ಸುಧಾಮೂರ್ತಿ ಅವರ ಮನದ ಮಾತು


Team Udayavani, Nov 7, 2020, 11:51 PM IST

ಸುಧಾಮೂರ್ತಿ ಅವರ ಮನದ ಮಾತು

ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಕನ್ನಡದ ಒಂದು ಕೃತಿಯ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.

ಕೊರೊನಾ ಕಾರಣದಿಂದ ಸಿಕ್ಕಿರುವ ಹೆಚ್ಚಿನ ಸಮಯವನ್ನು ನಾನು ಓದಿನ ಕಡೆಗೆ ಬಳಸಿಕೊಂಡೆ. ಹಲವು ಸಾಹಿತಿಗಳ ಉತ್ತಮ ಕೃತಿಗಳನ್ನು ಈ ಅವಧಿಯಲ್ಲಿ ಓದಿದ ನನ್ನನ್ನು ಹೆಚ್ಚು ಸೆಳೆದದ್ದು ಸುಧಾಮೂರ್ತಿ ಅವರ “ಮನದ ಮಾತು’ ಲೇಖನ ಸಂಕಲನ. ಓದಿ ಮುಗಿಸಿದ ಮೇಲೆ ಮತ್ತೂಮ್ಮೆ ಓದಬೇಕು ಎನ್ನುವಂಥ ಭಾವವನ್ನು ಈ ಕೃತಿ ಮೂಡಿಸಿದ್ದು ಇದರ ಶ್ರೇಷ್ಠತೆಗೆ ಸಾಕ್ಷಿ.
ಕೃತಿಯಲ್ಲಿ ನನಗೆ ಹೆಚ್ಚು ಪ್ರಿಯವಾದದ್ದು “ಕಪ್ಪು ಕಾನನದ ವಿಸ್ಮಯ’ ಬರಹ. ಆಫ್ರಿಕಾದ ಕಾಡುಗಳನ್ನು ಪರಿಚಯಿಸುವುದರ ಜತೆಗೆ ವೈವಿಧ್ಯಮಯ ಪ್ರಾಣಿಗಳ ಬಗ್ಗೆಯೂ ಇದರಲ್ಲಿ ಯಥೇತ್ಛ ಮಾಹಿತಿಗಳು ಸಿಕ್ಕಿವೆ. ಓದುತ್ತಾ ಓದುತ್ತಾ ಕಾಡಿನಲ್ಲಿ ಅಲೆದಾಡಿದ ಅನುಭವವಾಗಿದೆ.

“ಒಂದು ಮೊಳ ಮಲ್ಲಿಗೆ ಹೂ’ ನಮ್ಮ ಚಿಂತನೆಯ ಬಾಗಿಲನ್ನು ತೆರೆಯುತ್ತದೆ. ನಾವು ಸಹಾಯ ಮಾಡುವಾಗ ಮತ್ತೂಬ್ಬರನ್ನು ಮೆಚ್ಚಿಸುವ ಉದ್ದೇಶ ಇರಬಾರದು. ಸಹಾಯ ವನ್ನು ಆತ್ಮತೃಪ್ತಿಗಾಗಿ ಮಾಡಬೇಕು ಎನ್ನುವ ಮಾತುಗಳು ಮನಸ್ಪರ್ಶಿಯಾಗಿವೆ ಮತ್ತು ಹಲವರ ಮನಸ್ಸಿಗೆ ಕವಿದಿರುವ ಮೋಡವನ್ನು ಸರಿಸಲು ಸಹಾಯಕವಾಗುತ್ತವೆೆ.

ಸ್ತ್ರೀಯರು ಪೂಜಿಸಲ್ಪಡುವ ದೇಶ ಉನ್ನತ ಮಟ್ಟದಲ್ಲಿರುತ್ತದೆ ಎಂದು ಗಾಂಧೀಜಿ ಅವರು ಹೇಳಿದ್ದರು. ಈ ಕೃತಿಯಲ್ಲೂ ಸ್ತ್ರೀಯರ ಬಗೆಗೆ ಒಂದು ಲೇಖನವಿದೆ. “ಎಲ್ಲಿ ಸ್ತ್ರೀಯರನ್ನು ಪೂಜಿಸುತ್ತಾರೋ’ ಎಂಬ ಬರಹದಲ್ಲಿ ಹೆಣ್ಣು-ಗಂಡು ಭೇದದ ಬಗ್ಗೆ, ಗಂಡು ಮಗುವಿಗಾಗಿ ಹಂಬಲಿಸುವ ಈ ಪ್ರಪಂಚದಲ್ಲಿ ಹೆಣ್ಣಿನ ಮನದ ಭಾವನೆ, ತೊಳಲಾಟವನ್ನು ಯಾರೂ ಅರ್ಥೈಸಿ ಕೊಳ್ಳಲಾರರು ಮತ್ತು ಹೆಣ್ಣಿನ ಮಹತ್ವ ವನ್ನು ತಿಳಿದೂ ತಿಳಿಯದಂತೆ ಇರುತ್ತಾರೆ ಎನ್ನುವ ಮೂಲಕ ಹೆಣ್ಣಿನ ಮಹತ್ವವನ್ನು ತೆರೆದಿಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ಎಂದೊಡನೆ ನಮ್ಮ ಕಣ್ಣ ಮುಂದೆ ಬರುವುದು ವರ್ಣಭೇದ ನೀತಿ ವಿರುದ್ಧ ಹೋರಾಡಿದ ನೆಲ್ಸನ್‌ ಮಂಡೇಲ. ಅವರ ಬದುಕಿನ ಪ್ರತೀ ಅಂಶವನ್ನು ವಿವರಿ ಸುವ “ಮಂಡೇಲರ ನಾಡಿನಲ್ಲಿ’ ಎನ್ನುವ ಲೇಖನದಲ್ಲಿ ಕಪ್ಪು ಮತ್ತು ಬಿಳಿಯರ ನಡುವಿನ ತಾರತಮ್ಯ, ಕಪ್ಪು ವರ್ಣೀಯರ ಬಗೆಗೆ ಕೆಲವರಿಗಿದ್ದ ತುತ್ಛ ಭಾವನೆಗಳೆಲ್ಲವನ್ನೂ ವಿವರಿಸಿದ್ದಾರೆ. ಮೈಬಣ್ಣ ನೋಡಿ ಗೌರವ ಕೊಡುವುದು, ನಿರ್ಲಕ್ಷಿಸುವುದು ಹಾಗೂ ಅವಮಾನಿಸುವುದು ಸಲ್ಲದು ಎನ್ನುವ ಮೂಲಕ ಲೇಖಕಿಯು ಮಂಡೇಲರ ಬದುಕಿನ ಹೋರಾಟವನ್ನು ನಮ್ಮ ಮುಂದಿಡುತ್ತಾರೆ. . ಕರಿಯರ ಬದುಕಿನ ಬಗ್ಗೆ ಓದುತ್ತಾ ಕಣ್ಣು ಮಂಜಾ ಗುತ್ತದೆ. ಆದರೂ ಸೋತ ವನು ಜಗತ್ತನ್ನೇ ಗೆಲ್ಲಬಲ್ಲ ಎನ್ನುವ ಸಂದೇಶ ಈ ಬರಹದಿಂದ ಸಿಗುತ್ತದೆ.

ಸ್ವದೇಶ ಹಾಗೂ ವಿದೇಶಗಳ ನಡುವಿನ ಅಂತರದ ಬಗ್ಗೆಯೂ ಒಂದು ಲೇಖನವಿದೆ. “ಭಿಕ್ಷುಕ ನಿಂದ ಕಲಿತ ಪಾಠ’ ಎಂಬ ಬರಹದಲ್ಲಿ ನಮ್ಮ ಆಚಾರ – ವಿಚಾರಗಳು, ವೈಚಾರಿಕ ಭಿನ್ನತೆ ಮುಂತಾದವುಗಳ ಬಗ್ಗೆ ವಿವರಿಸಿ¨ªಾರೆ. ಕಲಿಯಲು ಮತ್ತು ಕಲಿಸಲು ಯಾರಾದ ರೇನು? ಕಲಿಕೆಗೆ ವಯಸ್ಸಿನ ನಿರ್ಬಂಧವೂ ಇಲ್ಲ ಎನ್ನುವುದನ್ನು ಈ ಬರಹದಲ್ಲಿ ತುಂಬಾ ಸುಂದರವಾಗಿ ನಿರೂಪಿಸಿದ್ದಾರೆ.

ವಿದೇಶಿಗರೊಬ್ಬರು ಲೇಖಕರ ಸಂಗಡ ದಿಂದ ಕನ್ನಡ ಕಲಿತು ಸೊಗಸಾಗಿ ಮಾತಾ ಡಿದ ಬಗ್ಗೆಯೂ ಈ ಕೃತಿಯಲ್ಲಿ ತಿಳಿಸುವ ಮೂಲಕ ನಮ್ಮ ಭಾಷೆಯನ್ನು ಕಲಿಯಲು ಸುಲಭ ಹಾಗೂ ವಿದೇಶಿಗರು ಇದರ ಬಗ್ಗೆ ಆಸಕ್ತಿ ಹೊಂದಿರುವ ಬಗ್ಗೆ ತಿಳಿಸುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ.

ಅಂತೂ ಈ ಕೃತಿಯು ನಮಗೆ ಹೊಸ ವಿಚಾರಗಳ ಬಗ್ಗೆ ಮಾಹಿತಿ ನೀಡುವುದರ ಜತೆಗೆ ನಮ್ಮ ಚಿಂತನೆಯನ್ನು ಮತ್ತಷ್ಟು ಹರಿತಗೊಳಿಸಲು ಪೂರಕವಾಗಿದೆ.

– ವಿದ್ಯಾಶ್ರೀ ಬಿ., ಬಳ್ಳಾರಿ

ಟಾಪ್ ನ್ಯೂಸ್

Rain ಮುಂದುವರಿದ “ಎಲ್ಲೋ ಅಲರ್ಟ್‌’

Rain ಮುಂದುವರಿದ “ಎಲ್ಲೋ ಅಲರ್ಟ್‌’

Foot ball

Women’s ವಿಶ್ವಕಪ್‌ ಫುಟ್‌ಬಾಲ್‌ ಆತಿಥ್ಯ ಬ್ರಝಿಲ್‌ಗೆ ಲಭಿಸಿತು

Udupi ಕುಡಿಯುವ ನೀರು ಕೊರತೆ ನೀಗಿಸಲು ಜಿಲ್ಲಾಧಿಕಾರಿ ಸೂಚನೆ

Udupi ಕುಡಿಯುವ ನೀರು ಕೊರತೆ ನೀಗಿಸಲು ಜಿಲ್ಲಾಧಿಕಾರಿ ಸೂಚನೆ

Malpe ಸೈಂಟ್‌ ಮೇರೀಸ್‌ ಪ್ರವಾಸಿ ಬೋಟ್‌ ಯಾನ, ಜಲಕ್ರೀಡೆ ತಾತ್ಕಾಲಿಕ ಸ್ಥಗಿತ

Malpe ಸೈಂಟ್‌ ಮೇರೀಸ್‌ ಪ್ರವಾಸಿ ಬೋಟ್‌ ಯಾನ, ಜಲಕ್ರೀಡೆ ತಾತ್ಕಾಲಿಕ ಸ್ಥಗಿತ

1-wqewqe

Impact player ನಿಯಮದಿಂದ ಬೌಲರ್‌ಗಳಿಗೆ ಹೊಡೆತ: ಶಾಬಾಜ್‌

Natural Ice Cream ಸಂಸ್ಥಾಪಕ ರಘುನಂದನ್‌ ಕಾಮತ್‌ ಇನ್ನಿಲ್ಲ

Natural Ice Cream ಸಂಸ್ಥಾಪಕ ರಘುನಂದನ್‌ ಕಾಮತ್‌ ಇನ್ನಿಲ್ಲ

Udupi ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಕಾನೂನು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು

Udupi ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಕಾನೂನು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weewqeqw

Kushtagi:ಬಹಿರ್ದೆಸೆಗೆ ಕುಳಿತ ಇಬ್ಬರ ಬಲಿ ಪಡೆದ ಶೌಚಾಲಯದ ಗೋಡೆ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

accident

Koppal; ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಢಿಕ್ಕಿ: ಸ್ಥಳದಲ್ಲೇ ನಾಲ್ವರ ಸಾವು

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Rain ಮುಂದುವರಿದ “ಎಲ್ಲೋ ಅಲರ್ಟ್‌’

Rain ಮುಂದುವರಿದ “ಎಲ್ಲೋ ಅಲರ್ಟ್‌’

Foot ball

Women’s ವಿಶ್ವಕಪ್‌ ಫುಟ್‌ಬಾಲ್‌ ಆತಿಥ್ಯ ಬ್ರಝಿಲ್‌ಗೆ ಲಭಿಸಿತು

Udupi ಕುಡಿಯುವ ನೀರು ಕೊರತೆ ನೀಗಿಸಲು ಜಿಲ್ಲಾಧಿಕಾರಿ ಸೂಚನೆ

Udupi ಕುಡಿಯುವ ನೀರು ಕೊರತೆ ನೀಗಿಸಲು ಜಿಲ್ಲಾಧಿಕಾರಿ ಸೂಚನೆ

Malpe ಸೈಂಟ್‌ ಮೇರೀಸ್‌ ಪ್ರವಾಸಿ ಬೋಟ್‌ ಯಾನ, ಜಲಕ್ರೀಡೆ ತಾತ್ಕಾಲಿಕ ಸ್ಥಗಿತ

Malpe ಸೈಂಟ್‌ ಮೇರೀಸ್‌ ಪ್ರವಾಸಿ ಬೋಟ್‌ ಯಾನ, ಜಲಕ್ರೀಡೆ ತಾತ್ಕಾಲಿಕ ಸ್ಥಗಿತ

1-wqewqe

Impact player ನಿಯಮದಿಂದ ಬೌಲರ್‌ಗಳಿಗೆ ಹೊಡೆತ: ಶಾಬಾಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.