ನಮ್ಮೊಳಗಿನ ನಾಟಕ ನಾವು ಬಯಸಿದಂತೆ ನಡೆಯಲಿ


Team Udayavani, Nov 24, 2020, 5:46 AM IST

ನಮ್ಮೊಳಗಿನ ನಾಟಕ ನಾವು ಬಯಸಿದಂತೆ ನಡೆಯಲಿ

ಬದುಕು ನಾಟಕ ರಂಗ ಎಂದರು ದಾಸರು. ನಮ್ಮ ಬದುಕಿನಲ್ಲಿ ನಾವು ಪ್ರೇಕ್ಷಕರಾಗಿರು ತ್ತೇವೆಯೇ, ನಟರಾಗಿರುತ್ತೇವೆಯೇ ಅಥವಾ ನಿರ್ದೇಶಕರಾಗುತ್ತೇವೆಯೇ ಅನ್ನುವುದು ಪ್ರಶ್ನೆ. ನಿರ್ದೇಶಕರಾದರೆ ಬದುಕು ಹಸನಾಗುತ್ತದೆ.

ಒಂದು ನಾಟಕ ಪ್ರದರ್ಶನ ಕಾಣುವಾಗ ಮೂರು ವರ್ಗದ ಜನರು ಸಾಕ್ಷಿಗಳಾಗುತ್ತಾರೆ. ಪ್ರೇಕ್ಷಕರದು ಒಂದನೆಯ ವರ್ಗ, ನಟರದ್ದು ಇನ್ನೊಂದು. ನಾಟಕ ಸಂಭವಿಸುವುದಕ್ಕೆ ಕಾರಣನಾದ ನಿರ್ದೇಶಕನದ್ದು ಮತ್ತೂಂದು. ಈ ಮೂರು ವರ್ಗದ ಮಂದಿಯಲ್ಲಿ ನಿರ್ದೇ ಶಕನಿಗೆ ನಾಟಕವು ಉಳಿದೆಲ್ಲರಿಗಿಂತ ಹೆಚ್ಚು ಚೆನ್ನಾಗಿ ಅರ್ಥವಾಗಿರುತ್ತದೆ, ಆತ ಎಲ್ಲರಿಗಿಂತ ಹೆಚ್ಚು ಆಳವಾಗಿ ನಾಟಕದಲ್ಲಿ ತೊಡಗಿಸಿ ಕೊಂಡಿರುತ್ತಾನೆ. ಏಕೆಂದರೆ, ಆತ ನಾಟಕವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡವನು, ಅದನ್ನು ಸೃಷ್ಟಿಸಿದವನು, ಅದು ಪ್ರದರ್ಶನ ಕಾಣುವಂತೆ ಮಾಡಿದವನು.

ನಟ-ನಟಿಯರಿಗೆ ಅವರವರ ಪಾತ್ರಗಳು ಮಾತ್ರ ಚೆನ್ನಾಗಿ ಗೊತ್ತಿರುತ್ತವೆ. ಪ್ರೇಕ್ಷಕರಿಗೆ ಇದ್ಯಾವುದೂ ಗೊತ್ತಿರುವು ದಿಲ್ಲ. ನಾಟಕ ರಂಗದ ಮೇಲೆ ಪ್ರದರ್ಶನ ಕಾಣುತ್ತಿದ್ದಂತೆ ಅವರು ನೋಡಿ ಆಶ್ಚರ್ಯ ಚಕಿತರಾಗುತ್ತಾರೆ, ನಗುತ್ತಾರೆ, ಅಳುತ್ತಾರೆ. ನಾಟಕ ನೋಡಿ ಅತೀ ಹೆಚ್ಚು ಭ್ರಮಿತ ರಾಗುವುದು ಪ್ರೇಕ್ಷಕರು. ಪ್ರೇಕ್ಷಕ ನಾಟಕದ ಒಟ್ಟು ಪ್ರಕ್ರಿಯೆಯಲ್ಲಿ ಅತ್ಯಂತ ಕಡಿಮೆ ತೊಡಗಿಸಿ ಕೊಂಡವನಾದರೂ ಅದರೊಡನೆ ಅತ್ಯಂತ ಹೆಚ್ಚು ಬಂಧಿಸಲ್ಪಡುವುದು ಆತನೇ. ನಟ ಇವತ್ತು ಒಂದು ಪಾತ್ರದಲ್ಲಿರಬಹುದು, ನಾಳೆ ಇನ್ನೊಂದಕ್ಕೆ ಬದಲಾಗಬಹುದು. ಅವರು ನಾಟಕ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರು ತ್ತಾರೆ ಆದರೆ ಪ್ರೇಕ್ಷಕನಿಗಿಂತ ಕಡಿಮೆ ಬಂಧಿಸ ಲ್ಪಟ್ಟಿರುತ್ತಾರೆ.

ನಿರ್ದೇಶಕ ಅತ್ಯಂತ ಹೆಚ್ಚು ತೊಡಗಿಸಿ ಕೊಂಡವನಾದರೂ ನಾಟಕದ ಜತೆಗೆ ಅತ್ಯಂತ ಕನಿಷ್ಠ ಮಟ್ಟದಲ್ಲಿ ಬಂಧಿಸಲ್ಪಟ್ಟಿರುತ್ತಾನೆ. ನಾಟಕ ನಡೆಸುತ್ತಿರುವುದು ಅವನು, ಆದರೆ ಅದರೊಳಗಿನ ಆಗುಹೋಗುಗಳಿಂದ ಕಿಂಚಿತ್ತೂ ಪ್ರಭಾವಿತನಾಗುವುದಿಲ್ಲ. ಯಾಕೆಂದರೆ, ನಾಟಕದ ಸೃಷ್ಟಿಕರ್ತ ಆತನೇ.

ನಮ್ಮ ಬದುಕಿನ ಅವಕಾಶಗಳು ಇವು, ಏಕೆಂದರೆ ಬದುಕು ಕೂಡ ಒಂದು ನಾಟಕವೇ. ನಾವು ನಟರಾಗಬಹುದು. ನಾಟಕ ಪ್ರದರ್ಶನ ದಲ್ಲಿ ಪೂರ್ತಿಯಾಗಿ ಮುಳುಗಿಹೋಗುವ ಪ್ರೇಕ್ಷಕರಾಗಬಹುದು ಅಥವಾ ಇಡಿಯ ನಾಟಕವನ್ನು ಹೇಗೆ ಬೇಕೋ ಹಾಗೆ ಕಟ್ಟಿ ಕೊಡುವ ನಿರ್ದೇಶಕನೂ ಆಗಬಹುದು. ನಾವು ಈ ಮೂರು ಆಯ್ಕೆಗಳಲ್ಲಿ ಯಾವು ದನ್ನೂ ಆರಿಸಿಕೊಳ್ಳಬಹುದು. ಆದರೆ ನಿರ್ದೇಶಕನಾದರೆ ಬದುಕನ್ನು ಹೇಗೆ ಬೇಕೋ ಹಾಗೆ ಮುನ್ನಡೆಸಬಹುದು. ಅದನ್ನು ಬಿಟ್ಟು ಇನ್ನುಳಿದ ಎರಡು ಆಯ್ಕೆಗಳನ್ನು ಆರಿಸಿ ಕೊಂಡರೆ ಬದುಕು ನಿಯಂತ್ರಣವಿಲ್ಲದ, ಅಂತ್ಯವಿಲ್ಲದ . ನಾಟಕವಾಗಬಹುದು.

ನಮ್ಮ ಬದುಕಿನ ನಾಟ ಕದಲ್ಲಿಯೂ ಎರಡು ಭಾಗ ಗಳಿವೆ. ಒಂದು ನಮ್ಮ ಒಳಗಿ ನದ್ದು, ಇನ್ನೊಂದು ಹೊರಗಿ ನದ್ದು. ನಮ್ಮ ಹೊರಗೆ ನಡೆಯುವ ನಾಟಕ ದಲ್ಲಿ ನಾವು ಹೇಳಿ ದಂತೆ ಕೇಳುವ “ನಟ- ನಟಿಯರು’ ಇರ ಲಾರರು; ಹಾಗಾಗಿ ಅದು ಶತ ಪ್ರತಿಶತ ನಾವು ಬಯಸಿದಂತೆ ನಡೆ ಯುವುದಿಲ್ಲ. ಆಗ ನಮ್ಮ ಒಳಗೆ, ಮನೋ ಭಾವನಾತ್ಮಕ ನೆಲೆಯಲ್ಲಿ ನಡೆಯುವ ನಾಟ ಕವೂ ನಿಯಂತ್ರಣ ತಪ್ಪಲಾರಂಭಿಸುತ್ತದೆ. ನಾವು ನಿರ್ದೇಶಕರಾಗಬೇಕಾಗಿರುವುದು ಇಲ್ಲೇ. ನಮ್ಮೊಳಗೆ ನಡೆಯುವ ನಾಟಕದ ಸೂತ್ರವನ್ನು ನಾವು ಕೈಯೊಳಗೆ ಇರಿಸಿಕೊಂಡು ನಮಗೆ ಬೇಕಾದಂತೆ ಮುನ್ನಡೆಸಬೇಕು.

ನಮ್ಮೊಳಗಿನ ನಾಟಕ ನಾವು ಬಯಸಿದಂತೆ ಮುನ್ನಡೆಯುವುದಕ್ಕಾಗಿ ತಾಲೀಮನ್ನು ಇಂದಿನಿಂದಲೇ ಆರಂಭಿಸೋಣ. ಒಳಗಿನ ನಟ -ನಟಿಯರು ನಾವು ಹೇಳಿದಂತೆ ಕೇಳಲಿ. ಒಟ್ಟು ನಾಟಕ ಹೇಗೆ ಇರಬೇಕು ಎಂಬ ಸ್ಪಷ್ಟ ಚಿತ್ರಣವನ್ನು ಕಲ್ಪಿಸಿಕೊಂಡು ಅದರಂತೆಯೇ ನಾಟಕ ಸಂಭವಿಸುವಂತೆ ಮಾಡಿ.

ಟಾಪ್ ನ್ಯೂಸ್

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.