ಕಿಂಡಿ ಅಣೆಕಟ್ಟುಗಳ ಸ್ವಚ್ಛತಾ ಕಾರ್ಯ ಆರಂಭ
ಇಲಾಖೆಯಿಂದ ಹಲಗೆ ಜೋಡಣೆ, ಮರಮುಟ್ಟು ತೆರವು
Team Udayavani, Dec 5, 2020, 7:29 AM IST
ಬೆಳ್ತಂಗಡಿ: ಕಾಯರ್ತೋಡಿ ಬಳಿ ಕಿಂಡಿ ಅಣೆಕಟ್ಟು ಸ್ವತ್ಛಗೊಳಿಸುತ್ತಿರು ವುದು.
ಬೆಳ್ತಂಗಡಿ: ಮಳೆಗಾಲದಲ್ಲಿ ಮರಮಟ್ಟು, ಕಸಕಡ್ಡಿ, ಮರಳು, ಹೂಳು ಇತ್ಯಾದಿ ತುಂಬಿರುವ ಉಭಯ ಜಿಲ್ಲೆಗಳ ಕಿಂಡಿ ಅಣೆಕಟ್ಟುಗಳ ಸ್ವತ್ಛತೆಗೆ ಸಣ್ಣ ನೀರಾವರಿ ಇಲಾಖೆ ಮುಂದಾಗಿದೆ.
ಕೃಷಿ ಭೂಮಿಗೆ ಹಾಗೂ ಪಟ್ಟಣ ಭಾಗದಲ್ಲಿ ಕುಡಿಯುವ ನೀರಿಗೆ ಕಿಂಡಿ ಅಣೆಕಟ್ಟು, ಡ್ಯಾಂಗಳೇ ಆಧಾರ. ಪ್ರಸಕ್ತ ಮಳೆ ನಿಂತಿದ್ದು, ನೀರಿನ ಒಳ ಹರಿವು ಕ್ಷೀಣಿಸಿದೆ. ಪ್ರಸಕ್ತ ನಿರ್ವಹಣೆ ತಡವಾಗಿದ್ದು, ಶೀಘ್ರ ಹಲಗೆ ಸ್ವತ್ಛತೆ ಹಾಗೂ ಹಲಗೆ ಜೋಡಣೆ ಪ್ರಕ್ರಿಯೆ ನಡೆಸಿದಲ್ಲಿ ಕೃಷಿಗೆ ಸಾಕಷ್ಟು ನೀರು ಲಭ್ಯವಾಗಲಿದೆ ಎಂದು ಉದಯವಾಣಿ ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆ ಅಣೆಕಟ್ಟುಗಳ ಸ್ವತ್ಛತೆಗೆ ನಿರ್ಧರಿಸಿದೆ.
ದ.ಕ.ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ನಿರ್ವಹಣೆಯಲ್ಲಿ ಒಟ್ಟು 315 ಮತ್ತು ಉಡುಪಿ ಜಿಲ್ಲೆಯಲ್ಲಿ 410 ಕಿಂಡಿ ಅಣೆಕಟ್ಟುಗಳಿವೆ. ಆರಂಭಿಕ ಹಂತದಲ್ಲಿ ಈಗಾಗಲೇ ಕಿಂಡಿ ಅಣೆಕಟ್ಟುಗಳ ಸಮೀಪ 5ರಿಂದ 20 ಮೀಟರ್ ಅಂತರದೊಳಗೆ ಹೂಳು ಹಾಗೂ ಕಸ, ಕಡ್ಡಿ ತುಂಬಿರುವುದನ್ನು ತೆರವುಗೊಳಿಸಲಾಗುತ್ತಿದೆ.
ಸಾಂಪ್ರದಾಯಿಕ ಒಡ್ಡು
ಬೇಸಗೆಯಲ್ಲಿ ಕೃಷಿ ನೀರಿಗೆ ಪೂರಕವಾಗಿ ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ ಭಾಗಗಳಲ್ಲಿ ಪ್ರತಿ ವರ್ಷ ನದಿ ಹಾಗೂ ಉಪ ನದಿಗಳಿಗೆ ಸಾಂಪ್ರದಾಯಿಕ ಮಣ್ಣಿನ ಕಟ್ಟ (ಒಡ್ಡು) ನಿರ್ಮಾಣಕ್ಕೆ ಕೃಷಿಕರು ಮುಂದಾಗುತ್ತಿದ್ದರು. ಆದರೆ ಈ ವರ್ಷ ಕಿಂಡಿ ಅಣೆಕಟ್ಟುಗಳಲ್ಲಿ ಕಸ ಸಂಗ್ರಹವಾಗಿದ್ದು, ಅದನ್ನು ತೆರವುಗೊಳಿಸದೇ ಕೃಷಿ ಕಟ್ಟ ಅಳವಡಿ ಸುವಂತಿರಲಿಲ್ಲ. ಇಲಾಖೆಯು ಸ್ವತ್ಛತಾ ಕಾರ್ಯ ಆರಂಭಿಸಿರುವುದರಿಂದ ಕೃಷಿಕರಿಗೆ ಅನುಕೂಲವಾಗಲಿದೆ.
ಇಲಾಖೆಯಿಂದ ನಿರ್ವಹಣೆ
ಕಿಂಡಿ ಅಣೆಕಟ್ಟು ನಿರ್ವಹಣೆಗೆಂದು ನೀರು ಬಳಕೆದಾರರ ಸಂಘವನ್ನು ಇಲಾಖೆಯಿಂದ ರಚಿಸಲಾಗುತ್ತದೆ. ಅಣೆಕಟ್ಟುಗಳ ಗಾತ್ರಕ್ಕನುಗುಣವಾಗಿ ಹಲಗೆ ಜೋಡಣೆ, ಮರಮಟ್ಟು ತೆರವು ಇತ್ಯಾದಿ ನಿರ್ವಹಣೆಗೆ 10 ಸಾವಿರದಿಂದ 60 ಸಾವಿರ ರೂ. ವರೆಗೆ ವೆಚ್ಚವಾಗಲಿದೆ.
-ಶಿವಪ್ರಸನ್ನ , ಎಇ (ಪ್ರಭಾರ), ಸಣ್ಣ ನೀರಾವರಿ ಇಲಾಖೆ, ದ.ಕ
ಸ್ವಚ್ಛಗೊಳಿಸಲಾಗುತ್ತಿದೆ
ಉಡುಪಿ ಜಿಲ್ಲೆಯ 7 ತಾಲೂಕುಗಳಲ್ಲಿ 410 ಕಿಂಡಿ ಅಣೆಕಟ್ಟುಗಳಿವೆ. ಕೆಲವೆಡೆ ಸ್ವತ್ಛತೆ ಮುಗಿದಿದ್ದು, ಉಳಿದೆಡೆ ಪ್ರಗತಿಯಲ್ಲಿದೆ.
-ಶೇಷಕೃಷ್ಣ , ಎಇಇ, ಸಣ್ಣ ನೀರಾವರಿ ಇಲಾಖೆ,ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ