ಇದು ಸೋಲಲ್ಲ ನಿಜಕ್ಕೂ ನನ್ನ ಗೆಲುವು; ಈರಣ್ಣ ಗಿಡ್ಡಪ್ಪಗೋಳ
Team Udayavani, Nov 6, 2020, 10:05 PM IST
ಬೀಳಗಿ: ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕಾಗಿ ತಾಲೂಕಿನ ಪಿಕೆಪಿಎಸ್ ಕ್ಷೇತ್ರದಿಂದ ಸ್ಪ ರ್ಧಿಸಿ ಸೋತಿರುವೆ ನಿಜ. ಅದರೆ, ಈ
ಸೋಲು ನಿಜಕ್ಕೂ ನನಗೆ ಸೋಲಿನಂತೆ ಕಂಡಿಲ್ಲ. ನನ್ನ ಎದುರಾಳಿ ರಾಜಕೀಯ ದಿಗ್ಗಜನ ಮುಂದೆ ನನಗೆ ಸಿಕ್ಕ ಸೋಲು, ಗೆಲುವಿನಷ್ಟೇ ಸಂತಸ ತಂದಿದೆ ಎಂದು ಪಿಕೆಪಿಎಸ್ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಈರಣ್ಣ ಗಿಡ್ಡಪ್ಪಗೋಳ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪ್ರತಿಸ್ಪ ರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿರುವ
ಎಸ್.ಆರ್.ಪಾಟೀಲರು ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು. ನಾನು ರಾಜಕೀಯ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವವನು. ಪಿಕೆಪಿಎಸ್ ಕ್ಷೇತ್ರದ ಒಟ್ಟು 40 ಮತಗಳಲ್ಲಿ 15 ಮತಗಳು ನನಗೆ ಲಭಿಸಿರುವುದು ಗೆಲುವಿನ ಸಂತೋಷವನ್ನೇ ನೀಡಿದೆ ಎಂದರೆ ತಪ್ಪಾಗಲಾರದು. ಸೋಲು-ಗೆಲುವು ಸಹಜ. ಸೋಲಿನಲ್ಲೂ ಗೆಲುವಿನ ಖುಷಿ ನನಗಿದೆ. ನನ್ನ ಪ್ರತಿಸ್ಪ ರ್ಧಿಯಾದವರು ರೆಸಾರ್ಟ್ ರಾಜಕಾರಣ ಮಾಡಿರದಿದ್ದರೆ ಖಂಡಿತವಾಗಿಯೂ ಈ ವಿಜಯ ನನ್ನದಾಗಿರುತ್ತಿತ್ತು. ಆರೋಗ್ಯಕರ ಸ್ಪರ್ಧೆಯೊಡ್ಡಿ ರಾಜಕೀಯ ಕ್ಷೇತ್ರದ ದಿಗ್ಗಜರ ಮುಂದೆ 15 ಮತಗಳನ್ನು ಪಡೆದಿರುವುದು ಸಣ್ಣ ಮಾತಲ್ಲ. ಇದು ನನ್ನ ಗೆಲುವು ಎಂದು ಭಾವಿಸಿರುವೆ. ನನ್ನನ್ನು ಬೆಂಬಲಿಸಿದ ಎಲ್ಲ ಮತದಾರರಿಗೂ ಹಾಗೂ ಬಿಜೆಪಿ ಪಕ್ಷದ ಮುಖಂಡರಿಗೂ ಅಭಿನಂದಿಸುವೆ. ಅಲ್ಲದೆ, ಸದಾ ಪಕ್ಷದ ನಿಷ್ಠಾವಂತ ಸೇವಕನಾಗಿ ಕೆಲಸ ಮಾಡುವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು