ಭಾರತ-ಚೀನ ಗಡಿಗೆ “ನಿರ್ಭಯಾ” ಅಭಯ
ಶಬ್ದರಹಿತ ಸೂಪರ್ಸಾನಿಕ್ ನೌಕಾ ಕ್ಷಿಪಣಿ ನಿಯೋಜನೆ
Team Udayavani, Oct 2, 2020, 6:11 AM IST
ಹೊಸದಿಲ್ಲಿ: ಲಡಾಖ್ನ ಎಲ್ಎಸಿ ರಕ್ಷಣೆಗೆ ಶಬ್ದರಹಿತ ನೌಕಾ ಕ್ಷಿಪಣಿ “ನಿರ್ಭಯಾ’ವನ್ನು ನಿಯೋಜಿಸಲಾಗಿದೆ. ಡಿಆರ್ಡಿಒ ಅಭಿವೃದ್ಧಿಪಡಿಸಿದ “ನಿರ್ಭಯಾ’ ಕ್ಷಿಪಣಿಯ 7ನೇ ಔಪಚಾರಿಕ ಪ್ರಯೋಗ ಮುಂದಿನ ತಿಂಗಳು ನಡೆಯಲಿದೆ. ಆದರೂ ಕೆಲವು ಕ್ಷಿಪಣಿಗಳನ್ನು ಈಗಾಗಲೇ ಎಲ್ಎಸಿಯ ಮುಂಚೂಣಿ ನೆಲೆಗಳಿಗೆ ಸೇನೆ ಕಳುಹಿಸಿಕೊಟ್ಟಿದೆ. ಈ ಸದೃಢ ರಾಕೆಟ್ ಬೂಸ್ಟರ್ ಕ್ಷಿಪಣಿ ಒಂದೇ ಹೊಡೆತದಲ್ಲಿ ಶೇ. 90ರಷ್ಟು ಪ್ರದೇಶಗಳನ್ನು ಆಕ್ರಮಿಸಬಲ್ಲದು. 24 ವಿವಿಧ ಸಿಡಿತಲೆಗಳ ಮೂಲಕ 1,000 ಕಿ.ಮೀ. ವಿಸ್ತಾರದವರೆಗೆ ದಾಳಿ ನಡೆಸಬಲ್ಲದು. 0.7 ಮ್ಯಾಕ್ ವೇಗ ದಲ್ಲಿ 400 ಕಿ.ಮೀ. ದೂರದಲ್ಲಿರುವ ಗುರಿಯ ಹುಟ್ಟಡಗಿಸಬಲ್ಲ ಸಾಮರ್ಥ್ಯ ಹೊಂದಿದೆ. ಹೊಸ ಪೀಳಿಗೆಯ ಈ ಕ್ಷಿಪಣಿ ಎಸ್ಎಫ್ಡಿಆರ್ ತಂತ್ರಜ್ಞಾನ ಹೊಂದಿದೆ. ಇದರ ನೆರವಿನಿಂದ “ನಿರ್ಭಯಾ’ ಸೂಪರ್ ಸಾನಿಕ್ ನೌಕಾ ಕ್ಷಿಪಣಿಯನ್ನು ಏರ್ ಟು ಏರ್ ಕ್ಷಿಪಣಿಯಾಗಿಯೂ ಬಳಸಬಹುದಾಗಿದೆ.
ಮತ್ತೂಂದು ಮಾತುಕತೆ
ಪೂರ್ವ ಲಡಾಖ್ನ ಎಲ್ಎಸಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನ ನಡುವೆ ರಾಜತಾಂತ್ರಿಕ ಮಟ್ಟ ದಲ್ಲಿ ಮತ್ತೂಂದು ಸುತ್ತಿನ ಮಾತುಕತೆ ನಡೆಯಿತು. ಎಲ್ಎಸಿ ಉದ್ದಕ್ಕೂ ಸ್ಥಿರತೆ ಕಾಪಾಡಿ ಕೊಳ್ಳುವ ಸಂಬಂಧ ಮಿಲಿಟರಿ ಕಮಾಂಡರ್ ಗಳು ನಡೆಸಿದ ಕೊನೆಯ ಸುತ್ತಿನ ಮಾತುಕತೆಯ ಫಲಿತಾಂಶವನ್ನು ಕಾರ್ಯ ಗತ ಗೊಳಿಸಲು ಡಬ್ಲ್ಯೂಎಂಸಿಸಿ ಸಭೆ ಸೇರಿತ್ತು.
“ಇತ್ತೀಚೆಗೆ ನಡೆದ 19ನೇ ವರ್ಕಿಂಗ್ ಮೆಕಾನಿಸಂ ಫಾರ್ ಕನ್ಸಲ್ಟೆಶನ್ ಆ್ಯಂಡ್ ಕೋ-ಆರ್ಡಿನೇಶನ್ (ಡಬ್ಲ್ಯೂಎಂಸಿಸಿ) ಸಭೆಯಲ್ಲಿ ಲಡಾಖ್ ಎಲ್ಎಸಿಯ ಉದ್ವಿಗ್ನತೆ ತಗ್ಗಿಸುವ ವಿಚಾರದಲ್ಲಿ ಪಾರದರ್ಶಕ ಮತ್ತು ವಿಸ್ತೃತ ಚರ್ಚೆಗಳು ನಡೆದಿವೆ. ಒಮ್ಮತದ ಮೂಲಕ ಸೇನೆ ವಾಪಸು ಕರೆಸಿಕೊಳ್ಳಲು ಉಭಯ ರಾಷ್ಟ್ರಗಳು ನಿರ್ಣಯಿಸಿವೆ.
ಟಾರ್ಗೆಟ್ 12 ಭೂಪ್ರದೇಶಗಳು!
ಲಡಾಖ್ನ 1,597 ಕಿ.ಮೀ. ವಿಸ್ತಾರದ ಎಲ್ಎಸಿ ಯಲ್ಲಿ ಚೀನ 1959ರ ಗರಿಷ್ಠ ನಕ್ಷಾಶಾಸ್ತ್ರೀಯ ಹಕ್ಕಿನ ಆಧಾರದ ಮೇಲೆ ಬಿಕ್ಕಟ್ಟು ಸೃಷ್ಟಿಸಲು ಯತ್ನಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 1959ರ ಗ್ರೀನ್ ಲೈನ್ (ಮಿಲಿಟರಿ ನಕ್ಷೆ) ಅನ್ನು ಚೀನದ ಅಂದಿನ ಪ್ರಧಾನಿ ಝಾವೋ, ಭಾರತದ ಪ್ರಧಾನಿ ಜವಾಹರ ಲಾಲ್ ನೆಹರೂ ಅವರಿಗೆ ಕಳುಹಿಸಿಕೊಟ್ಟಿದ್ದರು. ಇದರಲ್ಲಿ ಚೀನ ಲಡಾಖ್ ಎಲ್ಎಸಿಯ 12 ಭೂ ಪ್ರದೇಶಗಳ ಮೇಲೆ ತನ್ನ ಹಕ್ಕಿದೆ ಎಂದು ಪ್ರತಿಪಾದಿಸಿತ್ತು. 1959ರಲ್ಲಿನ ಚೀನದ ಪ್ರಸ್ತಾವವನ್ನು ಆಗಿನ ಪ್ರಧಾನಿ ನೆಹರೂ ಕೂಡ ತಿರಸ್ಕರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Charmadi ಘಾಟ್ನಲ್ಲಿ ಟಾಟಾ ಏಸ್ ಪಲ್ಟಿ
Prajadhwani 2; ಯಾದಗಿರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ಸಮಾವೇಶ
State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ
Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್
Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?