ಲಸಿಕೆ ಜಗತ್ತು, ಅಭಿವೃದ್ಧಿಯದ್ದೇ ಕಸರತ್ತು!


Team Udayavani, Jan 8, 2021, 6:25 AM IST

ಲಸಿಕೆ ಜಗತ್ತು, ಅಭಿವೃದ್ಧಿಯದ್ದೇ ಕಸರತ್ತು!

ಸಾಂದರ್ಭಿಕ ಚಿತ್ರ

ರವಿವಾರ ಡಿಸಿಜಿಎ ಕೊವಿಶೀಲ್ಡ್‌ ಹಾಗೂ ಕೊವ್ಯಾಕ್ಸಿನ್‌ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಿದೆ. ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಲಸಿಕೀಕರಣಕ್ಕೆ ಈಗಾಗಲೇ ಡ್ರೈ ರನ್‌ ಕೂಡ ನಡೆಸಿವೆ. ಈಗ ಜನವರಿ 13ರಂದು ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಲಿದೆ. ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಆಕ್ಸ್‌ಫ‌ರ್ಡ್‌ನ ಕೊವಿಶೀಲ್ಡ್‌ ಲಸಿಕೆ ಹಾಗೂ ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸಿರುವ ದೇಶೀಯ ಕೊವ್ಯಾಕ್ಸಿನ್‌ ಲಸಿಕೆಗಳ ಫ‌ಲಪ್ರದತೆ, ಕಾರ್ಯವೈಖರಿ ಹೇಗಿದೆ. ಅವಕ್ಕೆ ಹೋಲಿಸಿದರೆ ಈಗ ಜಾಗತಿಕವಾಗಿ ಅನುಮತಿ ಪಡೆದಿರುವ ಲಸಿಕೆಗಳ ಗುಣವೇನು? ಇಲ್ಲಿದೆ ಮಾಹಿತಿ…

ಸೀರಂ ಇನ್‌ಸ್ಟಿಟ್ಯೂಟ್‌ನ ಕೊವಿಶೀಲ್ಡ್‌ ಲಸಿಕೆ
ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾನಿಲಯ-ಆಸ್ಟ್ರಾಜೆನೆಕಾ ಸಂಶೋಧನ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಉತ್ಪಾದಿಸುತ್ತಿದೆ. ಸೀರಂ ಇನ್‌ಸ್ಟಿಟ್ಯೂಟ್‌ ಸಾವಿರಾರು ಜನರ ಮೇಲೆ ಈ ಲಸಿಕೆಯ ಪ್ರಯೋಗಗಳನ್ನೂ ಮಾಡಿದೆ. ಕೊವಿಶೀಲ್ಡ್‌ ಇದೆಯಲ್ಲ, ಇದು “ಅಡಿನೋ ವೈರಸ್‌ ವೆಕ್ಟರ್‌ ಲಸಿಕೆ’. ಈ ರೀತಿಯ ಲಸಿಕೆ ಪ್ರಯೋಗವನ್ನು ಕೇವಲ ಆಕ್ಸ್‌ಫ‌ರ್ಡ್‌ ಅಷ್ಟೇ ಅಲ್ಲದೇ ರಷ್ಯಾದ ಸ್ಪುಟ್ನಿಕ್‌ ಲಸಿಕೆಯ ಅಭಿವೃದ್ಧಿಗೂ ಬಳಸಲಾಗಿದೆ

ಅಡಿನೋ ವೈರಸ್‌ ವೆಕ್ಟರ್‌
1. ಮೊದಲ ಹಂತವಾಗಿ ವಿಜ್ಞಾನಿಗಳು ಚಿಂಪಾಂಜಿಗಳಲ್ಲಿ ಸೋಂಕು ಉಂಟುಮಾಡುವ ವೈರಸ್‌(ಅಡಿನೋವೈರಸ್‌) ಅನ್ನು ಹೊರತೆಗೆಯುತ್ತಾರೆ. ಅನಂತರ ಅದನ್ನು ಮಾನವನಿಗೆ ತೊಂದರೆಯುಂಟುಮಾಡದಂತೆ ಪರಿವರ್ತಿಸಲಾಗುತ್ತದೆ.

2. ಕೊರೊನಾ ವೈರಸ್‌ನ ಮೇಲ್ಮೆ„ಯಲ್ಲಿ ಮುಳ್ಳಿನ ರೀತಿಯ ಆಕೃತಿ (ಸ್ಪೈಕ್‌ ಪ್ರೊಟೀನುಗಳು) ಇರುವ ಚಿತ್ರವನ್ನು ನೀವು ನೋಡಿರುತ್ತೀರಿ. ಕೊರೊನಾದಲ್ಲಿ ಈ  ರೀತಿಯ ಸ್ಪೈಕ್‌ ಪ್ರೋಟೀನುಗಳನ್ನು ಸೃಷ್ಟಿಸುವ ಜೀನೋಮುಗಳನ್ನು ಪ್ರತ್ಯೇಕಿಸಿ ಅದನ್ನು ಚಿಂಪಾಂಜಿಯಿಂದ ಈಗಾಗಲೇ ಸಂಗ್ರಹಿಸಿ ನಿಷ್ಕ್ರಿಯಗೊಳಿಸಲಾದ ಅಡಿನೋ ವೈರಸ್‌ಗೆ ಸೇರಿಸಲಾಗುತ್ತದೆ. ಇದರಿಂದಾಗಿ ಅಡಿನೋವೈರಸ್‌ನ ಮೇಲ್ಮೆ„ಯಲ್ಲಿ ಕೊರೊನಾ ವೈರಸ್‌ಗೆ ಇರುವಂಥದ್ದೇ ಮುಳ್ಳಿನ ಆಕೃತಿಗಳು ಸೃಷ್ಟಿಯಾಗುತ್ತವೆ. ಆದರೆ ಇದು ಕೊರೊನಾದಂತೆ ಮನುಷ್ಯನಿಗೆ ಹಾನಿ ಮಾಡುವುದಿಲ್ಲ. ಇದೇ ಕೊವಿಶೀಲ್ಡ್‌ ಲಸಿಕೆ.

3. ಯಾವಾಗ ಈ ಲಸಿಕೆಯನ್ನು ಮಾನವನ ದೇಹದೊಳಕ್ಕೆ ಬಿಡಲಾಗುತ್ತದೋ, ಆಗ ನಮ್ಮ ರೋಗ ನಿರೋಧಕ ಶಕ್ತಿಯು ಕೊರೊನಾದ ಆಕೃತಿಯನ್ನು ಹೋಲುವ ವೈರಸ್‌ನ ಮೇಲೆ ದಾಳಿ ಮಾಡುತ್ತದೆ. ದಾಳಿ ಮಾಡುವ ಸಂದರ್ಭದಲ್ಲಿ ಆ ವೈರಸ್‌ನ ಮೇಲಿರುವ ಸ್ಪೆ$R„ಕ್‌ ಪ್ರೊಟೀನುಗಳ ಆಕೃತಿಯನ್ನು ನಮ್ಮ ದೇಹ ನೆನಪಿನಲ್ಲಿಟ್ಟುಕೊಳ್ಳುತ್ತದೆ. ಮುಂದೆ ಏನಾದರೂ ಕೊರೊನಾ ವೈರಸ್‌ ನಮ್ಮ ದೇಹ ಪ್ರವೇಶಿಸಿತು ಎಂದರೆ ಕೂಡಲೇ ಅದರ ಮೇಲಿನ ಮುಳ್ಳಿನ ರೀತಿಯ ಆಕೃತಿಗಳನ್ನು ಗುರುತಿಸಿ, ಅದನ್ನು ಪುಡಿಗಟ್ಟುವಂಥ ಪ್ರತಿಕಾಯಗಳನ್ನು ಅತ್ಯಂತ ವೇಗವಾಗಿ ನಮ್ಮ ದೇಹ ಬಿಡುಗಡೆ ಮಾಡಿ, ವೈರಸ್‌ ಅನ್ನು ಹೊಡೆದುರುಳಿಸುತ್ತದೆ!

ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌
ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌ ಅನ್ನು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ ಮತ್ತು ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ(ಎನ್‌ಐವಿ) ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಭಾರತದಲ್ಲಿ ಸೋಂಕಿತರೊಬ್ಬರಿಂದ ಕೊರೊನಾ ವೈರಸ್‌ಗಳನ್ನು ಹೊರತೆಗೆದ ಎನ್‌ಐವಿ, ಲಸಿಕೆ ಅಭಿವೃದ್ಧಿಗಾಗಿ ಆ ಮಾದರಿಯನ್ನು ಭಾರತ್‌ ಬಯೋಟೆಕ್‌ಗೆ ಕೊಟ್ಟಿತ್ತು. ಭಾರತ್‌ ಬಯೋಟೆಕ್‌ ಹೇಗೆ ಲಸಿಕೆಯನ್ನು ಅಭಿವೃದ್ಧಿ ಮಾಡಿತು?

ಇನ್‌ಆ್ಯಕ್ಟಿವೇಟೆಡ್‌ ವೈರಸ್‌
1. ಮೊದಲ ಹಂತವಾಗಿ ಅದು ಎನ್‌ಐವಿಯಿಂದ ಸಂಗ್ರಹಿಸಿದ ಕೊರೊನಾ ವೈರಸ್‌ ಅನ್ನು ಪ್ರಯೋಗಾಲಯದಲ್ಲೇ ಕೃತಕವಾಗಿ ಬೆಳೆಸಿತು. ಅನಂತರ ರಾಸಾಯನಿಕಗಳು, ರೇಡಿಯೇಶನ್‌ಗಳು ಅಥವಾ ವಿವಿಧ ತಾಪಮಾನದ ಮೂಲಕ ಕೋವಿಡ್‌ನ‌ ರೋಗಕಾರಕ ಶಕ್ತಿಯನ್ನು ಸಂಪೂರ್ಣ ತಗ್ಗಿಸಲಾಯಿತು. ಅಂದರೆ ಆ ವೈರಸ್‌ಗೆ ರೋಗ ಉಂಟುಮಾಡುವ ಸಾಮರ್ಥ್ಯ ಹಾಗೂ ದ್ವಿಗುಣಗೊಳ್ಳುವ ಸಾಮರ್ಥ್ಯ ಹೋಗಿಬಿಡುತ್ತದೆ. ಇದೇ ಕೊವ್ಯಾಕ್ಸಿನ್‌ ಲಸಿಕೆ .

2. ಕೋವಿಡ್‌ ರೋಗಕಾರಕ ಶಕ್ತಿ ಕಳೆದುಕೊಂಡು ನಿಷ್ಕ್ರಿಯಗೊಂಡಿದ್ದರೂ ಅದರ ದೇಹರಚನೆಯಲ್ಲಿ ಬದಲಾವಣೆಯೇನೂ ಆಗಿರುವುದಿಲ್ಲ. ಲಸಿಕೆಯ ರೂಪದಲ್ಲಿ ಈ ನಿಷ್ಕ್ರಿಯ ವೈರಸ್‌ಗಳನ್ನು ಮಾನವನ ದೇಹಕ್ಕೆ ನುಸುಳಿಸಲಾಗುತ್ತದೆ. ಜತೆಗೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ಪ್ರಚೋದಿಸುವಂಥ ಅಂಶಗಳೂ ಈ ಲಸಿಕೆಯಲ್ಲಿ ಇರುತ್ತವೆ. ಕೂಡಲೇ ನಮ್ಮ ರೋಗ ನಿರೋಧಕ ವ್ಯವಸ್ಥೆಯು ಈ ನಿಷ್ಕ್ರಿಯ ಕೊರೊನಾ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತದೆ. ಅಲ್ಲದೇ ಹೋರಾಡುವ ಮುಂದೆ ಶತ್ರುವಿನ ಸಾಮರ್ಥ್ಯವನ್ನು ಸರಿಯಾಗಿ ನೆನಪಿಟ್ಟುಕೊಳ್ಳುತ್ತದೆ. ಮುಂದೆ ರೋಗಕಾರಕ ಕೊರೊನಾ ದೇಹ ಪ್ರವೇಶಿಸಿತು ಎಂದಿಟ್ಟುಕೊಳ್ಳಿ ಆಗ ಅದು ಕೂಡಲೇ ತನ್ನ ನೆನಪಿನ ಶಕ್ತಿಯ ಆಧಾರದಲ್ಲಿ ಅಪಾರ ಪ್ರಮಾಣದಲ್ಲಿ ನಿರ್ದಿಷ್ಟ ರೂಪದ ಪ್ರತಿಕಾಯಗಳನ್ನು ಬಿಡುಗಡೆ ಮಾಡಿ, ಅದನ್ನು ನಾಶ ಮಾಡುತ್ತದೆ.

ಟಾಪ್ ನ್ಯೂಸ್

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.