ದೇಶದಲ್ಲಿ ಅಲ್‌ಕಾಯಿದಾ ಉಗ್ರ ಜಾಲ ಅಸಡ್ಡೆ ಸಲ್ಲ


Team Udayavani, Sep 22, 2020, 6:11 AM IST

ದೇಶದಲ್ಲಿ ಅಲ್‌ಕಾಯಿದಾ ಉಗ್ರ ಜಾಲ ಅಸಡ್ಡೆ ಸಲ್ಲ

ಸಾಂದರ್ಭಿಕ ಚಿತ್ರ

ಅಲ್‌ಕಾಯಿದಾ ಉಗ್ರ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದ ಆರೋಪದ ಮೇಲೆ 9 ಜನರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ಬಂಧಿಸಿದ್ದು, ಬಹುದೊಡ್ಡ ಅಪಾಯದಿಂದ ದೇಶ ಪಾರಾದಂತಾಗಿದೆ. ಇವರೆಲ್ಲ ರಾಷ್ಟ್ರ ರಾಜಧಾನಿ ದಿಲ್ಲಿ, ಬಿಹಾರದಲ್ಲಿನ ಭದ್ರತಾ ಘಟಕಗಳು, ಬೆಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಆದರೆ, ಪ್ರಬಲ ಸಾಕ್ಷ್ಯಾಧಾರಗಳ ಬಲದ ಮೇಲೆ ಎಷ್ಟು ತ್ವರಿತವಾಗಿ ಎನ್‌ಐಎ ಕಾರ್ಯಾಚರಣೆ ನಡೆಸಿದೆಎಂದರೆ, ಆರೋಪಿಗಳ ಸಂಚು ವಿಫ‌ಲವಾಗಿದೆ.

ಈ ರೀತಿ ಆಗುತ್ತಿರುವುದು ಇದೇ ಮೊದಲ ಬಾರಿಯೇನೂ ಅಲ್ಲ. ಅಲ್‌ಕಾಯಿದಾ, ಇಸ್ಲಾಮಿಕ್‌ ಸ್ಟೇಟ್‌, ಹಿಜ್ಬುಲ್‌ ಸೇರಿದಂತೆ ಇತರೆ ಉಗ್ರ ಸಂಘಟನೆಗಳ ಭಯೋತ್ಪಾದಕರು ಸಿಕ್ಕಿ ಬೀಳುತ್ತಲೇ ಇದ್ದಾರೆ. ಸ್ವಾತಂತ್ರೊéàತ್ಸವ, ಗಣರಾಜ್ಯೋತ್ಸವ ಮತ್ತು ಹಬ್ಬಗಳಂದು ಭಯೋತ್ಪಾದನಾ ಕೃತ್ಯಗಳ ಅಪಾಯ ಹೆಚ್ಚಿಬಿಟ್ಟಿರುತ್ತದೆ. ಒಟ್ಟಲ್ಲಿ ಈಗಿನ ಬಂಧನಗಳಿಂದ ಸ್ಪಷ್ಟವಾಗುತ್ತಿರುವ ಅಂಶವೆಂದರೆ, ಈ ಉಗ್ರರ ನೆಟ್ ವರ್ಕ್ ದೇಶಾದ್ಯಂತ ಹರಡಿದೆ ಹಾಗೂ ತಮ್ಮ ದುರುದ್ದೇಶ ಸಾಧನೆಗಾಗಿ ಈ ಜಾಲ ಪ್ರಬಲ ಪ್ರಯತ್ನದಲ್ಲಿ ತೊಡಗಿದೆ ಎನ್ನುವುದು. ಪಶ್ಚಿಮ ಬಂಗಾಲ, ಕೇರಳ, ಝಾರ್ಖಂಡ್‌, ಉತ್ತರಪ್ರದೇಶ, ಕಾಶ್ಮೀರದಲ್ಲಿ ಉಗ್ರರ ಜಾಲ ಸಕ್ರಿಯವಾಗಿದೆ ಎಂದು ತನಿಖಾ ಸಂಸ್ಥೆಗಳು ಆಗಾಗ ಹೇಳುತ್ತಲೇ ಇರುತ್ತವೆ.

ಭಾರತದಲ್ಲಿ ಸಕ್ರಿಯವಾಗಿರುವ ಇಂಥ ಉಗ್ರ ಜಾಲಗಳ ಹಿಂದೆ ಪಾಕಿಸ್ಥಾನದ ಸರಕಾರ ಹಾಗೂ ಐಎಸ್‌ಐನ ಕೈವಾಡವಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಎನ್‌ಐಎ ಕೈಗೆ ಈಗ ಸಿಕ್ಕಿಬಿದ್ದಿರುವ ಪಾತಕಿಗಳೂ ಸಹ, ಪಾಕಿಸ್ಥಾನದಲ್ಲಿ ಕುಳಿತ ಮಾಸ್ಟರ್‌ಮೈಂಡ್‌ಗಳ ಆದೇಶದಂತೆ ತಾವು ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ಅಲ್‌ಕಾಯಿದಾ ಮತ್ತು ಐಸಿಸ್‌ ಉಗ್ರರ ಬಹುದೊಡ್ಡ ನೆಲೆಯಾಗಿ ಬದಲಾಗಿರುವ ಪಾಕಿಸ್ಥಾನವೀಗ, ಡಿಜಿಟಲ್‌ ಮಾಧ್ಯಮದ ಮೂಲಕ(ಅದರಲ್ಲೂ ಡಾರ್ಕ್‌ ವೆಬ್‌ ಮೂಲಕ) ವಿದೇಶಗಳಲ್ಲಿರುವ ಯುವಕರ ಬ್ರೈನ್‌ವಾಶ್‌ ಮಾಡುವ ಕುಕೃತ್ಯಕ್ಕೆ ವೇಗ ನೀಡಿಬಿಟ್ಟಿದೆ. ಮೂಲಭೂತವಾದದ ಮದವೇರಿಸಿಕೊಂಡ ಯುವಕರು ಪಾಕ್‌ನ ಕೈಗೊಂಬೆಯಾಗಿ ತಾವು ಹುಟ್ಟಿದ ನೆಲದಲ್ಲೇ ವಿಧ್ವಂಸ ಎಸಗಲು ಸಜ್ಜಾಗಿಬಿಡುತ್ತಾರೆ.

ಕಳೆದ ವರ್ಷ ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ಈಸ್ಟರ್‌ ಹಬ್ಬದ ವೇಳೆ ಚರ್ಚ್‌ ಮತ್ತು ಪಂಚತಾರಾ ಹೊಟೇಲ್‌ನ ಮೇಲೆ ನಡೆದ ಭಯೋತ್ಪಾದನಾ ದಾಳಿಯಲ್ಲಿ 250ಕ್ಕೂ ಅಧಿಕ ಜನ ಮೃತಪಟ್ಟಿದ್ದರು. ಆ ದಾಳಿಯ ಹಿಂದೆಯೂ ಐಸಿಸ್‌ ಹಾಗೂ ಅಲ್‌ಕಾಯಿದಾ ಕೈವಾಡವಿತ್ತು. ಪಾಕಿಸ್ಥಾನವೀಗ ಇವೆರಡೂ ಉಗ್ರ ಸಂಘಟನೆಗಳಿಂದ ಭಾರತದ ಮೇಲೆ ಇಂಥದ್ದೇ ಕೃತ್ಯ ಎಸಗಿಸಲು ಪ್ರಯತ್ನಿಸುತ್ತಿದೆ.

ಗುಪ್ತಚರ ದಳದ ಅಧಿಕಾರಿಗಳ ಪ್ರಕಾರ ಅಲ್‌ಕಾಯಿದಾ ಈಗ ಪಶ್ಚಿಮ ಬಂಗಾಲ ದಲ್ಲಿ ತನ್ನ ಬೇರುಗಳನ್ನು ಭದ್ರವಾಗಿಸಿಕೊಂಡಿದೆ. ಬಾಂಗ್ಲಾದೇಶದ ನುಸುಳುಕೋರರಿಗೆಲ್ಲ ಮಮತಾ ಬ್ಯಾನರ್ಜಿ ರತ್ನಗಂಬಳಿ ಹಾಸುತ್ತಿರುವುದು ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತದೆ. ಇದು ನಿಜವೇ ಆಗಿದ್ದರೆ, ರಾಷ್ಟ್ರೀಯ ಭದ್ರತೆಗೆ ಮುಂದಿನ ದಿನಗಳಲ್ಲಿ ಬಹಳ ಅಪಾಯ ಎದುರಾಗಲಿದೆ. ದುರಂತವೆಂದರೆ, ಇಂಥ ವಿಚಾರಗಳಲ್ಲಿ ರಾಜಕೀಯ ಪಕ್ಷಗಳ ಧೋರಣೆಯೇ ಭಿನ್ನವಾಗಿದೆ. ಆರೋಪ-ಪ್ರತ್ಯಾರೋಪಗಳ ಸುರಿಮಳೆಯೇ ನಡೆದು, ಮುಖ್ಯ ವಿಚಾರ ಚರ್ಚೆಯಾಗುವುದೇ ಇಲ್ಲ. ಕಾನೂನು ಸುವ್ಯವಸ್ಥೆಯ ಪಾಲನೆಯಲ್ಲಿ ರಾಜ್ಯಗಳಿಗೆ ಹೆಚ್ಚು ಜವಾಬ್ದಾರಿ, ಅಧಿಕಾರ ಇರುತ್ತದೆ. ರಾಜ್ಯ ಸರಕಾರಗಳು ಇಂಥ ಉಗ್ರ ಜಾಲಗಳನ್ನು ಪುಡಿಯಾಗಿಸಲು ಮುಂದಾಗಬೇಕು. ನಿರಾಕರಣೆಯಿಂದ ತಾತ್ಕಾಲಿಕ ರಾಜಕೀಯ ಲಾಭವಾಗಬಹುದಷ್ಟೇ ಹೊರತು, ರಾಷ್ಟ್ರಕ್ಕೆ ಅಪಾಯ ಹೆಚ್ಚುತ್ತದೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.