ಚೀನ ಮಿಲಿಟರಿ ವೆಚ್ಚ ಹೆಚ್ಚಳ  ಜಾಗತಿಕ ಅಶಾಂತಿಗೆ ನಾಂದಿ


Team Udayavani, Mar 6, 2023, 6:00 AM IST

ಚೀನ ಮಿಲಿಟರಿ ವೆಚ್ಚ ಹೆಚ್ಚಳ  ಜಾಗತಿಕ ಅಶಾಂತಿಗೆ ನಾಂದಿ

ಜಾಗತಿಕ ಅಶಾಂತಿಗೆ ಕಾರಣವಾಗಬಲ್ಲ ದೇಶಗಳ ಪಟ್ಟಿಯಲ್ಲಿ ಚೀನ ಮೇಲಿನ ಸಾಲಿನಲ್ಲಿದೆ ಎಂಬುದು ಜಗಜ್ಜಾಹೀರಾಗಿರುವ ವಿಚಾರ. ಅಮೆರಿಕವನ್ನು ಮೀರಿಸಿ, ತಾನೇ ದೊಡ್ಡಣ್ಣನಾಗಬೇಕು ಎಂಬ ಛಲದಿಂದ ಚೀನ, ತೃತೀಯ ಜಗತ್ತಿನ ದೇಶಗಳನ್ನು ಹಣದ ಪ್ರಭಾವದಿಂದ ತನ್ನ ಕಡೆ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದೆ. ಕೆಲವು ದೇಶಗಳು ಚೀನದ ಟ್ರ್ಯಾಪ್‌ಗೆ ಬಿದ್ದಿದ್ದರೆ, ಇನ್ನು  ಕೆಲವು ದೇಶಗಳು ಅದರಿಂದ ಹೊರಗೆ ಬಂದಿವೆ.

ಜಾಗತಿಕವಾಗಿ ದೊಡ್ಡಣ್ಣನಾಗಲು ಚೀನ ಆರಿಸಿಕೊಂಡಿರುವ ಮಾರ್ಗಗಳು ಎರಡು. ಒಂದು ಹಣ, ಮಗದೊಂದು ಮಿಲಿಟರಿ ಶಕ್ತಿ. ಈ ಮೊದಲೇ ಹೇಳಿದಂತೆ, ತೃತೀಯ ಜಗತ್ತಿನ ದೇಶಗಳು ಮತ್ತು ಬಡ ದೇಶಗಳಿಗೆ ಸಾಲದ ಆಮಿಷ ಕೊಟ್ಟು ಅವುಗಳ ಮೇಲೆ ಹಿಡಿತ ಸಾಧಿಸುತ್ತಿದೆ. ಈ ಮೂಲಕ ಹಣಕಾಸಿನ ನೆರವಿಗಾಗಿ ಅಮೆರಿಕದತ್ತ ನೋಡುತ್ತಿದ್ದ ದೇಶಗಳು, ಈಗ ಚೀನದತ್ತ ನೋಡಬೇಕು ಎಂಬ ನಿಲುವನ್ನು ಈ ಮೂಲಕ ಪ್ರದರ್ಶಿಸಿದೆ.

ಇನ್ನೊಂದು ಮಿಲಿಟರಿ ಶಕ್ತಿ. ಕಳೆದ ಕೆಲವು ವರ್ಷಗಳ ದಾಖಲೆಗಳನ್ನು ನೋಡುತ್ತಾ ಹೋದರೆ, ಚೀನ ದಿನದಿಂದ ದಿನಕ್ಕೆ ತನ್ನ ಮಿಲಿಟರಿ ವೆಚ್ಚವನ್ನು ಹಿಗ್ಗಿಸಿಕೊಳ್ಳುತ್ತಲೇ ಹೋಗುತ್ತಿದೆ. ಒಂದು ದಿನ ತಾನು, ವಾರ್ಷಿಕವಾಗಿ ಅಮೆರಿಕದ ಸರಿಸಮನಾಗಿ ನಿಲ್ಲಬೇಕು ಎಂಬ ಲೆಕ್ಕಾಚಾರದಲ್ಲೇ ಅದು ಓಡುತ್ತಿದೆ. ಅಂದರೆ, ಚೀನ ಕಳೆದ 27 ವರ್ಷಗಳಿಂದಲೂ ರಕ್ಷಣಾ ಬಜೆಟ್‌ ಅನ್ನು ಏರಿಸಿಕೊಂಡು ಬರುತ್ತಲೇ ಇದೆ. ಆದರೆ 2012ರಿಂದ ಇಲ್ಲಿಯವರೆಗೆ ಈ ಪ್ರಮಾಣ ಇನ್ನೂ ಹೆಚ್ಚಾಗಿದೆ. ಈ ಅವಧಿಯಲ್ಲಿ 148 ಬಿಲಿಯನ್‌ ಅಮೆರಿಕನ್‌ ಡಾಲರ್‌ನಷ್ಟು ವೆಚ್ಚ ಮಾಡಿದೆ. ಅಂದರೆ, ಇದು ಶೇ.100ರಷ್ಟು ಹೆಚ್ಚಾಗಿದೆ.

ಸದ್ಯ ಇಡೀ ಜಗತ್ತಿನಲ್ಲಿ ರಕ್ಷಣೆಗಾಗಿ ಹೆಚ್ಚು ಹಣ ಮೀಸಲಿಡುತ್ತಿರುವುದು ಅಮೆರಿಕ. ಇದು ಜಾಗತಿಕ ವೆಚ್ಚದ ಶೇ.37.9ರಷ್ಟಾಗಿದೆ. 2021ರ ಅಂಕಿ ಅಂಶಗಳ ಪ್ರಕಾರ, ವಾರ್ಷಿಕವಾಗಿ 801 ಬಿಲಿಯನ್‌ ಡಾಲರ್‌ ಹಣ ವೆಚ್ಚ ಮಾಡುತ್ತಿದೆ. ಇನ್ನು ಚೀನ ಶೇ.13.9ರಷ್ಟು ವೆಚ್ಚ ಮಾಡುತ್ತಿದ್ದು, ಇದರ ಗಾತ್ರ 293 ಬಿಲಿಯನ್‌ ಡಾಲರ್‌ಗೆ ಮುಟ್ಟಿದೆ. ಮೂರನೇ ಸ್ಥಾನದಲ್ಲಿ ಭಾರತವಿದ್ದು, ಶೇ.3.6ರಷ್ಟನ್ನು ವೆಚ್ಚ ಮಾಡುತ್ತಿದೆ. ಇದು 76.6 ಬಿಲಿಯನ್‌ ಡಾಲರ್‌ಗೆ ಮುಟ್ಟಿದೆ.

ಈ ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಅಮೆರಿಕಕ್ಕೆ ಸ್ಪರ್ಧೆ ನೀಡುವ ಲೆಕ್ಕಾಚಾರದಲ್ಲಿ ಚೀನ ರಕ್ಷಣಾ ವೆಚ್ಚ ಏರಿಸಿಕೊಂಡು ಹೋಗುತ್ತಿದೆ. ರವಿವಾರ ಮಂಡನೆಯಾದ ಬಜೆಟ್‌ನಲ್ಲಿ ತನ್ನ ಜಿಡಿಪಿಯ ಶೇ.7.2ರಷ್ಟು ಹೆಚ್ಚು ವೆಚ್ಚ ತೋರಿಸಿದೆ. ಈ ಹಣದಿಂದ ನೌಕಾಪಡೆಯನ್ನು ಸದೃಢಗೊಳಿಸಿಕೊಳ್ಳುತ್ತಿದೆ.

ಚೀನದ ರಕ್ಷಣಾ ವೆಚ್ಚದ ಹಿಂದೆ ಅಮೆರಿಕ, ಭಾರತವೇ ಟಾರ್ಗೆಟ್‌ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಅಮೆರಿಕವು ಚೀನ ನೆರೆಯ ದೇಶವಾಗಿರುವ ತೈವಾನ್‌ ಬೆನ್ನಿಗೆ ನಿಂತಿದ್ದು ಇದು ಡ್ರ್ಯಾಗನ್‌ ದೇಶಕ್ಕೆ ಸಿಟ್ಟು ತರಿಸಿದೆ. ಹೀಗಾಗಿಯೇ ನೌಕಾಪಡೆಯ ಆಧುನೀಕರಣಕ್ಕೆ ಹೆಚ್ಚು ವೆಚ್ಚ ಮಾಡುತ್ತಿದೆ. ಅಲ್ಲದೆ ತೈವಾನ್‌ ಮೇಲೆ ದಾಳಿ ನಡೆಸಿದಾಗ, ಅಮೆರಿಕವೇನಾದರೂ ಅದರ ನೆರವಿಗೆ ಬಂದರೆ ಯಶಸ್ವಿಯಾಗಿ ಎದುರಿಸಲು ಈ ಪರಿಯಲ್ಲಿ ವೆಚ್ಚ ಮಾಡುತ್ತಿದೆ ಎಂಬ ವಿಶ್ಲೇಷಣೆಗಳಿವೆ.

ಏನೇ ಆಗಲಿ, ಚೀನದ ಮಿಲಿಟರಿ ವೆಚ್ಚದ ಹಿಂದೆ ಯುದ್ದೋನ್ಮಾದದ ಬಯಕೆಗಳಿವೆ ಎಂಬುದು ಭಾರತೀಯರಿಗೂ ಗೊತ್ತಿರುವ ವಿಚಾರ. ಗಡಿ ವಿಚಾರದಲ್ಲಿ ಅದರ ನಡವಳಿಕೆಯೇ ಹಾಗಿದೆ. ಅಲ್ಲದೆ, ಅಮೆರಿಕ ಮತ್ತು ಚೀನದ ನಡುವಿನ ಸಂಭಾವ್ಯ ತಿಕ್ಕಾಟವನ್ನು ತಪ್ಪಿಸುವ ಮತ್ತು ಜಾಗತಿಕ ಶಾಂತಿಯನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ವಿಶ್ವಸಂಸ್ಥೆ ಮೇಲಿದೆ. ಈ ನಿಟ್ಟಿನಲ್ಲಿ ಅದು ಕಾರ್ಯನಿರ್ವಹಿಸಬೇಕಾಗಿದೆ. ಅಲ್ಲದೆ, ದಕ್ಷಿಣ ಏಷ್ಯಾದಲ್ಲಿ ಪ್ರಾಬಲ್ಯಕ್ಕೆ ಯತ್ನಿಸುತ್ತಿರುವ ಚೀನದ ನಡವಳಿಕೆ ಮೇಲೂ ನಿಯಂತ್ರಣ ಹೇರುವ ಅಗತ್ಯ ಇದೆ.

ಟಾಪ್ ನ್ಯೂಸ್

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.