ಹೇಟ್‌ ಕ್ರೈಮ್‌ ಹೆಚ್ಚಳ ಕಳವಳಕಾರಿ: ಸಂಕುಚಿತ ಮನಸ್ಥಿತಿ ಬಿಡಿ


Team Udayavani, Feb 25, 2017, 3:50 AM IST

24-PTI–11.jpg

ಸುಪ್ತವಾಗಿರುವ ಜನಾಂಗ, ವರ್ಣದ್ವೇಷ ಟ್ರಂಪ್‌ ಅಧ್ಯಕ್ಷರಾದ ಬಳಿಕ ಹೆಡೆಯೆತ್ತಲು ಆರಂಭಿಸಿದೆಯೇ ಅನ್ನುವ ಪ್ರಶ್ನೆಯನ್ನು ಅಮೆರಿಕದಲ್ಲಿ ಭಾರತೀಯ ಮೂಲದ ಎಂಜಿನಿಯರ್‌ ಹೇಟ್‌ಕ್ರೈಮ್‌ಗೆ ಬಲಿಯಾದ ದುರ್ಘ‌ಟನೆ ಎತ್ತಿದೆ.ಅದು ನಿಜವೇ ಆಗಿದ್ದರೆ ಅತ್ಯಂತ ದುರದೃಷ್ಟಕರ. ಅಮೆರಿಕ ಎಷ್ಟೇ ಮುಂದುವರಿದಿದ್ದರೂ ಹಳೆಯ ಕಾಲದ ಮನೋಭಾವಕ್ಕೆ ಮರಳುತ್ತಿರುವ ಸೂಚನೆ ಇದು.

ಅಮೆರಿಕದ ಕನ್ಸಾಸ್‌ನಲ್ಲಿ ಭಾರತೀಯ ಮೂಲದ ಎಂಜಿನಿಯರ್‌ ಶ್ರೀನಿವಾಸ ಕುಚ್ಚಿಬೋಟ್ಲ ಎಂಬವರನ್ನು ಅಮೆರಿಕದ ವ್ಯಕ್ತಿಯೊಬ್ಬ ಗುಂಡಿಕ್ಕಿ ಕೊಂದಿರುವುದು ಅಲ್ಲಿ ವರ್ಣ ದ್ವೇಷ ಮತ್ತು ಜನಾಂಗ ದ್ವೇಷದ ಕಾರಣಕ್ಕೆ ನಡೆಯುತ್ತಿರುವ ಹಲ್ಲೆ ಮತ್ತು ಹತ್ಯೆಗಳ ಕುರಿತಾದ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಕುಚ್ಚಿಬೋಟ್ಲ ತನ್ನ ಸಹೋದ್ಯೋಗಿ ಮತ್ತು ಸ್ನೇಹಿತ ಅಲೋಕ್‌ ಮದಸನಿ ಜತೆಗೆ ಬಾರ್‌ಗೆ ಭೇಟಿ ನೀಡಿದ್ದ ವೇಳೆ ವರ್ಣ ದ್ವೇಷವನ್ನು ತಲೆ ತುಂಬಿಕೊಂಡಿದ್ದ ಆ್ಯಡಮ್‌ ಪುರಿಂಟನ್‌ ಎಂಬಾತ ಕೆರಳಿ “ನನ್ನ ದೇಶ ಬಿಟ್ಟು ಹೋಗಿ ಉಗ್ರರೇ’ ಎಂದು ಅರಚಿ ಅವರಿಬ್ಬರ ಮೇಲೆ ಗುಂಡು ಹಾರಿಸಿದ್ದಾನೆ. ಕುಚ್ಚಿಬೋಟ್ಲ ಗುಂಡೇಟಿಗೆ ಬಲಿಯಾದರೆ ಮದಸನಿ ಗಾಯಗೊಂಡಿದ್ದಾರೆ. ಈ ಘಟನೆ ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಅಧ್ಯಕ್ಷರಾದ ಫ‌ಲಶ್ರುತಿಯೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. 

ಟ್ರಂಪ್‌ ಅಧ್ಯಕ್ಷರಾದರೆ ವರ್ಣ ದ್ವೇಷ ಮತ್ತು ಧಾರ್ಮಿಕ ದ್ವೇಷ ತಾಂಡವವಾಡಲಿದೆ ಎಂಬ ಆರೋಪ ಅವರು ಪ್ರೈಮರಿ ಚುನಾವಣೆಯಲ್ಲಿ ಸ್ಪರ್ಧಿಸುವಾಗಲೇ ಇತ್ತು. ಆರಂಭದಿಂದಲೇ ಟ್ರಂಪ್‌ ಅಪ್ಪಟ ರಾಷ್ಟ್ರೀಯವಾದಿ ನೀತಿಗಳನ್ನು ಪ್ರತಿಪಾದಿಸುತ್ತಿದ್ದಾರೆ. ಅವರು ಬಿಳಿಯರ ಪಾರಮ್ಯವನ್ನು ಪ್ರತಿಪಾದಿಸುತ್ತಿದ್ದಾರೆಂಬ ಆರೋಪವೂ ಇದೆ. ಅಮೆರಿಕ ವಲಸಿಗರಿಂದಲೇ ನಿರ್ಮಾಣಗೊಂಡಿರುವ ದೇಶವಾಗಿದ್ದರೂ ಅಲ್ಲಿನ ಬಿಳಿಯರು ಅಮೆರಿಕ ನಮ್ಮದು ಎಂದು ಭಾವಿಸಿದ್ದಾರೆ. ಹೀಗಾಗಿ ಬಿಳಿಯರಲ್ಲದವರ ಮೇಲೆ ಆಗಾಗ ಹಲ್ಲೆಗಳಾಗುತ್ತಿವೆ. ಇವುಗಳನ್ನು ಹೇಟ್‌ಕ್ರೈಮ್‌ಗಳೆಂದು ಕರೆಯುತ್ತಾರೆ. ಇಂತಹ ಸುಮಾರು 800 ಹೇಟ್‌ಕ್ರೈಮ್‌ ಗುಂಪುಗಳು ಅಮೆರಿಕದಲ್ಲಿ ಸಕ್ರಿಯವಾಗಿವೆ. ಈ ಗುಂಪುಗಳು ನಿರಂತರವಾಗಿ ದ್ವೇಷ ಚಿಂತನೆಯನ್ನು ಬಿತ್ತರಿಸುತ್ತಿರುತ್ತವೆ. ಉತ್ತಮ ಶಿಕ್ಷಣ ಪಡೆದವರು ಕೂಡ ಇಂತಹ ಚಿಂತನೆಗಳಿಗೆ ವಶವಾಗುತ್ತಾರೆ. ಕುಚ್ಚಿಬೋಟ್ಲ ಮೇಲೆ ಹಲ್ಲೆ ಮಾಡಿರುವ ಆ್ಯಡಮ್‌ ಇದಕ್ಕೆ ಅತ್ಯುತ್ತಮ ಉದಾಹರಣೆ. ಈತ ನೌಕಾಪಡೆಯ ನಿವೃತ್ತ ಯೋಧ, ಸ್ವಲ್ಪ ಸಮಯ ಏರ್‌ ಟ್ರಾಫಿಕ್‌ ಕಂಟ್ರೋಲರ್‌ ಆಗಿ ಕೆಲಸ ಮಾಡಿದ್ದ. 

ಟ್ರಂಪ್‌ ಅಧ್ಯಕ್ಷರಾದ ಬಳಿಕ ಹೇಟ್‌ಕ್ರೈಮ್‌ಗಳು ದುಪ್ಪಟ್ಟಾಗಿವೆ ಎನ್ನುವುದನ್ನು ಅಲ್ಲಿನ ಮಾಧ್ಯಮಗಳೇ ಹೇಳುತ್ತಿವೆ. ಹಿಂದೆ ವಾರಕ್ಕೆ ಒಂದಂಕಿಯಲ್ಲಿದ್ದ ಹೇಟ್‌ ಕ್ರೈಮ್‌ಗಳು ಈಗ ಎರಡಕ್ಕೇರಿವೆ. ಮುಸ್ಲಿಮರು ಮತ್ತು ಏಶ್ಯಾದವರು ಭೀತಿಯಿಂದಲೇ ಬದುಕುತ್ತಿದ್ದಾರೆ. ಅದರಲ್ಲೂ ಮಸೀದಿಗಳನ್ನು ಗುರಿ ಮಾಡಿಕೊಂಡಿರುವ ಹೇಟ್‌ಕ್ರೈಮ್‌ಗಳು ವಿಪರೀತ ಹೆಚ್ಚಿವೆ ಎಂದು ಮಾಧ್ಯಮವೊಂದು ಇತ್ತೀಚೆಗೆ ಅಂಕಿಅಂಶಗಳ ಸಮೇತ ಬಹಿರಂಗಪಡಿಸಿದೆ. ಹಾಗೆಂದು ಹೇಟ್‌ಕ್ರೈಮ್‌ ಅಮೆರಿಕಕ್ಕೆ ಹೊಸತೇನೂ ಅಲ್ಲ. ಬಿಳಿಯರಲ್ಲದವರ ಪ್ರಾರ್ಥನಾ ಮಂದಿರಗಳ ಗೋಡೆಗಳಲ್ಲಿ ನಿಂದನೆಯ ಮತ್ತು ಬೆದರಿಕೆಯ ವಾಕ್ಯಗಳನ್ನು ಬರೆಯುವುದು ಸಾಮಾನ್ಯ. ಇಟಲಿ, ಕೊರಿಯಾ, ಚೀನ, ಮೆಕ್ಸಿಕೊ, ಪಾಕ್‌ ಮತ್ತು ಭಾರತದ ಪ್ರಜೆಗಳು ಅತಿ ಹೆಚ್ಚು ಹೇಟ್‌ಕ್ರೈಮ್‌ ಬಲಿಪಶುಗಳು. ಆದರೆ ಉಳಿದ ದೇಶದವರಿಗೆ ಮತ್ತು ಭಾರತೀಯರಿಗೆ ಒಂದು ಮೂಲಭೂತ ವ್ಯತ್ಯಾಸವಿದೆ. ಅನ್ಯದೇಶದವರು ತಮ್ಮವರ ಮೇಲೆ ಹಲ್ಲೆಯಾದಾಗ ಅಥವಾ ಹತ್ಯೆಯಾದಾಗ ಒಕ್ಕೊರಲಿನಿಂದ ಪ್ರತಿಭಟಿಸುತ್ತಾರೆ. ಆದರೆ ಭಾರತೀಯರು ಅಷ್ಟು ದೂರದಲ್ಲಿದ್ದರೂ ಪ್ರಾದೇಶಿಕ ಭಿನ್ನತೆಯ ಸಂಕುಚಿತ ಮನಸ್ಥಿತಿಯನ್ನು ಬಿಟ್ಟಿಲ್ಲ. 

ಹೀಗಾಗಿ ವರ್ಣದ್ವೇಷದ ಘಟನೆಗಳು ನಡೆದಾಗ ಭಾರತದ ಪ್ರತಿಭಟನೆಯ ಧ್ವನಿ ಪ್ರಬಲವಾಗಿ ಕೇಳಿಸುತ್ತಿಲ್ಲ. ಭಾರತೀಯ ಮೂಲದವರು ಸರಕಾರದ ಪ್ರಮುಖ ಹುದ್ದೆಗಳಲ್ಲಿದ್ದರೂ ಧ್ವನಿಯೆತ್ತುವ ದಿಟ್ಟತನ ತೋರಿಸುತ್ತಿಲ್ಲ. ಮುಖ್ಯವಾಹಿನಿಯಲ್ಲಿ ಭಾರತೀಯರ ಧ್ವನಿ ನಗಣ್ಯವಾಗಿದೆ. ಭಾರತೀಯರು ಎಲ್ಲದಕ್ಕೂ ಕೇಂದ್ರ ಸರಕಾರದತ್ತ ನೋಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಇಲ್ಲಿ ಪ್ರಧಾನಿಯೋ, ವಿದೇಶಾಂಗ ಸಚಿವರೋ ಖಂಡನೆಯ ಹೇಳಿಕೆ ನೀಡಿದರೆ ಸಂತೃಪ್ತರಾಗಿ ಬಿಡುತ್ತಾರೆ. ಈ ಮನೋಧರ್ಮವನ್ನು ಬಿಟ್ಟು ಹೊರದೇಶದಲ್ಲಿ ನಾವೆಲ್ಲ ಭಾರತೀಯರು ಎಂಬ ಒಗ್ಗಟ್ಟಿನ ಭಾವ ಹೊಂದುವುದರಲ್ಲಿ ನಮ್ಮ ಹಿತವಿದೆ. 

ಟಾಪ್ ನ್ಯೂಸ್

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.