ಶೆಟ್ಟಿಗಲ್ಲಿ ರಸ್ತೆಯಲ್ಲಿ ಮಣ್ಣಿನ ರಾಶಿ-ತೆರವಿಗೆ ನಿವಾಸಿಗಳ ಆಗ್ರಹ
Team Udayavani, Nov 6, 2020, 10:10 PM IST
ಬೆಳಗಾವಿ: ಕಳೆದ ಮೂರು ತಿಂಗಳಿಂದ ನಗರದ ಶೆಟ್ಟಿಗಲ್ಲಿಯ ಮುಖ್ಯ ಪ್ರವೇಶ ಮಾರ್ಗ ಮುಕ್ತ ಸಂಚಾರಕ್ಕೆ ದಿಗ್ಬಂಧನ ಹಾಕಲಾಗಿದೆ. ಹಳೇ ಪಿಬಿ ರಸ್ತೆಯನ್ನು ಕಾಂಕ್ರೀಟೀಕರಿಸುವ ನೆಪದಲ್ಲಿ ಶೆಟ್ಟಿಗಲ್ಲಿ ಪ್ರವೇಶದ ತಿರುವಿನಲ್ಲಿ ರಸ್ತಗೆ ಅಡ್ಡಲಾಗಿ ಮಣ್ಣು, ಕಲ್ಲಿನ ರಾಶಿಯ ದಿಬ್ಬವನ್ನು ಸೃಷ್ಟಿಸಲಾಗಿದೆ. ಅಟೋಗಳಾಗಲಿ, ಕಾರ್, ಟೆಂಪೋಗಳಾಗಲಿ ಈ ಮಾರ್ಗವಾಗಿ
ಸಂಚರಿಸಲಾಗದೆ ಪಕ್ಕದ ಚವಾಟಗಲ್ಲಿ ರಸ್ತೆಯಿಂದ ಸುತ್ತು ಹಾಕಿ ಶೆಟ್ಟಿಗಲ್ಲಿಯ ಇನ್ನೊಂದು ಬದಿಯಿಂದ ಬೀದಿ ಪ್ರವೇಶಿಸುವ
ಅನಿವಾರ್ಯತೆ ಇಲ್ಲಿನ ರಹವಾಸಿಗಳಿಗೆ ಕಳೆದ ಮೂರು ತಿಂಗಳಿನಿಂದ ಉಂಟಾಗಿದೆ.
ಮಣ್ಣಿನ ದಿನ್ನೆಯಲ್ಲೇ ದ್ವಿಚಕ್ರ ವಾಹನಗಳ ಸವಾರರು ಎದ್ದು-ಬಿದ್ದು ಹಾಯ್ದು ಹೋಗುತ್ತ ಹೇಗೋ ಹೊಂದಿಕೊಂಡಿದ್ದಾರೆ.
ಆದರೆ ಉಳಿದ ವಾಹನ ಸವಾರರು ಸುತ್ತು ಹೊಡೆಯಲೇ ಬೇಕಾಗಿದೆ. ಅಕ್ಕಪಕ್ಕದ ಬೇರೆ ಗಲ್ಲಿಗಳ ರಸ್ತೆಗಳು ಮುಕ್ತವಾಗಿದ್ದರೂ ಶೆಟ್ಟಿಗಲ್ಲಿಯ ಈ ರಸ್ತೆ ದಿಗ್ಬಂಧನ ಇಲ್ಲಿನ ರಹವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ನಿತ್ಯ ಕಚೇರಿ, ಶಾಲಾ
ಕಾಲೇಜುಗಳಿಗೆ ಹೋಗಿಬರುವ ಮಾರ್ಗವೂ ಇದಾಗಿದೆ. ಬೀದಿಯಲ್ಲಿನ ಕೆಲ ವಹಿವಾಟಿಗೂ ರಸ್ತೆ ದಿಗ್ಬಂಧನದಿಂದ ಸಮಸ್ಯೆಯಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಎಚ್ಚರಿಸಲಾಗಿದೆ. ಇದು ಪಾಲಿಕೆ ವ್ಯಾಪ್ತಿಗೆ ಬರುತ್ತದೋ,
ಇಲ್ಲವೇ ಲೋಕೋಪಯೋಗಿ ವ್ಯಾಪ್ತಿಗೋ ಎನ್ನುವ ಗೊಂದಲದಲ್ಲಿ ರಹವಾಸಿಗಳಿದ್ದಾರೆ. ತಕ್ಷಣ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಕಲ್ಲು ಮಣ್ಣಿನ ರಾಶಿಯನ್ನು ಸಂಬಂಧಪಟ್ಟ ಆಡಳಿತ ತೆರವುಗೊಳಿಸದಿದ್ದಲ್ಲಿ ಬೀದಿಯ ರಹವಾಸಿಗಳು ಹಳೇ ಪಿಬಿ ರಸ್ತೆಗಿಳಿದು ರಸ್ತೆತಡೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ