ಮೌಂಟೆನ್‌ ಬೈಕ್‌ ಸೈಕ್ಲಿಂಗ್ ಗೆ ಸಿದ್ಧತೆ

18ರಿಂದ ಸ್ಪರ್ಧೆ ಆರಂಭ­ ! 13 ಸಮಿತಿ ರಚನೆ­ ಪೂರ್ವಭಾವಿ ಸಭೆ

Team Udayavani, Feb 6, 2021, 7:36 PM IST

Mountain bike cycling

ಗದಗ: 17ನೇ ರಾಷ್ಟ್ರೀಯ ಸೀನಿಯರ್‌ ಜ್ಯೂನಿಯರ್‌ ಮತ್ತು ಸಬ್‌ ಜ್ಯೂನಿಯರ್‌ ಮೌಂಟೆನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ ಶಿಪ್‌  ಸ್ಪರ್ಧೆಯನ್ನು ಫೆ. 18ರಿಂದ 21ರ ವರೆಗೆ ಸಮೀಪದ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ನೂತನವಾಗಿ ನಿರ್ಮಿಸಿರುವ ಮೌಂಟೆನ್‌ ಬೈಕ್‌ ಟ್ರ್ಯಾಕ್‌ನಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗಿದ್ದು, ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಸೂಚಿಸಿದರು. ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜರುಗಿದ 17ನೇ ರಾಷ್ಟ್ರೀಯ ಸೀನಿಯರ್‌, ಜ್ಯೂನಿಯರ್‌ ಮತ್ತು ಸಬ್‌ ಜ್ಯೂನಿಯರ್‌ ಮೌಂಟೆನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ ಶಿಪ್‌ ಪೂರ್ವಬಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಯಶಸ್ಸಿಗೆ ಸ್ವಾಗತ ಸಮಿತಿ, ಕಾರ್ಯಕ್ರಮ ಸಂಘಟನಾ ಸಮಿತಿ, ಹಣಕಾಸು ಸಮಿತಿ, ಪ್ರಚಾರ ಸಮಿತಿ ಸೇರಿದಂತೆ ಒಟ್ಟು 13 ಸಮಿತಿಗಳನ್ನು ರಚಿಸಲಾಗಿದೆ. ಸಮಿತಿಗಳು ಸವಹಿಸಿದ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.

ಹೊರ ರಾಜ್ಯಗಳಿಂದ 600 ಸ್ಪರ್ಧಿಗಳು ಆಗಮಿಸುವುದರಿಂದ ಸ್ಪರ್ಧಿಗಳಿಗೆ ಊಟ, ವಸತಿ, ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ಕೊರತೆ ಉಂಟಾಗದಂತೆ ನಿಗಾ ವಹಿಸಬೇಕು. ಕೋವಿಡ್‌-19 ಹಿನ್ನೆಲೆಯಲ್ಲಿ ವಸತಿ ಸ್ಥಳಗಳು, ಸ್ನಾನದ ಗೃಹ, ಶೌಚಾಲಯಗಳು ಸೂಕ್ತ ರೀತಿಯಲ್ಲಿ ಇರುವಂತೆ ಕಡ್ಡಾಯವಾಗಿ ಸ್ಯಾನಿಟೈಸ್‌ ಮಾಡಬೇಕು ಎಂದು ತಿಳಿಸಿದರು.

ಜಿಪಂ ಸಿಇಒ ಡಾ| ಆನಂದ ಕೆ.ಮಾತನಾಡಿ, ಹೊರ ರಾಜ್ಯಗಳಿಂದ ಬರುವ ಸ್ಪರ್ಧಿಗಳಿಗೆ ಕುಂದುಕೊರತೆ ಉಂಟಾಗದಂತೆ ಮೂಲ ಸೌಕರ್ಯಗಳಾದ ಆಹಾರ, ವಸತಿ,ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸುವ್ಯವಸ್ಥಿತವಾಗಿ ಕಲ್ಪಿಸಿಕೊಡಬೇಕು ಎಂದರು.

ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಜಿ. ವಿಶ್ವನಾಥ ಸಭೆಗೆ ಕ್ರೀಡಾ ಸ್ಪರ್ಧೆಗಳ ವಿವರದ ಮಾಹಿತಿ ನೀಡಿ, ಪುರುಷರ ವಿಭಾಗದಲ್ಲಿ 19 ವರ್ಷದೊಳಗಿನವರಿಗೆ 30 ಕಿ.ಮೀ, 40 ಕಿ.ಮೀ. ಇಳಿಜಾರು ಪ್ರದೇಶ ಮತ್ತು ಮಹಿಳಾ ವಿಭಾಗದಲ್ಲಿ 19  ವರ್ಷದೊಳಗಿನವರಿಗೆ 20 ಕಿ.ಮೀ,40 ಕಿ.ಮೀ. ಹಾಗೂ ಪುರುಷ ಮತ್ತು ಮಹಿಳೆಯರ ಮಿಶ್ರಿತ ರಿಲೇ ವಿಭಾಗದಲ್ಲಿ ಎರಡು ಪುರಷ ಮತ್ತು ಎರಡು ಮಹಿಳಾ ಸ್ಪರ್ಧಿಗಳನ್ನು ಬಿಡಲಾಗುವುದು. ಪುರಷರ ಜ್ಯೂನಿಯರ್‌ ವಿಭಾಗದಲ್ಲಿ (2002-03 ರೊಳಗೆ ಜನಿಸಿದ್ದು) 17ರಿಂದ 18 ವರ್ಷದೊಳಗಿನವರಿಗೆ 20 ಕಿ.ಮೀ ಮತ್ತು 30 ಕಿಮೀ. ಮಹಿಳಾ ಜ್ಯೂನಿಯರ್‌ ವಿಭಾಗದಲ್ಲಿ (2002-03 ರೊಳಗೆ ಜನಿಸಿದ್ದು) 17ರಿಂದ 18 ವರ್ಷದೊಳಗಿನವರಿಗೆ 15 ಕಿಮೀ, 20 ಕಿಮೀ ಮತ್ತು ರಿಲೇ ಪುರುಷ ಮತ್ತು ಮಹಿಳೆ ಮಿಶ್ರ ವಿಭಾಗದ ಸ್ಪರ್ಧೆಯಲ್ಲಿ ಆಯೋಜಿಸಿದೆ.

ಇದನ್ನೂ ಓದಿ : ಹನ್ನೊಂದು ತಿಂಗಳ ನಂತರ ಚಲನಚಿತ್ರ ಮಂದಿರ ಓಪನ್‌

ಸಬ್‌ ಜ್ಯೂನಿಯರ್‌ ಪುರುಷರ ವಿಭಾಗದಲ್ಲಿ(2004-05 ರೊಳಗೆ ಜನಿಸಿದ್ದು)15ರಿಂದ 16 ವರ್ಷದೊಳಗಿನವರಿಗೆ 10 ಕಿಮೀ, 20  .ಮೀ ಮತ್ತು ಸಬ್‌ ಜ್ಯೂನಿಯರ್‌ ಮಹಿಳಾ ವಿಭಾಗದಲ್ಲಿ  (2004-05 ರೊಳಗೆ ಜನಿಸಿದ್ದು) 15ರಿಂದ 16 ವರ್ಷದೊಳಗಿನವರಿಗೆ 10 ಕಿ.ಮೀ,15 ಕಿ.ಮೀ. ಬಾಲಕರ ವಿಭಾಗದಲ್ಲಿ (2006-08 ರೊಳಗೆ ಜನಿಸಿದ್ದು) 14 ವರ್ಷದೊಳಗಿನವರಿಗೆ 10 ಕಿ.ಮೀ, 15 ಕಿ.ಮೀ,  ಬಾಲಕಿಯರ ವಿಭಾಗದಲ್ಲಿ (2006-08 ರೊಳಗೆ ಜನಿಸಿದ್ದು) 14  ವರ್ಷದೊಳಗಿನವರಿಗೆ 10 ಕಿ.ಮೀ, 15 ಕಿಮೀ. ಸ್ಪರ್ಧೆಗಳು ಜರುಗಲಿವೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಉಸ್ಮಾನ್‌ ಎ.,  ರಾಜ್ಯ ಸೈಕ್ಲಿಂಗ್‌ ಸಂಸ್ಥೆ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಟಾಪ್ ನ್ಯೂಸ್

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

1-modi

Varanasi; 25000 ಮಹಿಳೆಯರ ಜತೆ ಸ್ವಕ್ಷೇತ್ರದಲ್ಲಿ ಪಿಎಂ ಸಂವಾದ

ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

Mangaluru ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

MOdi (3)

Odisha ರಾಜ್ಯ ಸರಕಾರವು ಭ್ರಷ್ಟರ ಹಿಡಿತಕ್ಕೆ ಸಿಲುಕಿದೆ: ಪಿಎಂ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

Mangaluru ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

Rain ಕೊಡಗಿನಲ್ಲಿ ಉತ್ತಮ ಮಳೆ: ಅಂಗಡಿ, ಮನೆಗಳಿಗೆ ನುಗ್ಗಿದ ನೀರು

Rain ಕೊಡಗಿನಲ್ಲಿ ಉತ್ತಮ ಮಳೆ: ಅಂಗಡಿ, ಮನೆಗಳಿಗೆ ನುಗ್ಗಿದ ನೀರು

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

police USA

China ಶಾಲೆಯಲ್ಲಿ ಚಾಕು ಇರಿತ: 5 ಮಂದಿಗೆ ಗಾಯ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.