ಜಲಪಾನಕ್ಕೊಂದು ಕೈಗನ್ನಡಿ ಆಯುರ್ವೇದದ ಸರಳ ಸೂತ್ರ 


Team Udayavani, Nov 4, 2018, 12:30 AM IST

1.jpg

ಪ್ರತಿಯೊಬ್ಬ ಮನುಷ್ಯನು ದಿನಕ್ಕಿಂತಿಷ್ಟು ನೀರು ಕುಡಿಯಲೇಬೇಕು ಎಂದು ಯಾವುದೇ ನಿಯಮವಿಲ್ಲ. 
ಪ್ರತಿ ಯೊಬ್ಬ ಮನುಷ್ಯನ ದೇಹ ಪ್ರಕೃತಿ ಹಾಗೂ ಸದ್ಯದ ದೇಹದ ಸ್ಥಿತಿಗೆ ಅನುಗುಣವಾಗಿ ನೀರಿನ ಅವಶ್ಯಕತೆ ವಿಭಿನ್ನವಾಗಿರುತ್ತದೆ. 

ಜೀವನಂ ತರ್ಪಣಂ ಹೃದ್ಯಂ ಹ್ಲಾದಿ ಬುದ್ಧಿ ಪ್ರಬೋಧನಮ…| ತನ್ವವ್ಯಕ್ತರಸಂ ಮೃಷ್ಟಂ ಶೀತಂ ಲಘÌಮೃತೋ ಪಮಮ…|| 
(ಅಷ್ಟಾಂಗ ಹೃದಯ ಸೂತ್ರ 5)
ಜಲ, ಅಂಬು, ಉದಕ ಆದಿಗಳು ಸಂಸ್ಕೃತದಲ್ಲಿ ನೀರಿಗೆ ಇರುವ ಹೆಸರು. ನೀರು ನಮ್ಮ ದಿನನಿತ್ಯ ಜೀವನದ ಒಂದು ಅವಿಭಾಜ್ಯ ಅಂಗ. ನೀರು ಸ್ನಾನ ಸಂಧ್ಯಾದಿ ಕರ್ಮಗಳಿಗಾಗಲಿ, ಬಟ್ಟೆ ಪಾತ್ರೆಗಳ ಶುಚಿಗಾಗಲಿ ಬೇಕೆ ಬೇಕು. ನಮ್ಮ ದೇಹಪಾಲನೆಗಂತೂ ನೀರು ಅತ್ಯಾವಶ್ಯಕ. ನಾವು ಆಹಾರವಿಲ್ಲದೆ ಒಂದೆರಡು ದಿನ ಬದುಕ ಬಲ್ಲೆವೇನೋ ಆದರೆ ನೀರಿಲ್ಲದೆ ಬದುಕುವುದು ಕಷ್ಟಸಾಧ್ಯ. ಮನುಷ್ಯನಿಗೆ ಮಾತ್ರವಲ್ಲ ನೀರು ಪ್ರಾಣಿಪಕ್ಷಿಗಳ, ಗಿಡಮರಗಳ ಉಳಿವಿಗೂ ಬೇಕಾದದ್ದು. ಆದ್ದರಿಂದ ಆಯುರ್ವೇದ ಗ್ರಂಥಗಳಲ್ಲಿ ಜಲವು ಅಮೃತ ತುಲ್ಯವಾದದ್ದು ಎಂದು ಉಲ್ಲೇಖೀಸಲಾಗಿದೆ.

ನೀರಿನ ಸೇವನೆಯ ಕ್ರಮದ ಬಗ್ಗೆ ತಿಳಿಯುವು ದಾದರೆ ಆಯುರ್ವೇದ ಹೇಳುವುದೇನು ನೋಡೋಣ. ನಮ್ಮ ದೇಹದ ಶೇ.65 ಭಾಗವು ನೀರಿನಿಂದ ಕೂಡಿದೆ ಎಂದು ಆಧುನಿಕ ವಿಜ್ಞಾನ ತಿಳಿಸುತ್ತದೆ. ಈ ಪ್ರಮಾಣವನ್ನು ಸಮತೋಲಿಸಿ ಅವಶ್ಯ ಕತೆಗೆ ಅನುಗುಣವಾಗಿ ಯಾರು, ಎಷ್ಟು, ಯಾವಾಗ ಜಲಪಾನ ಮಾಡಬೇಕೆಂದು ಆರೋಗ್ಯಾರ್ಥಿಗಳಿಗೆ ಸದಾ ಕಾಡುವ ಪ್ರಶ್ನೆ. ಅದಕ್ಕೆ ನಾವು ಅತಿಮುಖ್ಯವಾಗಿ ತಿಳಿದುಕೊಳ್ಳಬೇಕಾದ ಸಂಗತಿ ಏನೆಂದರೆ ಎಲ್ಲರ ತಲೆಗೆ ಒಂದೇ ಮಂತ್ರ ಸಲ್ಲ ಎಂಬುದು. ಅಂದರೆ ಪ್ರತಿಯೊಬ್ಬ ಮನುಷ್ಯನು ದಿನಕ್ಕಿಂತಿಷ್ಟು ನೀರು ಕುಡಿಯಲೇಬೇಕು ಎಂದು ಯಾವುದೇ ನಿಯಮವಿಲ್ಲ. ಇದಕ್ಕೆ ತರ್ಕ ಇಷ್ಟೆ- ಒಬ್ಬ ಎ.ಸಿ. ರೂಮಿನಲ್ಲಿ ಕುಳಿತು ಕಂಪ್ಯೂಟರ್‌ ಮೇಲೆ ಕೆಲಸ ಮಾಡುವ ವ್ಯಕ್ತಿಗೂ, ಬಿಸಿಲಿನಲ್ಲಿ ಬೆವರು ಸುರಿಸಿ ದುಡಿಯುವ ವ್ಯಕ್ತಿಗೂ, ನಿರಂತರ ಮಾತನಾಡುವ ಅಧ್ಯಾಪಕನಿಗೂ, ಬಿಸಿಲ ನಾಡು(ಬಯಲು ಸೀಮೆ), ಮಲೆನಾಡು, ಕರಾವಳಿ ವಾಸಿಗಳಿಗೂ, ಬೇಸಿಗೆ ಯಲ್ಲೂ, ಮಳೆಗಾಲದಲ್ಲೂ, ಚಳಿಗಾಲದಲ್ಲೂ, ಪ್ರತಿ ಯೊಬ್ಬ ಮನುಷ್ಯನ ದೇಹ ಪ್ರಕೃತಿ ಹಾಗೂ ಸದ್ಯದ ದೇಹದ ಸ್ಥಿತಿಗೆ ಅನುಗುಣವಾಗಿ ನೀರಿನ ಅವಶ್ಯಕತೆ ವಿಭಿನ್ನವಾಗಿರುತ್ತದೆ. ಇಷ್ಟೆಲ್ಲಾ ಪ್ರಮಾಣವನ್ನು ಇಟ್ಟು ಕೊಂಡು ಲೆಕ್ಕಹಾಕಿ ನೀರು ಕುಡಿಯಬೇಕಾ ಎಂದು ಚಿಂತಿಸುವುದು ಬೇಡ. ಅದಕ್ಕೂ ಆಯುರ್ವೇದ ಸುಲಭ ಸೂತ್ರ ನೀಡಿದೆ. ಅದು ಇಷ್ಟೆ- 

ನೀರು ಯಾವಾಗ ಕುಡಿಯ ಬೇಕು?- ನೀರಡಿಕೆಯಾದಾಗ. ಎಷ್ಟು ಕುಡಿಯಬೇಕು?- ಆ ನೀರಡಿಕೆ ನೀಗಿಸಲು ಎಷ್ಟು ಬೇಕೋ ಅಷ್ಟೆ. ಅತಿ ಸರಳವಲ್ಲವೇ! ಸರ್ವೇ ರೋಗಾ ಪಿ ಜಾಯಂತೆ ವೇಗೋದೀರಣ ಧಾರಣೈಃ| (ಅಷ್ಟಾಂಗ ಹೃದಯ ಸೂತ್ರ 4) 13 ಅಧಾರಣೀಯ ವೇಗಗಳು (ಹಸಿವೆ, ನಿದ್ರೆ, ಬಾಯಾರಿಕೆ, ಮಲ, ಮೂತ್ರದ ಕರೆ, ಶ್ರಮ ಶ್ವಾಸ, ಕೆಮ್ಮು, ಕಣ್ಣೀರು, ವಾಂತಿ, ಶುಕ್ರ, ಬಿಕ್ಕಳಿಕೆ, ಸೀನು, ಅಪಾನ ವಾಯು) ಶರೀರವು ನಮ್ಮೆದುರು ತನ್ನ ಬೇಕು ಬೇಡವನ್ನು ವ್ಯಕ್ತಪಡಿಸುವ ರೀತಿ. ಈ ಸೂಕ್ಷ್ಮ ಸಂಕೇತವನ್ನು ನಾವು ಅಥೆìçಸಿಕೊಂಡು ಸಕಾಲದಲ್ಲಿ ಕಾರ್ಯಶೀಲರಾಗಬೇಕು. ಈ ಮೇಲಿನ ಯಾವುದೇ ವೇಗವನ್ನು ಧಾರಣೆ (Suppress) ಅಥವಾ ಉದೀರಣ(Voluntary forceful initiation)ಮಾಡತಕ್ಕದ್ದಲ್ಲ. ಹಾಗೆ ಮಾಡಿದಲ್ಲಿ ರೋಗ ಪ್ರಕ್ರಿಯೆಗೆ ನಾಂದಿ ಬಿದ್ದಂತೆ. ಈ ಅಧಾರಣೀಯ ವೇಗದ ಸಾಲಿನಲ್ಲಿ “ತೃಷ್ಣಾ’ ಬಾಯಾರಿಕೆ ಕೂಡ ಒಂದು. ಆದ್ದರಿಂದ ನೀರನ್ನು ಅತಿಯಾಗಿ ಸೇವಿಸಿದರೆ ಅಗ್ನಿಮಾಂದ್ಯಾದಿ (Digestive/metabolic disorders) ಆಗುವ ಸಾಧ್ಯತೆ ಇರುತ್ತದೆ ಹಾಗೂ ಅತಿ ಕಡಿಮೆ ಸೇವಿಸಿದರೂ ವಾತವ್ಯಾಧಿ, ಅಶ್ಮರಿ ಗಳಂತಹ (Kidney stone) ವ್ಯಾಧಿಗಳಾಗುವ ಸಂಭಾವನೆ ಇರುತ್ತದೆ. 

“ಋತೆ ಶರನ್ನಿದಾಗಾಭ್ಯಾಂ ಪಿಬೇತ್‌ ಸ್ವಸೊ§à ಪಿ ಚ ಅಲ್ಪಶ:’| (ಅಷ್ಟಾಂಗ ಹೃದಯ ಸೂತ್ರ 8) 
ಗ್ರೀಷ್ಮ (ಬೇಸಿಗೆ) ಹಾಗೂ ಶರದ್‌(ಮಳೆಗಾಲದ ನಂತರದ ಎರಡು ತಿಂಗಳು) ಋತುಗಳಲ್ಲಿ ಸಹಜವಾಗಿಯೇ ನೀರಡಿಕೆ ಜಾಸ್ತಿ. ಈ ಎರಡು ಋತುಗಳನ್ನು ಹೊರತುಪಡಿಸಿ ಸ್ವಸ್ಥನಿಗೆ ನೀರಿನ ಅವಶ್ಯಕತೆ ಪ್ರಾಕೃತಿಕವಾಗಿಯೇ ಕಡಿಮೆ ಇರುತ್ತದೆ. 

 ಇನ್ನು ಜನರಲ್ಲಿ ಸಾಮಾನ್ಯವಾಗಿ ಮೂಡುವ ಕೆಲವು ಪ್ರಶ್ನೆಗಳು:

1) ಆಹಾರದೊಂದಿಗೆ ನೀರು ಸೇವಿಸುವುದು ಸೂಕ್ತವೇ? 
ಆಹಾರದ ಮುನ್ನ ನೀರು ಕುಡಿದರೆ ಅಗ್ನಿಮಾಂದ್ಯವಾಗಿ ದೇಹ ಕೃಶವಾಗಬಹುದು. ಅದೇ ಆಹಾರದ ನಂತರ ಸೇವಿಸಿದರೆ ಬೊಜ್ಜಿನ ಸಾಧ್ಯತೆ ಇದೆ. ಆದ್ದರಿಂದ ಆರೋಗ್ಯವಂತನು ಆಹಾರದೊಂದಿಗೆ ಸ್ವಲ್ಪ ಸ್ವಲ್ಪ ಉಗುರು ಬೆಚ್ಚಗಿನ ನೀರು ಕುಡಿಯುವುದು ಸೂಕ್ತ. 

2) ಬೆಳಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಒಳಿತೆ? 
ಬೆಳಗ್ಗೆ ಎದ್ದಾಕ್ಷಣ ನೀರಡಿಕೆಯಾದರೆ ಮಾತ್ರ ನೀರು ಕುಡಿಯಿರಿ. ಕುಡಿಯಲೇಬೇಕೆಂದು ಅನಾವಶ್ಯಕವಾಗಿ ಕುಡಿದರೆ ಅತಿಯಾಗಿ ಹೇರಿದ ನೀರು ಮೂತ್ರಾಂಗಗಳಿಗೆ ತೊಂದರೆಯಾದೀತು ಜೋಕೆ. ನಿಯಮ ಬದ್ಧವಾಗಿ ಉಷಃಪಾನ ಮಾಡಬಹುದು ಆದರೆ ಅದನ್ನು ನುರಿತ ಆಯುರ್ವೇದ ವೈದ್ಯರಲ್ಲಿ ಕೇಳಿ ತಿಳಿಯಿರಿ. 

3) ಈ ಮೇಲೆ ಹೇಳಿದ ಕ್ರಮ ಸರ್ವರಿಗೂ ಅನ್ವಯವೇ? 
 ಬಹಳಷ್ಟು ಮಟ್ಟಿಗೆ ಹೌದು! ಆದರೆ ಜಲೋದರ(Ascites), ಮೂತ್ರಾಂಗದ ವ್ಯಾಧಿ(Kidney disease), ಶೋಥ (oedema/swelling) ಇನ್ನಿತರ ವ್ಯಾಧಿತಾವಸ್ಥೆಯಲ್ಲಿ ವೈದ್ಯಕೀಯ ಸಲಹೆ ಪಡೆದು ಜಲಪಾನದ ಕ್ರಮ ತಿಳಿದುಕೊಳ್ಳತಕ್ಕದ್ದು. 
ನೀರು ಅಮೃತ ತುಲ್ಯವಾದದ್ದು, ಹಿತವಾಗಿ ಸೇವಿಸೋಣ ಮಿತವಾಗಿ ಬಳಸೋಣ.

ಡಾ| ಚಿನ್ಮಯ ಫ‌ಡಕೆ ಎಂ.ಡಿ.

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kargil ವಿಕ್ರಮಕ್ಕೆ 25 ವರ್ಷ; 2 ತಿಂಗಳು 3 ವಾರ 2 ದಿನಗಳ ಕಾಲದ ಹೋರಾಟದ ರೋಚಕ ಕ್ಷಣಗಳು…

Kargil ವಿಕ್ರಮಕ್ಕೆ 25 ವರ್ಷ; 2 ತಿಂಗಳು 3 ವಾರ 2 ದಿನಗಳ ಕಾಲದ ಹೋರಾಟದ ರೋಚಕ ಕ್ಷಣಗಳು…

Kargil@25: ಗಾಯಾಳು ಯೋಧರ ಜೀವ ಉಳಿಸಿದ “ಆಪರೇಷನ್‌’-ಕನ್ನಡಿಗ ಸೇನಾವೈದ್ಯ ಲೆ| ಜ| ಪ್ರಸಾದ್

Kargil@25: ಗಾಯಾಳು ಯೋಧರ ಜೀವ ಉಳಿಸಿದ “ಆಪರೇಷನ್‌’-ಕನ್ನಡಿಗ ಸೇನಾವೈದ್ಯ ಲೆ| ಜ| ಪ್ರಸಾದ್

Andhra ಅಮರಾವತಿಗೆ 15000 ಕೋಟಿ; ಮಿತ್ರ ಪಕ್ಷ ಟಿಡಿಪಿ ಒತ್ತಡಕ್ಕೆ ಬಾಗಿದ ಬಿಜೆಪಿ

Andhra ಅಮರಾವತಿಗೆ 15000 ಕೋಟಿ; ಮಿತ್ರ ಪಕ್ಷ ಟಿಡಿಪಿ ಒತ್ತಡಕ್ಕೆ ಬಾಗಿದ ಬಿಜೆಪಿ

Budget 2024; paperless tax system soon

Budget 2024; ಶೀಘ್ರ ಕಾಗದ ರಹಿತ ತೆರಿಗೆ ವ್ಯವಸ್ಥೆ

Union Budget ದೇಶದಲ್ಲಿ ಬರಲಿದೆ ಹವಾಮಾನ ತೆರಿಗೆ ವ್ಯವಸ್ಥೆ!

Union Budget ದೇಶದಲ್ಲಿ ಬರಲಿದೆ ಹವಾಮಾನ ತೆರಿಗೆ ವ್ಯವಸ್ಥೆ!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.