ರಾಯನದುರ್ಗಕ್ಕೆ ಟ್ರಕ್ಕಿಂಗ್ ತೆರಳಿ ಹಿಂತಿರುವಾಗ ದಾರಿ ತಪ್ಪಿದ ಯುವಕರು! ಸಹಾಯಕ್ಕಾಗಿ ಮೊರೆ
Team Udayavani, Sep 26, 2020, 9:51 PM IST
ಚಿಕ್ಕಮಗಳೂರು: ಟ್ರಕ್ಕಿಂಗ್ ಗೆ ತೆರಳಿದ ನಾಲ್ವರು ಯುವಕರ ತಂಡ ಹಿಂತಿರುಗಿ ಬರುವ ವೇಳೆ ದಾರಿತಪ್ಪಿ ಸಹಾಯಕ್ಕಾಗಿ ಅಂಗಲಾಚುತ್ತಿರುವ ಘಟನೆ ಮೂಡಿಗೆರೆ ತಾಲೂಕಿನ ಬಾಳೂರು ಮೀಸಲು ಅರಣ್ಯದಲ್ಲಿ ಶನಿವಾರ ಸಂಭವಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಕ್ಕೆ ಬಂದಿದ್ದ ನಾಲ್ವರು ಯುವಕರು ರಾಣಿ ಝರಿಯಿಂದ ಬಲ್ಲಾಳ ರಾಯನದುರ್ಗಕ್ಕೆ ಟ್ರಕ್ಕಿಂಗ್ ತೆರಳಿ ವಾಪಸು ಕೊಟ್ಟಿಗೆಹಾರಕ್ಕೆ ಬರುವ ಸಂದರ್ಭ ದಾರಿ ತಪ್ಪಿ ಅರಣ್ಯ ಪ್ರದೇಶದೊಳಗೆ ಸೇರಿಕೊಂಡಿದ್ದಾರೆ ಪರಿಣಾಮ ಅವರಲ್ಲಿರುವ ಮೊಬೈಲ್ ಕೂಡ ನೆಟ್ ವರ್ಕ್ ಸಿಗದೆ ಸಂಪರ್ಕ ಕಷ್ಟ ಸಾಧ್ಯವಾಗಿದೆ, ಕೆಲವೊಮ್ಮೆ ಸಂಪರ್ಕ ಸಿಕ್ಕರೂ ಯುವಕರಿಗೆ ಸುತ್ತಲೂ ಅರಣ್ಯ ಇರುವ ಪ್ರದೇಶವಾದ್ದರಿಂದ ಅರಣ್ಯ ಅಧಿಕಾರಿಗಳಿಗೆ ತಾವು ಎಲ್ಲಿ ಇದ್ದೇವೆ ಎಂದು ಹೇಳಲೂ ಸಾಧ್ಯವಾಗದೆ ತಮ್ಮ ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದ ಅರಣ್ಯ ಅಧಿಕಾರಿಗಳಿಗೂ ಗೊಂದಲ ಉಂಟಾಗಿದ್ದು ಯಾವ ಪ್ರದೇಶದಲ್ಲಿ ಇದ್ದಾರೆ ಎಂಬ ಸ್ಪಷ್ಟ ವಿವರ ಇಲ್ಲದೆ ದಟ್ಟ ಅರಣ್ಯ ಪ್ರದೇಶದಲ್ಲಿ ಹುಡುಕುವುದು ಕಷ್ಟ ಸಾಧ್ಯವಾಗಿದೆ.
ಇದನ್ನೂ ಓದಿ ;ಕೆಕೆಆರ್ ಬಿಗಿ ಬೌಲಿಂಗ್; 142 ರನ್ ಪೇರಿಸಿದ ಸನ್ರೈಸರ್ ಹೈದರಾಬಾದ್
ವಿಷಯ ತಿಳಿದ ಕೂಡಲೇ ಅರಣ್ಯ ಸಿಬ್ಬಂದಿಗಳು ಹಾಗೂ ಸ್ಥಳೀಯರು ಯುವಕರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.