ವಿಜಯಪುರ : ಅಳಿವಿನಂಚಿನಲ್ಲಿರುವ ತುಕ್ಕುಮಚ್ಚೆ ಬೆಕ್ಕಿನ ಮರಿಗಳು ಪತ್ತೆ

ಕಾಡು ನಾಶದಿಂದ ಸಂತಾನಾಭಿವೃದ್ಧಿಗೆ ಹೆಣಗುತ್ತಿರುವ ವನ್ಯಜೀವಿಗಳು

Team Udayavani, Nov 27, 2020, 8:27 PM IST

ವಿಜಯಪುರ : ಅಳಿವಿನಂಚಿನಲ್ಲಿರುವ ತುಕ್ಕುಮಚ್ಚೆ ಬೆಕ್ಕು ಪತ್ತೆ

ವಿಜಯಪುರ : ಜಿಲ್ಲೆಯ ಕೃಷ್ಣಾ ನದಿ ತೀರದಲ್ಲಿ ವಿಶ್ವದಲ್ಲೇ ಅಪರೂಪದ ಹಾಗೂ ಏಷಿಯಾ ಖಂಡದಲ್ಲಿ ಮಾತ್ರ ಕಂಡು ಬರುವ ಅಳಿವಿನ ಅಂಚಿನಲ್ಲಿರುವ ತುಕ್ಕುಮಚ್ಚೆಯ ಬೆಕ್ಕಿನ ಮರಿಗಳು ಪತ್ತೆಯಾಗಿವೆ. ಇದರೊಂದಿಗೆ ಐತಿಹಾಸಿಕ ವಿಜಯಪುರ ಜಿಲ್ಲೆ ಮತ್ತೆ ಗಮನ ಸೆಳೆಯುವಂತಾಗಿದೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಜೈನಾಪುರ ಗ್ರಾಮದ ಕಬ್ಬಿನ ಗದ್ದೆಯಲ್ಲಿ ತುಕ್ಕುಮಚ್ಚೆಯ ಬೆಕ್ಕಿನ ಎರಡು ಮರಿಗಳು ಪತ್ತೆಯಾಗಿವೆ. ದಶಕದ ಹಿಂದೆ ಭಾರತದಲ್ಲಿ ಕಾಣಿಸಿಕೊಂಡಿದ್ದ ಈ ಬೆಕ್ಕು, 2016 ರಲ್ಲಿ ನೇಪಾಳ ದೇರದ ಪಶ್ಚಿಮ ತೆರೈ ಅರಣ್ಯ ಪ್ರದೇಶದಲ್ಲೂ ಕಂಡು ಬಂದಿತ್ತು. ದಶಕದ ಬಳಿಕ ಭಾರತದ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ರಸ್ಟೀ ಸ್ಪಾಟೆಡ್ ಕ್ಯಾಟ್ ಎಂದು ಕರೆಯಲ್ಪಡುವ ತುಕ್ಕು ಮಚ್ಚೆಯ ಬೆಕ್ಕು ಕಾಣಿಸಿಕೊಂಡಿದೆ.

ಜಗತ್ತಿನಲ್ಲೇ ಭಾರತ, ಶ್ರೀಲಂಕಾ ದೇಶದಲ್ಲಿ ಮಾತ್ರ ಕಂಡು ಬರುವ ಈ ಅಪರೂಪದ ತಳಿಯ ಬೆಕ್ಕು, ಕಾಡುಗಳ ನಾಶದಿಂದಾಗಿ ಇದೀಗ ಅಳಿವಿನ ಅಂಚಿನಲ್ಲಿದೆ. ಹೀಗಾಗಿ ಈ ಬೆಕ್ಕು ಸಂರಕ್ಷಿತ ವನ್ಯಜೀವಿಯ ಶಡ್ಯೂಲ್ 1 ರಲ್ಲಿ ಸೇರಿಸಲ್ಪಟ್ಟಿದೆ. ನಿಶಾಚರಿ ಜೀವನ ಕ್ರಮದ ಅಪರೂಪದ ಈ ಬೆಕ್ಕು ಕಾಡು ನಾಶವಾದ ಹಗಲು ವೇಳೆ ನೆಲೆ ಕಂಡುಕೊಳ್ಳಲು ಪರದಾಡುತ್ತಿದೆ. ಇದರಿಂದ ಒತ್ತಡಕ್ಕೆ ಸಿಲುಕಿರುವ ರಸ್ಟೀ ಸ್ಪಾಟೆಡ್ ಕ್ಯಾಟ್ ಸಂತತಿ ಅಭಿವೃದ್ಧಿ ಕ್ಷೀಣಿಸಿದೆ. ಪರಿಣಾಮ ಅಳಿವಿನ ಅಂಚಿಗೆ ತಲುಪಿದೆ.

ವಿಜಯಪುರ ಜಿಲ್ಲೆಯಲ್ಲಿ ನೀರಾವರಿ ಹೆಚ್ಚಿ ಕಬ್ಬಿನ ಗದ್ದೆಗಳು ದಟ್ಟವಾಗಿದ್ದು, ವನ್ಯಜೀವಿಗಳ ಆವಾಸ ತಾಣವಾಗುತ್ತಿದೆ. ತುಕ್ಕುಮಚ್ಚೆ ಬೆಕ್ಕಿನ ಮರಿಗಳು ಪತ್ತೆಯಾಗಿರುವ ಬಬಲೇಶ್ವರ ತಾಲೂಕಿನ ಜೈನಾಪುರ ಪರಿಸರದ ಕಬ್ಬಿನ ಗದ್ದೆಗಳಲ್ಲಿ ಚಿರತೆಗಳೂ ವಾಸ ಮಾಡತೊಡಗಿವೆ, ಕೆಲವೇ ತಿಂಗಳ ಹಿಂದೆ ಅರಣ್ಯ ಇಲಾಖೆ ಜೈನಾಪುರ ಭಾಗದಲ್ಲೇ ಪ್ರಾಣಿ ಭಕ್ಷಕ ಚಿರತೆಯನ್ನು ಸೆರೆ ಹಿಡಿದಿದೆ.

ಇದನ್ನೂ ಓದಿ:ಬಸವನಬಾಗೇವಾಡಿಯಲ್ಲಿ ಅಬಕಾರಿ ಅಧಿಕಾರಿಗಳ ದಾಳಿ: 19 ಕೆ.ಜಿ ಗಾಂಜಾ ವಶ

ಬಾಗಲಕೋಟೆ, ಬೆಳಗಾವಿ ಅರಣ್ಯ ಪರಿಸರದಿಂದ ಆಹಾರ ಅರಸುತ್ತ ಬರುತ್ತಿರುವ ಚಿರತೆ ಹಾಗೂ ಇತರೆ ವನ್ಯಜೀವಿಗಳಿಗೆ ವರ್ಷಪೂರ್ತಿ ದಟ್ಟವಾಗಿ ಬೆಳೆದು ನಿಲ್ಲುವ ಕಬ್ಬಿನ ಗದ್ದೆಗಳು ಸುರಕ್ಷಿತ ನೆಲೆಯನ್ನು ಒದಗಿಸುತ್ತಿವೆ. ಈ ಪರಿಸರದಲ್ಲಿ ಕುರಿ, ಮೇಕೆಗಳಂಥ ಸಣ್ಣ ಪ್ರಾಣಿಗಳ ಮೇಲೆ ದಾಳಿ ಮಾಡಿ ಹಸಿವು ನೀಗಿಸಿಕೊಳ್ಳುತ್ತಿವೆ.

ಮರಿಗಳಿರುವ ಯಾವುದೇ ಅನ್ಯಜೀವಿ ತಾಯಿ ಮರಿಗಳನ್ನು ಇರುವ ಸ್ಥಳಕ್ಕೆ ಸಹಜವಾಗಿ ಬಂದೇ ಬರುತ್ತವೆ. ಆದರೆ ಮೂಲ ನೆಲೆಗೆ ಧಕ್ಕೆ ಬಂದಿರುವುದರಿಂದ ಕಾಡಿನಂತೆ ಜಾಡು ಹಿಡಿದ ಬೆಕ್ಕಿಗೆ ಕಟಾವಾದ ಕಬ್ಬಿನ ಗದ್ದೆಗಳೂ ಇದೀಗ ತೊಡಕಾಗಿವೆ. ಇದರ ಪರಿಣಾಮವೇ ಅಪರೂಪದ ಬೆಕ್ಕಿನ ತಳಿಯ ಈ ಮರಿಗಳು ಇದೀಗ ತಾಯಿ ಇಲ್ಲದೇ ಅನಾಥವಾಗಲು ಕಾರಣವಾಗಿದೆ.

ತುಕ್ಕುಮಚ್ಚೆ ಬೆಕ್ಕಿನ ಎರಡು ಮರಿಗಳು ಪತ್ತೆಯಾಗಿರುವ ಕಬ್ಬಿನ ಗದ್ದೆಯಲ್ಲಿ ಕಬ್ಬು ಕಟಾವು ಮಾಡಲಾಗಿದೆ. ಹೀಗಾಗಿ ಭಯಗೊಂಡ ಈ ಮರಿಗಳ ತಾಯಿಬೆಕ್ಕು ತನ್ನ ಜೀವ ರಕ್ಷಣೆಗಾಗಿ ಸ್ಥಳದಿಂದ ಪರಾರಿಯಾಗಿದೆ. ಬೆಕ್ಕಿನ ಮರಿಗಳು ಪತ್ತೆಯಾಗುತ್ತಲೇ ಚಿರತೆ ಮರಿಗಳು ಎಂದು ರಕ್ಷಿಸಿ ಮನೆಗೆ ತಂದ ಜಮೀನಿನ ರೈತ ಪ್ರಶಾಂತ ದೇಸಾಯಿ, ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಮರಿಗಳನ್ನು ಪರಿಶೀಲಿಸಿದ್ದಾರೆ. ಬಳಿಕ ಚಿರತೆ ಮರಿಗಳಲ್ಲ, ತುಕ್ಕುಮಚ್ಚೆಯ ಬೆಕ್ಕಿನ ಮರಿಗಳು ಎಂಬುದನ್ನು ಖಚಿತ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಅಂದು ಭಿಕ್ಷೆ ಬೇಡುತ್ತಿದ್ದವಳು ಈಗ ನ್ಯಾಯವಾದಿ! 50ಕ್ಕೂ ಅಧಿಕ ಕೇಸು ಗೆದ್ದ ಹಿರಿಮೆ ಈಕೆಯದ್ದು

ಒಂದು ವಾರದ ಪ್ರಾಯ ಹೊಂದಿರುವ ಕಾರಣ ಬೆಕ್ಕಿನ ಮರಿಗಳನ್ನು ತಾಯಿಯಿಂದ ಬೇರ್ಪಡಿಸುವುದು ಅಸಾಧ್ಯ. ಹೀಗಾಗಿ ಪತ್ತೆಯಾದ ಸ್ಥಳದಲ್ಲೇ ಬಿಟ್ಟು, ತಾಯಿ ಬೆಕ್ಕು ಬರುವಿಕೆಗೆ ಕಾದಿದ್ದಾರೆ. ಆದರೆ ಎರಡು ದಿನವಾದರೂ ತಾಯಿ ಬೆಕ್ಕು ಪತ್ತೆಯಾಗದ್ದರಿಂದ ಅರಣ್ಯ ಇಲಾಖೆ ಮರಿಗಳನ್ನು ವಶಕ್ಕೆ ಪಡೆದು ಪಾಲನೆ ಮಾಡುತ್ತಿದೆ.

ಏಷಿಯಾ ಖಂಡದ ಭಾರತ, ಶ್ರೀಲಂಕಾ ದೇಶಗಳಲ್ಲಿ ಮಾತ್ರ ಕಂಡು ಬರುವ ರಸ್ಟೀ ಸ್ಪಾಟೆಡ್ ಕ್ಯಾಟ್ ಅಳಿವಿನ ಅಂಚಿನಲ್ಲಿರುವ ಬೆಕ್ಕಿನ ಪ್ರಬೇಧದ ಸಂರಕ್ಷಿತ ವನ್ಯಜೀವಿ. ಪತ್ತೆಯಾದ ಸ್ಥಳದಲ್ಲೇ ಮರಿಗಳನ್ನು ಬಿಟ್ಟು ಎರಡು ದಿನ ಅವಲೋಕಿಸಿದರೂ ತಾಯಿ ಬೆಕ್ಕು ಬಂದಿಲ್ಲ. ಹೀಗಾಗಿ ಈ ಮರಿಗಳನ್ನು ನಮ್ಮ ಸುಪರ್ದಿಗೆ ಪಡೆದು ಪಾಲನೆ ಮಾಡಲಾಗುತ್ತಿದೆ.
– ಅಶೋಕ ಪಾಟೀಲ, ಡಿಎಫ್‍ಓ, ಅರಣ್ಯ ಇಲಾಖೆ, ವನ್ಯಜೀವಿ ವಿಭಾಗ

– ಜಿ.ಎಸ್.ಕಮತರ

ಟಾಪ್ ನ್ಯೂಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

15

UV Fusion: ಜೀವನವನ್ನು ಪ್ರೀತಿಸೋಣ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.