Govt ಮಲಗುಂಡಿಗೆ ಜನ ಇಳಿಸುವ ಪಿಡುಗು ಕೂಡಲೇ ನಿಲ್ಲಲಿ


Team Udayavani, Dec 19, 2023, 6:20 AM IST

ಮಲಗುಂಡಿಗೆ ಜನ ಇಳಿಸುವ ಪಿಡುಗು ಕೂಡಲೇ ನಿಲ್ಲಲಿ

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಲದ ಗುಂಡಿಗೆ ಮಕ್ಕಳನ್ನು ಇಳಿಸಿ ಶುಚಿಗೊಳಿಸಿರುವುದು ರಾಜ್ಯದ ನಾಗರಿಕ ಪ್ರಜ್ಞೆಯೇ ತಲೆತಗ್ಗಿಸುವಂತೆ ಮಾಡಿದ ಘಟನೆ.

1968ರಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಮಲ ಹೊರುವ ಪದ್ಧತಿಯನ್ನು ನಿಷೇಧಿಸಿ ಹೊಸ ಸುಧಾರಣೆಗೆ ಅಂಕಿತ ಹಾಕಿದ್ದು ಕರ್ನಾಟಕ. ಆಗ ಉಡುಪಿಯಲ್ಲಿ ಇಂತಹ ಮಾದರಿ ಕ್ರಮವನ್ನು ಕೈಗೊಳ್ಳಲಾಗಿತ್ತು. ಅಂಥ ಹಿರಿಮೆ ಹೊಂದಿರುವ ರಾಜ್ಯದಲ್ಲಿ ಮಾಲೂರಿನಂತಹ ಘಟನೆ ನಡೆದಿರುವುದು ಅಕ್ಷಮ್ಯ.

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಸರಕಾರ ತೆರೆದಿರುವ ಮೂಲ ಉದ್ದೇಶವೇ ಬಡ ಮತ್ತು ಹಿಂದುಳಿದ ವರ್ಗಗಳ ಪ್ರತಿಭಾವಂತ ಮಕ್ಕಳಿಗೆ ಉತ್ತಮ ಶಿಕ್ಷಣ, ಸೌಲಭ್ಯ, ಪೌಷ್ಟಿಕ ಆಹಾರ, ಉತ್ತಮ ವಾತಾವರಣ ಕಲ್ಪಿಸಿ ಅವರನ್ನು ಉತ್ತಮ ಪ್ರಜೆಗಳಾಗಿ ರೂಪುಗೊಳಿಸುವುದು. ಈ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಆಹಾರ, ಬಟ್ಟೆಬರೆ, ಇತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇಂತಹ ವಸತಿ ಶಾಲೆಯೊಂದರಲ್ಲಿ ಸಂಬಂಧಪಟ್ಟವರು ಮಕ್ಕಳನ್ನು ಇಂಥ ಕೃತ್ಯಕ್ಕೆ ಬಳಸಿ ರುವುದು ಹೇಯ ಮತ್ತು ನಾಗರಿಕರಲ್ಲಿ ವ್ಯಾಕುಲತೆಯನ್ನು ಉಂಟು ಮಾಡುವಂಥದ್ದು.

ನಮ್ಮ ರಾಜ್ಯ ಸೇರಿದಂತೆ ದೇಶದಲ್ಲಿ ಮಲ ಹೊರುವ ಪದ್ಧತಿಯನ್ನು ನಿಷೇಧಿಸಿ ಬಹಳ ಕಾಲವಾಗಿದೆ. ಶೌಚ ಗುಂಡಿಗೆ ಇಳಿಯುವುದು, ಅಲ್ಲಿಂದ ಮಲವನ್ನು ಬುಟ್ಟಿಗಳಲ್ಲಿ ತುಂಬಿಸಿ ತಲೆಯ ಮೇಲೆ ಹೊತ್ತು ಊರ ಹೊರಗೆ ವಿಲೇವಾರಿ ಮಾಡುವುದು ಮಲ ಹೊರುವ ವೃತ್ತಿಯ ಸ್ಥೂಲ ಚಿತ್ರಣ. ಇದು ಮಾನವ ಘನತೆಗೆ ಕುಂದು ತರುವ ವೃತ್ತಿ ಎಂಬುದೇ ಪ್ರಮುಖ ಆಯಾಮ. ಇದರೊಂದಿಗೆ ಈ ಕೆಲಸದಲ್ಲಿ ಎದುರಾಗಬಹುದಾದ ಅಪಾಯಗಳ ಕುರಿತಾದದ್ದು. ಶೌಚಗುಂಡಿಯಲ್ಲಿ ವಿಷಾನಿಲಗಳು ಇರುವ ಸಾಧ್ಯತೆ ಹೆಚ್ಚು, ಇದರ ದುಷ್ಪರಿಣಾಮವು ಸಂಬಂಧಪಟ್ಟ ಕಾರ್ಮಿಕರ ಆರೋಗ್ಯದ ಮೇಲೆ ಬೀರಬಹುದು.

ಬಹುಮುಖ್ಯವಾಗಿ ನಾಗರಿಕವಾಗಿ ಸಹ್ಯವಲ್ಲದನ್ನು ನಿಷೇಧಿಸಲೇಬೇಕಲ್ಲವೇ? ಅದು ನಾಗರಿಕ ಸಮಾಜದ ಕರ್ತವ್ಯವೂ ಹೌದು, ಜವಾಬ್ದಾರಿಯೂ ಹೌದು. ಇಷ್ಟಾದರೂ ಈ ವೃತ್ತಿ ಅಲ್ಲಲ್ಲಿ ಚಾಲ್ತಿಯಲ್ಲಿ ಇದೆ ಎಂಬುದು ತಲೆತಗ್ಗಿಸುವಂತಹ ವಿಷಯವಷ್ಟೇ ಅಲ್ಲ, ನಮ್ಮ ಆಡಳಿತ ವ್ಯವಸ್ಥೆಯ ಲೋಪಕ್ಕೆ ನಿದರ್ಶನವೂ ಸಹ. ಈ ವೃತ್ತಿಯಿಂದಾಗಿ ಅಪಾಯ, ಪ್ರಾಣ ಹಾನಿ ಸಂಭವಿಸಿದಾಗಲಷ್ಟೇ ಇದು ಧುತ್ತನೆ ಸುದ್ದಿಯಾಗಿ ಬಿಡುತ್ತದೆ. ಮಲ ಹೊರುವುದು ಮಾತ್ರ ಅಲ್ಲ, ನಗರ -ಪಟ್ಟಣ ಪ್ರದೇಶಗಳ ಒಳಚರಂಡಿಗೆ ಮನುಷ್ಯರನ್ನು ಇಳಿಸಿ ಶುಚಿಗೊಳಿಸುವುದೂ ಇಷ್ಟೇ ಹೇಯವಾದ ಕೃತ್ಯ.

ಶೌಚಗುಂಡಿ, ಒಳಚರಂಡಿ ಮುಂತಾದಲ್ಲಿ ಕಸ ಕಟ್ಟಿಕೊಂಡಿದ್ದರೆ, ಶುಚಿಗೊಳಿಸಬೇಕಿದ್ದರೆ ಯಂತ್ರಗಳು ಲಭ್ಯವಿವೆ. ಈ ಕಾರ್ಯದಲ್ಲಿ ಮಕ್ಕಳ ಸಹಿತ ಮನುಷ್ಯರನ್ನು ಬಳಸುವ ಈ ಹೇಯ ನಡವಳಿಕೆಗೆ ಇನ್ನಾದರೂ ಸರಕಾರ, ಆಡಳಿತ ವ್ಯವಸ್ಥೆ ಕಡಿವಾಣ ಹಾಕಲು ಕಠಿನ ಕ್ರಮಗಳನ್ನು ಕೈಗೊಳ್ಳಬೇಕು.

ಘಟನೆಯ ಹಿನ್ನೆಲೆಯಲ್ಲಿ ಸಂಬಂಧಪಟ್ಟವರು ತತ್‌ಕ್ಷಣ ಕಾರ್ಯಪ್ರವೃತ್ತರಾಗಿ ಈ ಘಟನೆಗೆ ಕಾರಣರಾದವರ ಮೇಲೆ ಶಿಸ್ತುಕ್ರಮ ತೆಗೆದುಕೊಂಡಿರುವುದು ಸಮಾಧಾನದ ವಿಷಯ. ಆದರೆ ಯಾರೂ ಎಲ್ಲಿಯೂ ಇಂತಹ ಕೃತ್ಯಗಳನ್ನು ನಡೆಸದಂತಹ ಜಾಗೃತಿ ಸೃಷ್ಟಿಸಬೇಕಾದುದೇ ಸರಿಯಾದ ಹೆಜ್ಜೆ. ಈ ನೆಲೆಯಲ್ಲಿ ಸರಕಾರ ಹಾಗೂ ಆಡಳಿತ ವ್ಯವಸ್ಥೆ ಯೋಚಿಸಿ ಕ್ರಿಯಾಶೀಲವಾಗಬೇಕು. ಇದು ಕೇವಲ ಕಾನೂನಿನಿಂದ ಮಾತ್ರ ಆಗುವಂಥದ್ದಲ್ಲ; ಮನುಷ್ಯ ಸಹಜ ಸಹಾನುಭೂತಿ ಮತ್ತು ಅರಿವೂ ಸಹ ಅವಶ್ಯ. ಇಂಥದೊಂದು ಜಾಗೃತಿ ಮೂಡಿಸುವುದು ನಾಗರಿಕರ ಸಾಮೂಹಿಕ ಹೊಣೆಯೂ ಹೌದು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.