ಬೇವಿನಹಳ್ಳಿ ಗ್ರಾಪಂ ಬಿಜೆಪಿ ಬೆಂಬಲಿತರ ವಶ
Team Udayavani, Feb 11, 2021, 2:47 PM IST
ಗೌರಿಬಿದನೂರು: ಗ್ರಾಪಂ ಚುನಾವಣೆಯಲ್ಲಿ ತಾಲೂಕಿನಲ್ಲಿ ಬಿಜೆಪಿ 100ಕ್ಕೂ ಹೆಚ್ಚು ಬಿಜೆಪಿ ಬೆಂಬಲಿತ ಸದಸ್ಯರು ಗೆದ್ದಿದ್ದು ತಾಲೂಕಿನ ತೊಂಡೇಬಾವಿ ಹೋಬಳಿ ಬೇವಿನಹಳ್ಳಿ ಪಂಚಾಯ್ತಿಯಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷರು ಆಯ್ಕೆಯಾಗಿರುವುದು ಮುಂಬರುವ ತಾಪಂ, ಜಿಪಂ ಸೇರಿದಂತೆ ಎಲ್ಲಾ ಚುನಾವಣೆಯಲ್ಲಿ ಗೆಲ್ಲುವ ಮುನ್ಸೂಚನೆ ಎಂದು ಬಿಜೆಪಿ ಪರಿಶಿಷ್ಟ ವರ್ಗಗಳ ವಿಭಾಗದ ಮುಖಂಡ ಬಿ.ವಿ.ಗೋಪಿನಾಥ್ ತಿಳಿಸಿದರು.
ಬೇವಿನಹಳ್ಳಿ ಗ್ರಾಪಂಗೆ ಬಿಜೆಪಿಯಿಂದ ಅಧ್ಯಕ್ಷರಾಗಿ ಶಿವಾಜಿರಾವ್ \ಆಯ್ಕೆಯಾಗಿದ್ದು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಾಗೂ ರಾಜ್ಯದ ಯಡಿಯೂರಪ್ಪ ನೇತೃತ್ವದ ಸರ್ಕಾರಗಳ ದಲಿತ ಹಾಗೂ ಹಿಂದುಳಿದವರ ಪರವಾದ ಯೋಜನೆಗಳೇ ಕಾರಣ ಎಂದರು.
ತಾಲೂಕಿನಲ್ಲಿ ಮಾಜಿ ಶಾಸಕರಾದ ಎನ್. ಜ್ಯೋತಿರೆಡ್ಡಿ ಹಾಗೂ ಬಿಜೆಪಿ ರಾಜ್ಯ ಮುಖಂಡರಾದ ಎನ್. ಎಂ.ರವಿನಾರಾಯಣರೆಡ್ಡಿ ಅವರ ನೇತೃತ್ವದಲ್ಲಿ ಉತ್ತಮ ಫಲಿತಾಂಶ ಬಂದಿದೆ ಎಂದರು. ಪಂಚಾಯ್ತಿ ಮುಖಂಡರಾದ ನಿಜಲಿಂಗಪ್ಪ, ಉಮಾಶಂಕರ್, ಪೆರುಮಾಲ್, ನಾಗರಾಜ್, ಮಹದೇವ್, ಶ್ರೀರಾಮಪ್ಪ, ಚಂದ್ರಶೇಖರ್ ಸ್ವಾಮಿ, ಕಾಮಗಾನಹಳ್ಳಿ ಮಲ್ಲೇಶ್, ಚಿಕ್ಕ ಮಲ್ಲೇಕೆರೆ ನಾಗರಾಜ್, ಬಸವನಹಳ್ಳಿ ಸೋಮೇಶಪ್ಪ, ದೊಡ್ಡ ಮಲ್ಲೆಕೆರೆ ವಿಜಯಕುಮಾರ್, ನರಸಿಂಹರೆಡ್ಡಿ ಬಸವನಹಳ್ಳಿ ಉಪಸ್ಥಿತರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ