Language, culture; ಕನ್ನಡದ ಕಡತಗಳು ಕರುನಾಡಿಗೆ ಮರಳಲಿ

ಕನ್ನಡತನವನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಸರಕಾರ ಇನ್ನಾದರೂ ಮಾಡುವ ಅಗತ್ಯವಿದೆ...

Team Udayavani, Nov 28, 2023, 5:24 AM IST

kannada-and-samskrati

ಯಾವುದೇ ಒಂದು ನಾಡು ಅದರ ಭಾಷೆ, ಸಂಸ್ಕೃತಿ ಮತ್ತು ನೆಲದ ವೈಭವ ಅದರ ಚಾರಿತ್ರಿಕ ಮತ್ತು ಸಾಂಸ್ಕೃತಿಕ ದಾಖಲೆಗಳನ್ನು ಅವಲಂಬಿಸಿದೆ. ಕರ್ನಾಟಕದ ಅಸ್ಮಿತೆಯೂ ಇದಕ್ಕೆ ಹೊರತಾಗಿಲ್ಲ.

ಇಲ್ಲಿನ ಶಿಲಾ ಶಾಸನಗಳಿಂದ ಹಿಡಿದು ಪತ್ರ ವ್ಯವಹಾರದವರೆಗಿನ ಆಯಾ ಕಾಲ ಮಾನದ ಎಲ್ಲ ದಾಖಲಾತಿ ಗಳು ಒಂದಲ್ಲೊಂದು ಮಹತ್ವದ ಐತಿಹಾಸಿಕ ಸಂಪ ನ್ಮೂಲವೇ ಆಗಿವೆ. ಆದರೆ ದುರ ದೃಷ್ಟವಶಾತ್‌ ಕರ್ನಾಟಕದ ಐತಿಹಾಸಿಕ ವಿಷಯ ಗಳ ಮೇಲೆ ಪರಿಪೂರ್ಣ ವಾಗಿ ಬೆಳಕು ಚೆಲ್ಲಬಲ್ಲ ಸಾವಿರಾರು ಇಂತಹ ದಾಖಲೆಗಳು ಅಕ್ಕಪಕ್ಕದ ರಾಜ್ಯಗಳ ಗೋದಾ ಮುಗಳಲ್ಲಿ ಕೊಳೆತು ಹೋಗು ತ್ತಿವೆ. ಕೆಲವಷ್ಟನ್ನು ಉದ್ದೇಶ ಪೂರ್ವಕವಾಗಿಯೇ ಗಂಟು ಕಟ್ಟಿ ಮುಚ್ಚಿಡಲಾಗಿದೆ. ಅಖಂಡ ಕರ್ನಾಟಕದ ವಿಚಾರ ಬಂದಾಗ ಹಳೆ ಮೈಸೂರಿನ ಭಾಗದಲ್ಲಿರುವ ದಾಖಲೆಗಳು ಸುರಕ್ಷಿತವಾಗಿ ಸಂರಕ್ಷಣೆಯಾಗಿವೆ. ಇದಕ್ಕೆ ಕಾರಣ ಮೈಸೂರು ಮಹಾರಾಜರ ಜನಪರ ಕಾಳಜಿಯ ಆಳ್ವಿಕೆ. ಆದರೆ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದಲ್ಲಿನ ಐತಿಹಾಸಿಕ ಮಹತ್ವದ ಘಟನಾವಳಿಗಳು ಮತ್ತು ಚಾರಿತ್ರಿಕ ದಾಖಲೆಗಳು ಅಷ್ಟಾಗಿ ರಾಜ್ಯದಲ್ಲಿಯೇ ಉಳಿಯಲಿಲ್ಲ. ಇದಕ್ಕೆ ಪ್ರಮುಖ ಕಾರಣ ಈ ಭಾಗದ ಆಡಳಿತ ವ್ಯವಹಾರವನ್ನು ಅಂದಿನ ಮುಂಬೈ ಪ್ರಸಿಡೆನ್ಸಿ ನೋಡಿಕೊಳ್ಳುತ್ತಿತ್ತು. ಹೀಗಾಗಿ ಈ ಭಾಗದಲ್ಲಿನ ಎಲ್ಲ ದಾಖಲೆಗಳು ಮುಂಬಯಿ, ಪುಣೆ ಮತ್ತು ಕೊಲ್ಲಾಪುರ ಸೇರಿದವು. ಅದರಲ್ಲೂ ಕಿತ್ತೂರು ಚೆನ್ನಮ್ಮ ಮತ್ತು ಅಂತಹದೇ ಸಂಸ್ಥಾನಗಳ ಬಗ್ಗೆ ಇರುವ ಮಹತ್ವದ ದಾಖಲೆಗಳನ್ನು ಇಂಗ್ಲೆಂಡ್‌ ವಸ್ತು ಸಂಗ್ರಹಾಲಯ ಕ್ಕೆ ಸೇರಿಸಲಾಯಿತು. 150ಕ್ಕೂ ಹೆಚ್ಚು ದೇಸಾಯಿ ಮನೆತನಗಳು, ವಾಡೆ ವ್ಯವಹಾರಗಳು ಸೇರಿದಂತೆ 40 ಸಾವಿರ ದಾಖಲೆಗಳು ಹೊರ ರಾಜ್ಯದಲ್ಲಿವೆ. ಇವುಗಳನ್ನು ಮರಳಿ ತರುವುದಕ್ಕೆ ನಮ್ಮ ಸರಕಾರಗಳು ಕೂಡ ಬರೀ ಆಶ್ವಾಸನೆ ನೀಡಿದ್ದು ಬಿಟ್ಟರೆ ಗಂಭೀರ ಪ್ರಯತ್ನಗಳು ನಡೆದಿಲ್ಲ.

ಬರೀ ಪುಣೆ ನಗರದಲ್ಲಿನ ಪತ್ರಾಗಾರಗಳಲ್ಲಿಯೇ ಕರ್ನಾಟಕದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಸಾವಿರಾರು ದಾಖಲೆಗಳಿವೆ. ಆದರೆ ಅವುಗಳನ್ನು ಮರಳಿ ತರಲಾಗುತ್ತಿಲ್ಲ. ಬೆಳವಡಿ ಮಲ್ಲಮ್ಮ ಮತ್ತು ಶಿವಾಜಿಯ ಯುದ್ಧ, ಚೆನ್ನ ಮ್ಮನ ಖಡ್ಗ, ಕಿತ್ತೂರು ಬಂಡಾಯದಿಂದ ಹಿಡಿದು ಈ ಭಾಗದ ಸಾಂಸ್ಕೃತಿಕ ಅಸ್ಮಿತೆಗೆ ಉದಾ ಹರಣೆಯಾಗಿ ನಿಂತ ಸಂಗ್ಯಾ-ಬಾಳಾÂ ನಾಟಕದ ನಿಜ ಘಟನೆ ವಿವರ ಗಳನ್ನು ಕೂಡ ಇಂತಹ ದಾಖಲೆಗಳ ಪರಿಶೀಲನೆಯಿಂದ ಓರೆಗೆ ಹಚ್ಚ ಬ ಹುದು. ಬರೀ ಕಿತ್ತೂರು ಬಂಡಾಯದ ಕುರಿತು ಅಧ್ಯಯನಕ್ಕೆ ಪ್ರಯತ್ನಿಸಿದ ನೂರಾರು ಸಂಶೋಧ ಕರಿಗೆ ಮಾಹಿತಿಯ ಕೊರತೆ ಕಾಡಿದೆ. ಈ ದಾಖಲೆಗಳು ಪುಣೆಯ ಪತ್ರಾ ಗಾರದ ಕರ್ನಾಟಕ ಜಮಾವ್‌ ವಿಭಾಗದಲ್ಲಿ ಟನ್‌ಗಟ್ಟಲೆ ಇವೆ. ಆದರೆ ನಮ್ಮ ರಾಜ್ಯದ ಸಂಶೋಧಕರು ಅಲ್ಲಿಗೆ ಹೋಗಿ ಅವುಗಳನ್ನು ಅಧ್ಯಯನ ಮಾಡಲು ಕಠಿನ ವಾಗುತ್ತಿದೆ. ಇನ್ನು ಸರಕಾರ ಇಲ್ಲಿನ ದಾಖಲೆಗಳನ್ನು ಮರಳಿ ತರಲೇಬೇಕಾಗಿದೆ. ಕಾರಣ ಈ ದಾಖಲೆಗಳು ಕನ್ನಡಿಗರ ಅಸ್ಮಿತೆಯಾಗಿವೆ. ಕನ್ನಡದ ನಾಡು-ನುಡಿ, ಗಡಿ, ನೆಲ, ಜಲ, ಇತಿಹಾಸ, ಚರಿತ್ರೆ ಸೇರಿದಂತೆ ಅನೇಕ ವಿಚಾ   ರಗಳನ್ನು ಪುನರ್‌ ಮನನ ಮಾಡಲು ಅನುಕೂಲವಾಗಲಿವೆ. ಇದು ಸರಕಾರಕ್ಕೆ ಸಾವಿರಾರು ಕೋಟಿ ಹಣದ ಹೊರೆ ಮಾಡುವ ಕೆಲಸವೇನು ಅಲ್ಲ. ಕನ್ನಡತನವನ್ನು ಇನ್ನಷ್ಟು ಗಟ್ಟಿಗೊಳಿಸುವ ಈ ಕೆಲಸವನ್ನು ಸರಕಾರ ಇನ್ನಾದರೂ ಮಾಡುವ ಅಗತ್ಯವಿದೆ.

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.