ಅಂತಾರಾಷ್ಟ್ರೀಯ ವಿಚಾರಗಳಿಗೆ ಪರಿಹಾರ ಸೂಚಿಸಲು ವಿಫಲ
Team Udayavani, Jan 27, 2021, 7:05 AM IST
ವಿಶ್ವಸಂಸ್ಥೆ: ಅಂತಾರಾಷ್ಟ್ರೀಯವಾಗಿರುವ ಶಾಂತಿ ಮತ್ತು ಭದ್ರತಾ ವಿಚಾರಗಳ ಬಗ್ಗೆ ಈಗ ಇರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಭಾರತ ಅಭಿಪ್ರಾಯಪಟ್ಟಿದೆ.
ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ರಾಯಭಾರಿಯಾಗಿರುವ ಟಿ.ಎಸ್.ತಿರುಮೂರ್ತಿ ಮಾತನಾಡಿ, ಭದ್ರತಾ ಮಂಡಳಿಯಲ್ಲಿ ನಿಜವಾಗಿಯೂ ಸದಸ್ಯತ್ವಕ್ಕೆ ಅರ್ಹರಾಗಿರುವ ದೇಶಗಳನ್ನು ಹೊರಗಿಡಲಾಗಿದೆ ಎಂದು ಹೇಳಿದ್ದಾರೆ.
ಭದ್ರತಾ ಮಂಡಳಿಯಲ್ಲಿ ನಿಜಕ್ಕೂ ಆಗಬೇಕಾಗಿರುವ ಸುಧಾರಣೆಗಳು ಆಗಿಯೇ ಇಲ್ಲವೆಂದು ಅಂತರ್ ಸರ್ಕಾರಿ ಮಾತುಕತೆ ಸಮಿತಿ ಸಮಾವೇಶದಲ್ಲಿ ಹೇಳಿದ್ದಾರೆ. 13 ವರ್ಷಗಳ ಹಿಂದೆಯೇ ಅಂತರ್ ಸರ್ಕಾರಿ ಮಾತುಕತೆ ಸಮಿತಿ ರಚನೆಯಾಗಿದ್ದರೂ, ನಿರೀಕ್ಷೆಗೆ ತಕ್ಕಂತೆ ಅದು ಕೆಲಸ ಮಾಡುತ್ತಿಲ್ಲ. ಆರಂಭದ ದಿನಗಳಲ್ಲಿ ಇದ್ದಂತೆ ಜಗತ್ತು ಇಲ್ಲ. ಮುಂದಕ್ಕೆ ಸಾಗುವ ವಿಚಾರದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಹೇಳಿದ್ದಾರೆ ತಿರುಮೂರ್ತಿ.