ಪರ್ಯಾಯ ಸಪ್ಲೈ ಸರಪಳಿಗಾಗಿ ಕರೆ; ಚೀನ ವಿರುದ್ಧ ಮೋದಿ ಪರೋಕ್ಷ ಸಮರ


Team Udayavani, Sep 29, 2020, 6:15 AM IST

ಪರ್ಯಾಯ ಸಪ್ಲೈ ಸರಪಳಿಗಾಗಿ ಕರೆ; ಚೀನ ವಿರುದ್ಧ ಮೋದಿ ಪರೋಕ್ಷ ಸಮರ

ಹೊಸದಿಲ್ಲಿ: ಜಾಗತಿಕ ಸಪ್ಲೈ ಚೈನ್‌ಗಳ ಮೇಲೆ ಅತಿಯಾದ ಅವಲಂಬನೆ ಸಲ್ಲದು ಎಂದು ಕೊರೊನಾ ವೈರಾಣು ಇಡೀ ಜಗತ್ತಿಗೆ ಪಾಠ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸೋಮವಾರ ನಡೆದ ಭಾರತ-ಡೆನ್ಮಾರ್ಕ್‌ ವರ್ಚುವಲ್‌ ದ್ವಿಪಕ್ಷೀಯ ಸಭೆಯಲ್ಲಿ ಮಾತನಾಡಿದ ಅವರು, “”ದೊಡ್ಡ ಯಂತ್ರೋಪಕರಣದಿಂದ ಹಿಡಿದು ಅತ್ಯಗತ್ಯ ಬಳಕೆಯ ವಸ್ತುಗಳ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳು ಕೇವಲ ಒಂದು ದೇಶದಿಂದ ಮಾತ್ರ ಇಡೀ ಜಗತ್ತಿಗೆ ಸರಬರಾಜಾಗುತ್ತಿವೆ. ಇಂಥ ಏಕೈಕ ಸರಪಳಿ ಮೇಲೆ (ಸಪ್ಲೈ ಚೈನ್‌) ನಾವು ಅವಲಂಬಿತವಾದರೆ, ಭವಿಷ್ಯದಲ್ಲಿ ಅದು ಹಲವಾರು ಅನನುಕೂಲಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಕೋವಿಡ್ ನಮಗೆ ತೋರಿಸಿಕೊಟ್ಟಿದೆ. ಆದ್ದರಿಂದ ಭಾರತ, ಜಪಾನ್‌ ಮತ್ತು ಆಸ್ಟ್ರೇಲಿಯಾ ಕೈಜೋಡಿಸಿ ಹೊಸತೊಂದು ಸಪ್ಲೈ ಚೈನ್‌ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ನಮ್ಮಿ ಪ್ರಯತ್ನಕ್ಕೆ ಸಮಾನ ಮನಸ್ಕರು ಬಂದು ಕೈ ಜೋಡಿಸಬಹುದು” ಎಂದಿದ್ದಾರೆ.

ಸಮಾವೇಶದಲ್ಲಿ ಮಾತನಾಡಿದ್ದ ಡೆನ್ಮಾರ್ಕ್‌ ಪ್ರಧಾನಿ ಮೆಟ್ಟರ್‌ ಫ್ರೆಡ್ರಿಕ್‌ಸನ್‌ ಅವರು, 2ನೇ ಜ್ಞಾನ ಸಮ್ಮೇಳನ ಆಯೋಜಿಸುವಂತೆ ನೀಡಿದ ಸಲಹೆಯನ್ನು ಮೋದಿ ಸ್ವಾಗತಿಸಿದರು.

ಗಡಿಯಲ್ಲಿ ಬ್ರಹ್ಮೋಸ್‌, ನಿರ್ಭಯ್‌
ಭಾರತ-ಚೀನ ಗಡಿ ರೇಖೆಗೆ ಸಮೀಪವಿರುವ ತನ್ನ ಪ್ರಾಂತ್ಯಗಳಾದ ಟಿಬೆಟ್‌, ಕ್ಸಿನ್‌ಜಿಯಾಂಗ್‌ನಲ್ಲಿ ಸುಮಾರು 2,000 ಕಿ.ಮೀ. ದೂರದವರೆಗೆ ಸಾಗಬಲ್ಲ ಸಿಡಿಮದ್ದುಗಳನ್ನು ತಂದಿರಿಸಿದೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡ, ಗಡಿ ರೇಖೆ ಬಳಿಯ ತನ್ನ ನೆಲದಲ್ಲಿ 500 ಕಿ.ಮೀ.ವರೆಗೆ ಸಾಗಬಲ್ಲ ಬ್ರಹ್ಮೋಸ್‌, 800 ಕಿ.ಮೀ.ವರೆಗೆ ಸಾಗಬಲ್ಲ ನಿರ್ಭಯ್‌ ಹಾಗೂ ಆಕಾಶ್‌ ಎಂಬ ಸಫೇìಸ್‌-ಟು-ಏರ್‌ ಕ್ಷಿಪಣಿಗಳನ್ನು ತಂದು ನಿಲ್ಲಿಸಿದೆ. ಯಾವುದೇ ಪ್ರಕ್ಷುಬ್ಧ ಪರಿಸ್ಥಿತಿ ಉದ್ಭವವಾದರೂ ತಕ್ಷಣವೇ ಅವುಗಳನ್ನು ಬಳಸುವಂತೆ ಅವುಗಳನ್ನು ಸನ್ನದ್ಧಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಚೀನ ಪಡೆ, ಅಕ್ಸಾಯ್‌ ಚಿನ್‌ ಪ್ರಾಂತ್ಯದಲ್ಲಿ ಮೊದಲು ತನ್ನ ಕ್ಷಿಪಣಿಗಳನ್ನು ನೆಲೆ ನಿಲ್ಲಿಸಿತ್ತು. ಈಗ ನೈಜ ಗಡಿ ರೇಖೆಯ 3,488 ಕಿ.ಮೀ. ಉದ್ದಕ್ಕೂ ಇರುವ ಚೀನ ವ್ಯಾಪ್ತಿಯೊಳಗಿನ ಕಶರ್‌, ಹೊಟಾನ್‌, ಲ್ಹಾಸಾ ಹಾಗೂ ನ್ಯಿಂಗ್‌ ಚಿ ಪ್ರಾಂತ್ಯದಲ್ಲೂ ಶಕ್ತಿಶಾಲಿ ಕ್ಷಿಪಣಿಗಳನ್ನು ತಂದಿರಿಸಿದೆ.

ಸೇನಾ ಔಟ್‌ಪೋಸ್ಟ್‌ ನಿರ್ಮಾಣ
ಮತ್ತೂಂದೆಡೆ, ದಕ್ಷಿಣ ಚೀನ ಸಮುದ್ರದಲ್ಲಿ ಡ್ರ್ಯಾಗನ್‌ ರಾಷ್ಟ್ರ, ಸೇನಾ ಗಡಿಠಾಣೆಗಳನ್ನು ನಿರ್ಮಿಸಲಾರಂಭಿಸಿದೆ ಎಂದು ಅಮೆರಿಕ ಆಪಾದಿಸಿದೆ. ಸಮುದ್ರದಲ್ಲಿ ಕೃತಕ ದ್ವೀಪಗಳನ್ನು ಸೃಷ್ಟಿಸಿ, ಅಲ್ಲಿ ತನ್ನ ಸೇನಾ ಔಟ್‌ಪೋಸ್ಟ್‌ಗಳನ್ನು ನಿರ್ಮಿಸಲು ಸಜ್ಜಾಗಿದೆ. ಬ್ರುನೈ, ಮಲೇಷ್ಯಾ, ಫಿಲಿಪ್ಪೀನ್ಸ್‌, ತೈವಾನ್‌ ಹಾಗೂ ವಿಯೆಟ್ನಾಂಗಳ ಕರಾವಳಿ ತೀರಗಳಿಗೆ ಈ ಕೃತಕ ದ್ವೀಪಗಳು ಸಮೀಪದಲ್ಲಿವೆ ಎಂದು ಅಮೆರಿಕ ಹೇಳಿದೆ.

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.