ಅಮೋಘ ಚೇಸಿಂಗ್‌; ವೆಲಾಸಿಟಿ ವಿಕ್ರಮ


Team Udayavani, Nov 4, 2020, 11:15 PM IST

IPLಅಮೋಘ ಚೇಸಿಂಗ್‌; ವೆಲಾಸಿಟಿ ವಿಕ್ರಮ

ಶಾರ್ಜಾ: ಬಹಳ ರೋಚಕವಾಗಿ ಆರಂಭಗೊಂಡ ವನಿತಾ ಚಾಲೆಂಜರ್‌ ಟಿ20 ಸರಣಿಯಲ್ಲಿ ವೆಲಾಸಿಟಿ ತಂಡ ಕಳೆದೆರಡು ಬಾರಿಯ ಚಾಂಪಿಯನ್‌ ಸೂಪರ್‌ನೋವಾಸ್‌ ವಿರುದ್ಧ 5 ವಿಕೆಟ್‌ ಅಂತರದ ಅಮೋಘ ಜಯ ಸಾಧಿಸಿದೆ. ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಸೂಪರ್‌ನೋವಾಸ್‌ 8 ವಿಕೆಟಿಗೆ 126 ರನ್‌ ಗಳಿಸಿದರೆ, ಮಿಥಾಲಿ ರಾಜ್‌ ನಾಯಕತ್ವದ ವೆಲಾಸಿಟಿ ಒಂದು ಎಸೆತ ಬಾಕಿ ಇರುವಾಗ 5 ವಿಕೆಟಿಗೆ 129 ರನ್‌ ಬಾರಿಸಿ ಗೆದ್ದು ಬಂದಿತು.

ವಿಜೇತ ತಂಡದ ಪರ ದಕ್ಷಿಣ ಆಫ್ರಿಕಾದ ಸುನೆ ಲುಸ್‌ ಭರ್ಜರಿ ಬ್ಯಾಟಿಂಗ್‌ ನಡೆಸಿ ತಂಡವನ್ನು ದಡ ಮುಟ್ಟಿಸಿದರು. ಅವರ ಗಳಿಕೆ 21 ಎಸೆತಗಳಿಂದ ಅಜೇಯ 37 ರನ್‌ (4 ಬೌಂಡರಿ, 1 ಸಿಕ್ಸರ್‌). ಸುಷ್ಮಾ ವರ್ಮ 34, ಕನ್ನಡತಿ ವೇದಾ ಕೃಷ°ಮೂರ್ತಿ 29 ಮತ್ತು ಶಫಾಲಿ ವರ್ಮ 17 ರನ್‌ ಮಾಡಿದರು.

ಇದಕ್ಕೂ ಮುನ್ನ ಸೂಪರ್‌ನೋವಾಸ್‌ ಪರ ಚಾಮರಿ ಅತಪಟ್ಟು ಮತ್ತು ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಬಿರುಸಿನ ಆಟವಾಡಿದರು. ಉಳಿದಂತೆ ವೆಲಾಸಿಟಿ ತಂಡದ ಏಕ್ತಾ ಬಿಷ್ಟ್ 3, ಲೀಗ್‌ ಕ್ಯಾಸ್ಪರೆಕ್‌ ಮತ್ತು ಜಹನಾರಾ ಆಲಂ ತಲಾ 2 ವಿಕೆಟ್‌ ಉರುಳಿಸಿದರು. ಚಾಮರಿ 39 ಎಸೆತಗಳಿಂದ 44 ರನ್‌ ಹೊಡೆದರು. 2 ಬೌಂಡರಿ, 2 ಸಿಕ್ಸರ್‌ಗಳನ್ನು ಇದು ಒಳಗೊಂಡಿತ್ತು.

ಚಾಮರಿ ನಿರ್ಗಮನದ ಬಳಿಕ ಕೌರ್‌ ಬಿರುಸಿನ ಆಟದ ಸೂಚನೆ ನೀಡಿದರು. 27 ಎಸೆತಗಳಿಂದ, ಒಂದು ಬೌಂಡರಿ ಹಾಗೂ 2 ಸಿಕ್ಸರ್‌ ಸಿಡಿಸಿ 31 ರನ್‌ ಹೊಡೆದರು. ಆಗ ಆಲಂ ಈ ದೊಡ್ಡ ವಿಕೆಟ್‌ ಉರುಳಿಸಿ ತಂಡಕ್ಕೆ ಮೇಲುಗೈ ಒದಗಿಸಿದರು.

ಓಪನರ್‌ ಪ್ರಿಯಾ ಪೂನಿಯಾ 11 ರನ್ನಿಗೆ ಔಟಾದರೆ, ಭಾರತದ ಮತ್ತೋರ್ವ ಭರವಸೆಯ ಆಟಗಾರ್ತಿ ಜೆಮಿಮಾ ರೋಡ್ರಿಗಸ್‌ ಕೇವಲ 7 ರನ್‌ ಮಾಡಿ ಏಕ್ತಾ ಬಿಷ್ಟ್ ಎಸೆತದಲ್ಲಿ ಬೌಲ್ಡ್‌ ಆದರು.

ಲೀಗ್‌ ಕ್ಯಾಸ್ಪರೆಕ್‌ 6ನೇ ಓವರಿನಲ್ಲಿ ಪ್ರಿಯಾ ಪೂನಿಯಾ ವಿಕೆಟ್‌ ಕಿತ್ತು ವೆಲಾಸಿಟಿಗೆ ಮೊದಲ ಯಶಸ್ಸು ತಂದಿತ್ತರು. ಚಾಮರಿ ಅವರ ಬಿಗ್‌ ವಿಕೆಟ್‌ ಜಹನಾರಾ ಆಲಂ ಪಾಲಾಯಿತು. ಆಗಸಕ್ಕೆ ನೆಗೆದ ಚೆಂಡನ್ನು ವೇದಾ ಕೃಷ್ಟಮೂರ್ತಿ ಅಷ್ಟೇ ಸೊಗಸಾಗಿ ಕ್ಯಾಚ್‌ ಪಡೆದರು. ಬಿಷ್ಟ್ 20ನೇ ಓವರಿನ ಅಂತಿಮ 2 ಎಸೆತಗಳಲ್ಲಿ ವಿಕೆಟ್‌ ಬೇಟೆಯಾಡಿದರು.

ಸಂಕ್ಷಿಪ್ತ ಸ್ಕೋರ್‌:
ಸೂಪರ್‌ನೋವಾಸ್‌-8 ವಿಕೆಟಿಗೆ 126 (ಚಾಮರಿ 44, ಹರ್ಮನ್‌ಪ್ರೀತ್‌ 31, ಶಶಿಕಲಾ 18, ಬಿಷ್ಟ್ 22ಕ್ಕೆ 3, ಕ್ಯಾಸ್ಪರೆಕ್‌ 23ಕ್ಕೆ 2, ಆಲಂ 27ಕ್ಕೆ 2). ವೆಲಾಸಿಟಿ-19.5 ಓವರ್‌ಗಳಲ್ಲಿ 5 ವಿಕೆಟಿಗೆ 129 (ಲುಸ್‌ ಔಟಾಗದೆ 37, ಸುಷ್ಮಾ 34, ವೇದಾ 29, ಖಾಕಾ 27ಕ್ಕೆ 2).

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

INDWvsBANW: ಭಾರತಕ್ಕೆ 2-0 ಮುನ್ನಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.