ಕಣ್ಮನ ಸೆಳೆಯುವ ಗೊಂಬೆಹಬ್ಬ

ಶರನ್ನವರಾತ್ರಿ ಆಚರಣೆ ಸಂದರ್ಭ ಕಂಡುಬರುವ ಪರಂಪರೆ

Team Udayavani, Oct 25, 2020, 7:11 PM IST

cm-tdy-1

ಚಿಕ್ಕಮಗಳೂರು: ಶರನ್ನವರಾತ್ರಿ ನಾಡಿನ ಬಹುದೊಡ್ಡ ಆಚರಣೆ. ನವರಾತ್ರಿಸಮಯದಲ್ಲಿ ಕರ್ನಾಟಕದಲ್ಲಿ ಗೊಂಬೆಹಬ್ಬಸಂಪ್ರದಾಯ. ದೇವಿಯೊಂದಿಗಿನ ಆತ್ಮೀಯತೆಯ ಬಿಂಬ. ಮೈಸೂರಿನಲ್ಲಿ ಗೊಂಬೆ ಜೋಡಣೆ ಮನೆ-ಮನೆಯ ಆಚರಣೆ.

ಕರುನಾಡಿನ ವಿವಿಧೆಡೆ ಮನೆ- ಮಂದಿರಗಳಲ್ಲಿ ನವರಾತ್ರಿಯ ಸಂದರ್ಭದಲ್ಲಿ ಗೊಂಬೆಯನ್ನು ಕೂರಿಸುವ ಪರಿಪಾಠವಿದೆ.ಚಿಕ್ಕಮಗಳೂರಿನಲ್ಲಿ ಪೀಠೊಪಕರಣಗಳ ಅಂಗಡಿಯೊಂದರಲ್ಲಿ ವೈಶಿಷ್ಟ್ಯ ಪೂರ್ಣವಾಗಿ “ರಾಯಲ್‌ ಓಕ್‌ ಗೊಂಬೆ ವೈಭವ’ ಗಮನ ಸೆಳೆಯುತ್ತಿದೆ. ಮಹಾಲಯ ಅಮವಾಸ್ಯೆಯಿಂದ ರಾಯಲ್‌ ಓಕ್‌ನ್ನುಗೊಂಬೆಗಳು ಆವರಿಸಿದ್ದು ವಿಜಯ ದಶಮಿಯವರೆಗೆ ಪ್ರದರ್ಶನವಿದೆ. ನಗುವ ಬುದ್ಧ, ಸುಂದರ ಹೂವಿನ ಗಿಡ, ಬಣ್ಣ- ಬಣ್ಣದಿಂದ ಮಿನುಗುವ ದೀಪಗಳು ಕೈಬೀಸಿ ಕರೆಯುತ್ತಿವೆ.

ಕೆ.ಎಂ. ರಸ್ತೆಯ ಎಪಿಎಂಸಿ ಮುಂಭಾಗದಮಂಜುಶ್ರೀ ಕಟ್ಟಡದಲ್ಲಿರುವ ಅಂತಾರಾಷ್ಟ್ರೀಯ ಗೃಹೋಪಯೋಗಿ ಪೀಠೊಪಕರಣಗಳ ಮಾರಾಟ ಮಳಿಗೆ “ರಾಯಲ್‌ ಓಕ್‌’ಪ್ರಾರಂಭಗೊಂಡು ನ.7ಕ್ಕೆ ವರ್ಷ ತುಂಬಲಿದೆ. ಪ್ರಥಮ ವಾರ್ಷಿಕೋತ್ಸವದ ಹೊಸ್ತಿಲಲ್ಲಿ ದಸರಾ ಗೊಂಬೆ ವೈಭವದ ಮೂಲಕ ಸಾರ್ವಜನಿಕರಿಗೆ ಸ್ಮರಣೀಯ ಕೊಡುಗೆ ನೀಡುತ್ತಿದೆ. ಸಂಪ್ರದಾಯ-ಸಂಸ್ಕೃತಿ ನೆನಪಿಸುವುದರೊಂದಿಗೆ ಮನರಂಜನೆ ನೀಡುವ ಪ್ರಯತ್ನ ಮಾಡಿದೆ.

ಮಣ್ಣಿನಿಂದಲೇ ಮಾಡಿದ ಗೊಂಬೆಗಳು ಪರಿಸರ ಸ್ನೇಹಿ ಸಂದೇಶ ನೀಡುತ್ತಿವೆ. ಮೈ‌ಸೂರು, ಚನ್ನಪಟ್ಟಣ, ಬೆಂಗಳೂರು, ಕೊಲ್ಲಾಪುರ ಸೇರಿದಂತೆ ವಿವಿಧೆಡೆಯಿಂದ ಆರುನೂರಕ್ಕೂ ಹೆಚ್ಚು ಬಣ್ಣಬಣ್ಣದ ಗೊಂಬೆಗಳನ್ನು ಆರಿಸಿ ತರಲಾಗಿದೆ ಎಂದು ಮಾಲೀಕ ಪಿ.ಆರ್‌. ಅಮರನಾಥ್‌ ತಿಳಿಸಿದರು.

ಸುಮಾರು 700ಕ್ಕೂ ಹೆಚ್ಚು ಗೊಂಬೆಗಳು ಆಕರ್ಷಕ ಭಂಗಿಯಲ್ಲಿವೆ ವಿವಿಧ ಬಣ್ಣಗಳ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿದುರ್ಗೆ, ಮಹಾಗೌರಿ, ಸಿದ್ಧಿರಾತ್ರಿ ಹೀಗೆ ನವದುರ್ಗೆಯರ ಒಂಭತ್ತು ಅವತಾರಗಳ ಸುಂದರ ಗೊಂಬೆಗಳು ಅನಾವರಣಗೊಂಡಿವೆ. ಅಷ್ಟಲಕ್ಷ್ಮಿಯರ ಗೊಂಬೆಗಳಿವೆ. ಸಪ್ತಮಾತೃಕೆಯರಾದ ಸರಸ್ವತಿ-ಮಾಹೇಶ್ವರಿ-ಕಾತ್ಯಾಯಿನಿ-ಲಕ್ಷ್ಮೀ-ವರಾಥಹಿ-ಇಂದ್ರಾಣಿ ಮತ್ತು ಚಾಮುಂಡ ಸಾತ್‌ ನೀಡಿದ್ದಾರೆ.

ಮತ್ಸ್ಯಾವತಾರ, ಕೂರ್ಮಾವತಾರ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ.. ಹೀಗೆ ಮಹಾವಿಷ್ಣುವಿನ ದಶಾವತಾರದ ಗೊಂಬೆಗಳಿವೆ. ವ್ಯಾಸ, ಅಗಸ್ತ್ಯ, ವಸಿಷ್ಠ, ವಿಶ್ವಾಮಿತ್ರರನ್ನೊಳಗೊಂಡ ಸಪ್ತಋಷಿಗಳೂ ಹಾಗೂ ಶಂಕರಾಚಾರ್ಯರು, ರಾಮಾನುಜಾ ಚಾರ್ಯರು, ಮಧ್ವಾಚಾರ್ಯವನ್ನು ಒಳಗೊಂಡ “ಯತಿ ಪರಂಪರೆ’, ಸಂಗೀತ ವಿದ್ವಾಂಸ ಶಾಮಾಶಾಸ್ತ್ರಿಗಳು, ಹರಿದಾಸರು- ಪುರಂದರ- ಕನಕದಾಸರನ್ನೊಳಗೊಂಡ “ದಾಸ ಪರಂಪರೆ’ಯ ಗೊಂಬೆ ಇರಿಸಲಾಗಿದೆ.

ಶ್ರೀಮಂತ ಸಂಸ್ಕೃತಿಯ ಪ್ರತೀಕವಾದ ಗೊಂಬೆ ಹಬ್ಬವನ್ನು ಜೀವಂತವಾಗಿಡುವ ಸಾರ್ಥಕ ಪ್ರಯತ್ನವಿದು. ಸವಿತಾ- ಪಿ.ಆರ್‌.ಅಮರ್‌ ನಾಥ್‌ ದಂಪತಿಯ ಕ್ರಿಯಾಶೀಲತೆಯಿಂದ “ರಾಯಲ್‌ ಓಕ್‌ ದಸರಾ ಗೊಂಬೆ ವೈಭವ ಖುಷಿ ನೀಡುತ್ತಿದೆ ಎಂದು ಪ್ರೇಕ್ಷಕ ಎಂ.ಎನ್‌. ರಾಕೇಶ ಶ್ಲಾಘಿಸಿದರು.

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು

Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು

Chikkmagaluru; ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ

Chikkmagaluru; ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ

10-mudigere

Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.