ವೈರಲ್ ಸ್ಟೋರಿ : ಇದು 82ರ ವೃದ್ಧನೋರ್ವನ ಪ್ರೇಮ ಕಥೆ..! ಪ್ರೀತಿಯೆಂದರೇ, ಶುದ್ಧ ಸಲಿಲ..!


ಶ್ರೀರಾಜ್ ವಕ್ವಾಡಿ, Apr 2, 2021, 7:52 PM IST

82-yr-old gatekeeper of haunted Rajasthan village connects with his first love after 50 years. Viral story

ಪ್ರೀತಿಗೆ ಯಾವ ಗಡಿರೇಖೆ ಇದೆ ಹೇಳಿ..? ಅದು ಶುದ್ಧ ಸಲಿಲ ಎಂಬುವುದು ಕೇವಲ ಪುಸ್ತಕಗಳ ಪುಟಗಳಲ್ಲಿರುವ ನುಡಿಗಟ್ಟಲ್ಲ. ಅದು ಕೆಲವೊಬ್ಬರ ಜೀವನದಲ್ಲಿ ಶುದ್ಧ ಸಲಿಲದಂತೆಯೇ ಸ್ಪಷ್ಟವಾಗಿರುತ್ತದೆ.

ರಾಜಸ್ಥಾನದ ಜೈಸಲ್ಮೇರ್‌ ನ ಹಳ್ಳಿಯಾದ ಕುಲಧಾರದ 82 ವರ್ಷದ ಗೇಟ್ ಕೀಪರ್ ವೊಬ್ಬರು ತಮ್ಮ ಬದುಕಿನ ಮೊದಲ ಪ್ರೀತಿಯ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಮೊದಲ ನೋಟದ ಪ್ರೀತಿಯ ಪುಳಕವನ್ನು ಹೊರ ಹಾಕಿ ಸಂತೋಷ ಪಟ್ಟಿದ್ದಾರೆ ಎಂದರೇ ನಿಮಗೆ ಆಶ್ಚರ್ಯವಾಗಲೇ ಬೇಕು.

‘ಹ್ಯೂಮನ್ಸ್ ಆಫ್ ಬಾಂಬೆ’ ಎಂಬ ಸಾಮಾಜಿಕ ಮಾಧ್ಯಮವೊಂದರೊಂದಿಗಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಮೊದಲ ಪ್ರೀತಿಯ ಚಿತ್ರಣವನ್ನು ವಿವರಿಸುತ್ತಾ, ನನಗೆ ಮೊದಲ ನೋಟದಲ್ಲಿ ಪ್ರೀತಿಯಾಗಿತ್ತು ಎಂದು ತಮ್ಮ ಪ್ರೇಮ ಪುರಾಣವನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ.

ಓದಿ : ತಮಿಳು ಸಂಸ್ಕೃತಿ ಮುಖ್ಯ : ತಮಿಳು ನಾಡಿನಲ್ಲಿ ಪ್ರಧಾನಿ ‘ಜಲ್ಲಿಕಟ್ಟು’ ಗುಣಗಾನ

1970 ರ ದಶಕದಲ್ಲಿ ಜೈಸಲ್ಮೇರ್‌ ಗೆ ಮರೀನಾ ಎಂಬ ಆಸ್ಟ್ರೇಲಿಯಾದ ಮಹಿಳೆ ಐದು ದಿನಗಳ ಪ್ರವಾಸಕ್ಕೆಂದು ಬಂದಿದ್ದಾಗ, ಆಕೆಯ ಮತ್ತು ನನ್ನ ನಡುವೆ ಈ ಪ್ರೇಮಾಂಕುರವಾಗಿದ್ದು ಎಂದು ಪ್ರೀತಿಯ ಸುಕೋಮಲ ಭಾವವನ್ನು ಹ್ಯೂಮನ್ಸ್ ಆಫ್ ಬಾಂಬೆ ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ ಎಂಬತ್ತರ ಅಜ್ಜ.

ಆಸ್ಟ್ರೇಲಿಯಾಕ್ಕೆ ವಾಪಸ್ ತೆರಳುವ ಮೊದಲು, ಮರೀನಾ ತನ್ನೊಳಗಿನ ಭಾವನೆಗಳನ್ನು ನನ್ನೊಂದಿಗೆ ಹೇಳಿಕೊಂಡಳು, ಆಕೆ ನನಗೆ, ‘ನಾನು ನಿನ್ನನ್ನು ಇಷ್ಟ ಪಡುತ್ತಿದ್ದೇನೆ’ ಎಂದಾಗ ನಾನು ತುಂಬಾ ನಾಚಿಕೆ ಪಟ್ಟೆ. ಈ ಹಿಂದೆ ನನಗೆ ಯಾರೂ ಹೀಗೆ ಹೇಳಿರಲಿಲ್ಲ. ಆಕೆಗೆ ಪ್ರತಿಕ್ರಿಯೆಯಾಗಿ ನನಗೆ ಒಂದು ಪದವನ್ನೂ ಹೇಳಲಾಗಿಲ್ಲ ಎಂದು ನಾಚಿಕೆ ಪಟ್ಟುಕೊಳ್ಳುತ್ತಾರೆ ಇಳಿವಯಸ್ಸಿನ ಪ್ರೇಮಿ.

ಇನ್ನು, ಪತ್ರಗಳ ಮೂಲಕ ಇಬ್ಬರೂ ದೀರ್ಘಕಾಲದವರೆಗೆ ಪರಸ್ಪರ ಸಂಪರ್ಕದಲ್ಲಿದ್ದರು. ಅಷ್ಟಲ್ಲದೇ,  ತನ್ನ ಕುಟುಂಬಕ್ಕೆ ತಿಳಿಸದೆ 30,000 ಸಾವಿರ ಸಾಲ ಮಾಡಿ,  ಆಕೆಯನ್ನು ಭೇಟಿಯಾಗಲು ಆಸ್ಟ್ರೇಲಿಯಾಕ್ಕೆ ಹೋಗಿದ್ದ ಗೇಟ್ ಕೀಪರ್ ಅಜ್ಜ, ಸುಮಾರು ಮೂರು ತಿಂಗಳು ಅಲ್ಲಿಯೇ ಇದ್ದಿದ್ದರು.

ಆಕೆ ನನ್ನಲ್ಲಿ ನಾವು ಮದುವೆಯಾಗಿ ಆಸ್ಟ್ರೇಲಿಯಾದಲ್ಲಿ ನೆಲೆಸೋಣ ಎಂದು ಕೇಳಿಕೊಂಡಳು. ಆದರೆ ಮರೀನಾ ಭಾರತದಲ್ಲಿರಲು ಸಿದ್ಧವಿರಲಿಲ್ಲ. ಇತ್ತ,  ನನ್ನ  ಕುಟುಂಬವನ್ನು ರಾಜಸ್ಥಾನದಲ್ಲಿ ಬಿಡಲು ಆಗದ  ಕಾರಣ  ನಾವು ಬೇರ್ಪಡಬೇಕಾಯಿತು ಎಂದು ಮೆಲುದನಿದಲ್ಲಿ ಪ್ರೀತಿಯನ್ನು ಪಡೆಯಲು ಸಾಧ್ಯವಾಗದ ಸಣ್ಣ ನೋವಿನಲ್ಲಿ ವಿವರಿಸುತ್ತಾರೆ ಅಜ್ಜ.

ನಂತರದಲ್ಲಿ ಕುಟುಂಬದವರ ಒತ್ತಡದಲ್ಲಿ ಮದುವೆಯಾದ ಅವರು ಕುಲಧಾರದ ಗೇಟ್ ಕೀಪರ್ ಆಗಿ ಕೆಲಸವನ್ನು ಮುಂದುವರಿಸುತ್ತಾರೆ.

“ಆದರೆ ನಾನು ಆಗಾಗ್ಗೆ ಮರೀನಾ ಬಗ್ಗೆ ಯೋಚಿಸುತ್ತೇನೆ‘ಅವಳು ಮದುವೆಯಾಗಬಹುದೇ ? ’,‘ ನಾನು ಅವಳನ್ನು ಮತ್ತೆ ನೋಡಬಹುದೇ ? ’ಆದರೆ ಅವಳಿಗೆ ಪತ್ರ ಬರೆಯಲು ನನಗೆ ಎಂದಿಗೂ ಧೈರ್ಯವಿರಲಿಲ್ಲ,” ಎಂದು ಅವರು ಪ್ರೀತಿಯಲ್ಲಿನ ತೆಳುವಾದ ನೋವನ್ನು ಹಂಚಿಕೊಳ್ಳುತ್ತಾರೆ.

ಸಂಸಾರದ ಜವಾಬ್ದಾರಿಯ ನಡುವೆ ಆಕೆಯ ನೆನಪುಗಳು ನನಗೆ ಗೊತ್ತಿಲ್ಲದೇ, ಮರೆಯಾದವು. ಮಕ್ಕಳು ಉದ್ಯೋಗ ನಿಮಿತ್ತ ಹೊರಗೆ ಹೋದರು ಮತ್ತು ಪತ್ನಿ ಎರಡು ವರ್ಷಗಳ ಹಿಂದೆ ನಿಧನರಾದರು ಎಂದು ವಿಷಾದ ವ್ಯಕ್ತ ಪಡಿಸಿಕೊಂಡಿದ್ದಾರೆ.

ಓದಿ : ಹೈವೋಲ್ಟೇಜ್ ವಿದ್ಯುತ್ ಕಂಬದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ‌ ಪತ್ತೆ…!

ಇನ್ನು, “ಈಗ ನಾನು 82ರ ವರ್ಷದಲ್ಲಿದ್ದೇನೆ, ಗೇಟ್ ಕೀಪರ್ ಆಗಿದ್ದೇನೆ. ಜೀವನವು ಇನ್ನು ಮುಂದೆ ನನ್ನನ್ನು ಆಶ್ಚರ್ಯಗೊಳಿಸಲಾರದು ಎಂದು ನಾನು ಭಾವಿಸಿದಾಗ,  ಮತ್ತೆ ಆಶ್ಚರ್ಯ ಪಡುವ ಹಾಗೆ ಮಾಡಿದೆ. ಒಂದು ತಿಂಗಳ ಹಿಂದೆ ಮರೀನಾ ನನಗೆ ಪತ್ರ ಬರೆದಿದ್ದಾಳೆ. ’50 ವರ್ಷಗಳ ನಂತರ, ಆಕೆ ನನ್ನನ್ನು ನೆನಪಿಸಿಕೊಂಡಿದ್ದಾಳೆ. ಆಕೆಗೆ ಇನ್ನೂ ನನ್ನ ಮೇಲಿನ ಪ್ರೀತಿ ಮಾಸಿಲ್ಲ. ಆಕೆ ನನ್ನನ್ನು ನಿತ್ಯ ಸ್ಮರಿಸಿಕೊಂಡಿರಬಹದು.

ಅಷ್ಟೇ ಏಕೆ..? ಮರಿನಾ ಇನ್ನೂ ಮದುವೆಯಾಗಿಲ್ಲ. ಆಕೆ ನನ್ನ ನೆನಪಿನಲ್ಲಿಯೇ ಇದ್ದಿರಬಹುದು. ಶೀಘ್ರದಲ್ಲೇ ಭಾರತಕ್ಕೆ ಬರುವುದಕ್ಕೆ ಯೋಜಿಸುತ್ತಿದ್ದೇನೆ ಎಂದು ಆಕೆ ಪತ್ರದಲ್ಲಿ ಹೇಳಿಕೊಂಡಿದ್ದಾಳೆ. ರಾಮನ ಸತ್ಯವಾಗಿಯೂ ನಾನಿಗ ಮತ್ತೆ 21 ರ ಹರೆಯದವನಂತಾಗಿದ್ದೇನೆ. ಆಕೆಯನ್ನು ನೋಡುವುದಕ್ಕೆ ಕಾತುರನಾಗಿದ್ದೇನೆ. ಭವಿಷ್ಯ ಹೇಗಿರುತ್ತದೆ ಎನ್ನುವುದು ನನಗೆ ಗೊತ್ತಿಲ್ಲ. ಆದರೇ ನನ್ನ ಮೊದಲ ಪ್ರೀತಿ ನನಗೆ ಮತ್ತೆ ಸಿಕ್ಕಿದೆ. ಆ ಖುಷಿಯನ್ನು ನನ್ನಿಂದ ವಿವರಿಸಲು ಸಾಧ್ಯವಿಲ್ಲ ಎಂದು ಹರ್ಷ ವ್ಯಕ್ತ ಪಡಿಸಿಕೊಂಡಿದ್ದಾರೆ 82 ರ ವೃದ್ದ ಪ್ರೇಮಿ.

ಈ ಅಪರೂಪದ  ‘ಲವ್ ಸ್ಟೋರಿ’ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿದ್ದು, ಸಾವಿರಾರು ಲೈಕ್ಸ್ ಗಳನ್ನು ಪಡೆದುಕೊಳ್ಳುತ್ತಿದೆ. ಕಮೆಂಟ್ಸ್ ಗಳಲ್ಲಿ ಕೆಲವರು ಮರಿನಾ ಅವರ ಫೋಟೋ ಗಾಗಿ ವಿನಂತಿಸಿಕೊಂಡಿದ್ದಾರೆ. ಇನ್ನು ಕೆಲವರು, ಈ ವೃದ್ಧ ಪ್ರೀತಿ ಹಕ್ಕಿಗಳ ಭೇಟಿಯನ್ನು ತೋರಿಸಲು ‘ಹ್ಯೂಮನ್ಸ್ ಆಫ್ ಬಾಂಬೆ’ ಗೆ ಕೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ, ಪ್ರೀತಿ ಅಮರ ಎಂದು ಮತ್ತೆ ನೆನಪಿಸಿಕೊಟ್ಟಿದೆ ಈ ಪ್ರೇಮ ಕಥನ. ದಶಕಗಳ ನಂತರ ಭೇಟಿಯಾಗುತ್ತಿರುವ ಜೋಡಿ ಹಕ್ಕಿಗಳ ಮನಸ್ಸು ಭರ್ತಿಯಾಗಲಿ ಎಂದು ಹಾರೈಸೋಣ.

ಪ್ರೀತಿಯೆಂದರೇ, ಪ್ರೀತಿಯಷ್ಟೇ ಅಲ್ಲ. ನೆಲ ಮುಗಿಲನ್ನು ಸ್ಪರ್ಶಿಸುವ ಸುಂದರ ದಿಗಂತ.

ಓದಿ : ಮಹಾಲಿಂಗಪುರಕ್ಕೆ ಮತ್ತೇ ಕೋವಿಡ್ ಕಂಟಕ : 7 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢ

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.