ರೋಣ; ಚೈತನ್ಯ ರಥಯಾತ್ರೆಗೆ ಅದ್ಧೂರಿ ಸ್ವಾಗತ
Team Udayavani, Feb 9, 2021, 6:42 PM IST
ರೋಣ: ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯ ನಿರಂತರ ಅನ್ಯಾಯ ಕ್ಕೊಳಗಾಗುತ್ತಿದೆ. ಆದ್ದರಿಂದ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ಸದಾಶಿವ ಆಯೋಗ ವರದಿ ಅನುಷ್ಠಾನಗೊಳ್ಳಬೇಕು ಎಂದು ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಪ್ರಕಾಶ ಹೊಸಳ್ಳಿ ಆಗ್ರಹಿಸಿದರು.
ಪಟ್ಟಣಕ್ಕೆ ಆಗಮಿಸಿದ ಮಾದಿಗರ ಚೈತನ್ಯ ರಥ ಯಾತ್ರೆಗೆ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನ್ಯಾ| ಸದಾಶಿವ ಆಯೋಗ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ 8 ವರ್ಷ ಗತಿಸುತ್ತ ಬಂದಿದೆ. ವರದಿ ಅನುಷ್ಠಾನಕ್ಕೆ ಮಾದಿಗ ಜನಾಂಗ ನಿರಂತರ ಹೋರಾಡುತ್ತಿದೆ. ಆದರೆ ಸರ್ಕಾರ ಮಾತ್ರ ಉದಾಸೀನತೆ ತೋರುತ್ತಿದೆ. ಕೂಡಲೇ ವರದಿ ಯಥಾವತ್ ಜಾರಿಯಾಗಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಇದನ್ನು ಓದಿ :
ಯಾತ್ರೆಗೆ ಭವ್ಯ ಸ್ವಾಗತ: ನವಲಗುಂದ ಮಾರ್ಗವಾಗಿ ರೋಣ ಪಟ್ಟಣಕ್ಕೆ ಆಗಮಿಸಿದ ಮಾದಿಗ ಚೈತನ್ಯ ರಥಯಾತ್ರೆಗೆ ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ, ಡೊಳ್ಳು, ಕಲಾ ತಂಡಗಳ ಮೂಲಕ ಭವ್ಯ ಸ್ವಾಗತ ಕೋರಲಾಯಿತು. ಈ ವೇಳೆ ಹೆಣ್ಣೂರು ಲಕೀÒ$¾ನಾರಾಯಣ, ಅಂಬಣ್ಣ ಅರೋಲಿಕರ, ನಾಗರಾಜ ಗುಟ್ಟಳ್ಳಿ, ರಾಮಚಂದ್ರ ಕಾಂಬಳೆ, ನಾಗರಾಜ ಕೋಡಿಗೆಹಳ್ಳಿ, ಎನ್. ವೆಂಕಟೇಶ್ ಹೊಸಕೋಟೆ, ಎನ್. ಕುಮಾರ್ ಹೊಸಕೋಟೆ, ಕೆ.ದೇವರಾಜ್ ಹೊಸಕೋಟೆ, ಹರೀಶ್ ಗುಟ್ಟಳ್ಳಿ, ರಂಗರಾಜಣ್ಣ, ವೆಂಕಟ ರಮಣಸ್ವಾಮಿ, ರಾಮದಾಸ್ ಪೂಜಾರಿ ಇತರರಿದ್ದರು.