ ಧ್ವನಿ ಅನುಕರಣೆ ಮಾಡುವ ಮೂಲಕಕೋವಿಡ್ ಬಗ್ಗೆ ಎಚ್ಚರಿಸಲಾಗಿದೆ. ಈ ಹಾಡಿಗೆ ಅನಂತ್ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ. ಪಳನಿ ಡಿ ಸೇನಾಪತಿ ಹಾಡಿಗೆ ಮಾಸ್ಟರಿಂಗ್ ಮಿಕ್ಸಿಂಗ್ ಮಾಡಿದ್ದಾರೆ. ಉಳಿದಂತೆ ಈ ಗೀತೆಗೆ ಪ್ರಶಾಂತ್ ಎಂ. ಯಾದವ್ ಛಾಯಾಗ್ರಹಣ, ರಾಘವೇಂದ್ರಕೆ.ಆರ್ ಸಂಕಲನ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಹಾಡಿಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
MUST WATCH
ಹೊಸ ಸೇರ್ಪಡೆ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ