ಭಾರತೀಯ ವೀರ ಯೋಧರ ಶಕ್ತಿಗೆ ಮಿಗಿಲಾದುದಿಲ್ಲ!

ಇಂದು ಸೇನಾ ದಿನ

Team Udayavani, Jan 15, 2021, 7:05 AM IST

ಭಾರತೀಯ ವೀರ ಯೋಧರ ಶಕ್ತಿಗೆ ಮಿಗಿಲಾದುದಿಲ್ಲ!

ಭಾರತದಲ್ಲಿ ಪ್ರತೀ ವರ್ಷ ಜನವರಿ 15 ಅನ್ನು ಸೇನಾ ದಿನವನ್ನಾಗಿ ಆಚರಿಸಲಾಗುತ್ತದೆ. ಯೋಧರ ಶೌರ್ಯ, ಸಾಹಸಗಳನ್ನು ಪ್ರಶಂಸಿಸಿ ಅವರನ್ನು ಗೌರವಿಸುವ ಜತೆಯಲ್ಲಿ ದೇಶಕ್ಕಾಗಿ ಹುತಾತ್ಮರಾದ ಯೋಧರ ಸ್ಮರಣೆಗೆ ಸಮರ್ಪಿತವಾದ ದಿನ ಇದಾಗಿದೆ. ದೇಶದ ಎಲ್ಲ ಸೇನಾ ಕಮಾಂಡ್‌ಗಳ ಪ್ರಧಾನ ಕಚೇರಿಗಳಲ್ಲಿ ದಿನವನ್ನು ಆಚರಿಸಲಾಗುತ್ತಿದೆ.  ಸೇನಾ ದಿನದ ವಿಶೇಷತೆಯೇನು?  ಸ್ವಾತಂತ್ರ್ಯನಂತರ ಭಾರತೀಯ ಸೇನೆಯ ಸಾಮರ್ಥ್ಯ ಹೇಗೆ ವೃದ್ಧಿಸಿದೆ? ಇಲ್ಲಿದೆ ಮಾಹಿತಿ.

ಜನವರಿ 15ರಂದೇ ಏಕೆ? :

ಸ್ವಾತಂತ್ರ್ಯನಂತರ ದೇಶದಲ್ಲಿ ಹೈದರಾಬಾದ್‌ ಸೇರಿದಂತೆ ಅನೇಕ ಸಂಸ್ಥಾನಗಳಿಂದ ತೊಂದರೆ ಎದುರಾಗಲಾರಂಭಿಸಿದ್ದಾಗ, ಸಮಸ್ಯೆಬಗೆಹರಿಸಲು ಸೇನೆಯು ಮುಂದೆ ಬರಬೇಕಾಯಿತು. ಆ ಸಮಯದಲ್ಲೂ ಭಾರತೀಯ ಸೇನೆಯ ಮುಖ್ಯಸ್ಥರು ಬ್ರಿಟಿಷ್‌ ಮೂಲದವರೇ ಆಗಿದ್ದರು. 15 ಜನವರಿ 1949ರಂದು ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಅವರು ಸ್ವತಂತ್ರ ಭಾರತದ ಮೊದಲ ಭಾರತೀಯ ಸೇನಾ ಪ್ರಮುಖರಾದರು. ಅನಂತರದಿಂದ ಪ್ರತೀ ವರ್ಷವೂ ಜನವರಿ 15ರಂದು ಸೇನಾ ದಿವಸವನ್ನು ಆಚರಿಸುತ್ತಾ ಬರಲಾಗುತ್ತಿದೆ. ಆ ಸಮಯದಲ್ಲಿ ಸೇನೆಯಲ್ಲಿ ಸುಮಾರು 2 ಲಕ್ಷದಷ್ಟು ಸೈನಿಕರಿದ್ದರು.

2014ರಿಂದ ಬದಲಾಗುತ್ತಿದೆ ಸಶಸ್ತ್ರ ಪಡೆಗಳ ಬಲ :

2014ರಿಂದ ಭಾರತೀಯ ಸಶಸ್ತ್ರಪಡೆಯ ಬಲ ಗಣನೀಯವಾಗಿ ವೃದ್ಧಿಸುತ್ತಿದೆ  ರಫೇಲ್‌ನಂಥ ಅತ್ಯಾಧುನಿಕ ಯುದ್ಧ ವಿಮಾನಗಳ ಖರೀದಿ, ದೇಶೀಯ ತೇಜಸ್‌ ಯುದ್ಧ ವಿಮಾನಗಳ ಉನ್ನತೀಕರಣ, ಕ್ಷಿಪಣಿಗಳು, ಜಲಾಂತರ್ಗಾಮಿ ವಿರೋಧಿ ವಿಮಾನಗಳ ಮೂಲಕ ಸಶಸ್ತ್ರಪಡೆಗಳು ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿ ಕಾಣುತ್ತಿವೆ. 2016ರ ಸೆಪ್ಟಂಬರ್‌ ತಿಂಗಳಲ್ಲಿ ಪಾಕಿಸ್ಥಾನದ ನೆಲಕ್ಕೇ ನುಗ್ಗಿ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ್ದು, 2017ರಲ್ಲಿ ಸುಮಾರು ಎರಡು ತಿಂಗಳುಗಳ ಕಾಲ ಡೋಕ್ಲಾಂ ಪ್ರದೇಶದಲ್ಲಿ ಚೀನಿ ಸೈನಿಕರಿಗೆ ಎದುರು ನಿಂತು ಅವರನ್ನು ಹಿಮ್ಮೆಟ್ಟಿಸಿದ್ದು, 2019ರಲ್ಲಿ ಪಠಾಣ್‌ಕೋಟ್‌ ದಾಳಿಗೆ ಪ್ರತ್ಯುತ್ತರವಾಗಿ ಪಾಕಿಸ್ಥಾನದ ಬಾಲಾಕೋಟ್‌ ಮೇಲೆ ವಾಯುದಾಳಿ ನಡೆಸಿದ್ದು, 2020ರಲ್ಲಿ ಗಾಲ್ವಾನ್‌ ಕಣಿವೆಯಲ್ಲಿ ಚೀನದ ಸೈನಿಕರ ಹೆಡೆಮುರಿಕಟ್ಟಿರುವುದು, ಈಗಲೂ ಲಕ್ಷಾಂತರ ಸಂಖ್ಯೆಯಲ್ಲಿ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ, ಶೀತಗಾಳಿಯ ನಡುವೆ ಭಾರತೀಯ ಸೇನೆಯು ತನ್ನ ಸೈನಿಕರನ್ನು ನಿಯೋಜಿಸಿರುವುದೆಲ್ಲ, ಬದಲಾದ ಭಾರತೀಯ ಸೇನೆಯ ಬಲಕ್ಕೆ ಪ್ರತೀಕ.

ಹಲವು  ಬಿಕ್ಕಟ್ಟು-ಯುದ್ಧಗಳನ್ನು  ಎದುರಿಸುತ್ತಾ… :

ಭಾರತೀಯ ಸೇನೆಯು ದಶಕಗಳಿಂದ ಪಾಕಿಸ್ಥಾನ ಹಾಗೂ ಚೀನದೊಂದಿಗೆ ಗಡಿ ಭಾಗದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿರುವುದರಿಂದ, ವಿವಿಧ ಪರಿಸ್ಥಿತಿಗಳಲ್ಲಿ, ವಾತಾವರಣಗಳಲ್ಲಿ ಹೋರಾಡುವ ಅದರ ಶಕ್ತಿ ವೃದ್ಧಿಸಿದೆ. ಆರಂಭಿಕ ಹಂತದಲ್ಲಿ  ಸೇನೆಯು ಮುಖ್ಯ ಗುರಿ ಗಡಿ ಭಾಗದ ರಕ್ಷಣೆಯಾಗಿತ್ತು. ಆದರೆ ಅನಂತರದ ವರ್ಷಗಳಲ್ಲಿ ಸೇನೆಯು ಆಂತರಿಕ  ಭದ್ರತೆ ನೀಡುವಲ್ಲಿ(ಮುಖ್ಯವಾಗಿ ಪ್ರತ್ಯೇಕತಾವಾದ  ಹೆಚ್ಚಿದ್ದ ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ) ತನ್ನ ಗಮನ ಹರಿಸಿತು. ಭಾರತೀಯ ಸೇನೆಯು ಇದುವರೆಗೂ 1947-48ರ ಭಾರತ ಪಾಕ್‌ ಯುದ್ಧ, 1948ರಲ್ಲಿ ಹೈದರಾಬಾದ್‌ ನಿಜಾಮನ ವಿರುದ್ಧ ಆಪರೇಷನ್‌ ಪೋಲೋ, 1962ರಲ್ಲಿ ಚೀನ ವಿರುದ್ಧದ  ಯುದ್ಧ, 1965ರಲ್ಲಿ ಪಾಕ್‌ ವಿರುದ್ಧ, 1971ರಲ್ಲಿ ಬಾಂಗ್ಲಾದೇಶ ವಿಮೋಚನಾ ಯುದ್ಧ(ಈ ವಿಜಯಕ್ಕೀಗ 50 ವರ್ಷ), 1998ರಲ್ಲಿ ಕಾರ್ಗಿಲ್‌ ಯುದ್ಧವನ್ನು ಎದುರಿಸಿದೆ.

ರಕ್ಷಣ  ಪರಿಕರಗಳ ರಫ್ತು ಹೆಚ್ಚಳ :

ಸೇನೆಗೆ ಅಗತ್ಯವಿರುವ ರಕ್ಷಣ ಪರಿಕರಗಳ ಸ್ವದೇಶಿ ಉತ್ಪಾದನೆಗೆ  ಕೆಲವು ವರ್ಷಗಳಿಂದ ಒತ್ತು ನೀಡಲಾಗುತ್ತಿದೆ. ಗಮನಾರ್ಹ ಸಂಗತಿಯೆಂದರೆ, 2014ರಲ್ಲಿ 2000 ಕೋಟಿಯಷ್ಟಿದ್ದ ರಕ್ಷಣ ಪರಿಕರಗಳ ರಫ್ತು, ಕಳೆದ ಎರಡು ವರ್ಷಗಳಲ್ಲಿ 17 ಸಾವಿರ ಕೋಟಿಗೆ ಏರಿದೆ. ಮುಂದಿನ ಐದು ವರ್ಷಗಳಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ ನಿರ್ಮಾಣಗಳ ಮೂಲಕ ರಫ್ತು ಪ್ರಮಾಣವನ್ನು  35,000 ಕೋಟಿಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ.

ಕೊರೆವ ಚಳಿಯಲ್ಲೂ..! :

ಭಾರತೀಯ ಸೇನಾಪಡೆಯ ಯೋಧರು ಸಿಯಾಚಿನ್‌ನ ಭೀಕರ ಚಳಿಯಲ್ಲೂ ಗಡಿಗಳನ್ನು ಕಾಯುತ್ತಾರೆ. ಇಲ್ಲಿನ ಸರಾಸರಿ ತಾಪಮಾನವು -50 ಡಿಗ್ರಿಗಳಷ್ಟಾಗಿರುತ್ತದೆ. ಹಿಮ ಮತ್ತು ತಂಪಾದ ಗಾಳಿ ಕೂಡ ದೊಡ್ಡ ಅಪಾಯವನ್ನುಂಟು­ಮಾಡುತ್ತದೆ. ಸಿಯಾಚಿನ್‌ ಭೂಮಿಯ ಮೇಲಿನ ಅತೀ ಎತ್ತರದ ಯುದ್ಧ ಭೂಮಿಗಳಲ್ಲಿ ಒಂದು. ಈ ಪ್ರದೇಶದ ಎತ್ತರ ಸಮುದ್ರ ಮಟ್ಟದಿಂದ 6,000 ಮೀಟರ್‌ (20,000 ಅಡಿ).

ವಿಶ್ವಸಂಸ್ಥೆಯ ಶಾಂತಿಪಾಲನೆ ಕಾರ್ಯಾಚರಣೆಗಳಲ್ಲಿ :

ಭಾರತ ಸೇನೆಯು ಆಂತರಿಕ ಕಲಹ ಎದುರಿಸುತ್ತಿದ್ದ ಅನೇಕ ರಾಷ್ಟ್ರಗಳಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನ ಪಡೆಯ ಭಾಗವಾಗಿ ಅನೇಕ ಬಾರಿ ಭಾಗವಹಿಸಿದೆ. ಸಿಪ್ರಸ್‌, ಲೆಬನಾನ್‌, ಕಾಂಗೋ, ಅಂಗೋಲಾ, ಕಾಂಬೋಡಿಯಾ, ವಿಯೆಟ್ನಾಂ, ನಮೀಬಿಯಾ, ಲೈಬೀರಿಯಾ, ಮೊಜಾಂಬಿಕ್‌ ಮತ್ತು ಸೊಮಾಲಿಯಾಗಳಲ್ಲಿ ಭಾರತೀಯ ಸೇನೆಯು ವಿಶ್ವಸಂಸ್ಥೆಯ ಪರವಾಗಿ ಶಾಂತಿಪಾಲನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಇತಿಹಾಸವಿದೆ. ಇನ್ನು ಕೊರಿಯನ್‌ ಯುದ್ಧ ಸಂದರ್ಭದಲ್ಲೂ ಗಾಯಗೊಂಡವರಿಗೆ ಶುಶ್ರೂಶೆ ನೀಡಲು ಪ್ಯಾರಾಮೆಡಿಕಲ್‌ ಸಿಬಂದಿಯನ್ನೂ ಕಳುಹಿಸಿಕೊಟ್ಟಿತ್ತು ಭಾರತ.

ಅತೀದೊಡ್ಡ ಸೇನೆಗಳು :

1) ಚೀನ 2) ಭಾರತ 3) ಅಮೆರಿಕ

4) ಉ.ಕೊರಿಯಾ 5) ರಷ್ಯಾ

ಭಾರತದ ಒಟ್ಟು  ಸೈನಿಕರು :

35,44,000

ಕಾರ್ಯನಿರ್ವಹಿಸುತ್ತಿರುವವರು :

14,44,000

ಮೀಸಲು ಸೈನಿಕರು :

21,00,000

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.