ಗಣಪತಿಗೇ ಅಗ್ರಪೂಜೆ
Team Udayavani, Sep 10, 2021, 6:40 AM IST
“ತತ್ಪುರುಷಾಯ ವಿದ್ಯ ಹೇ – ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್’ (ಗಣಪತಿ ಗಾಯಿತ್ರಿ). ಮಾನವರಲ್ಲಿ ಎಲ್ಲರೂ ಒಂದೇ ಸ್ವಭಾವದವರಾಗಲೀ, ಒಂದೇ ದೃಷ್ಟಿಕೋನ ಉಳ್ಳವರಾಗಲೀ ಇಲ್ಲ. ವೈವಿಧ್ಯತೆಯು ಪ್ರಕೃತಿಯ ಸಹಜತೆ.
ಹೀಗಾಗಿ ಹಿಂದೂ ಧರ್ಮದಲ್ಲಿ ವಿವಿಧ ಪಂಥಗಳು, ವಿವಿಧ ಮತಗಳು ಉಂಟಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಎಲ್ಲ ಪಂಥಗಳ, ಮತಗಳ ಗುರಿಯೂ ಒಂದೇ. ಅದು ಸತ್ಯ ಸಾಕ್ಷಾತ್ಕಾರ. ಒಂದೇ ಗುರಿಯನ್ನು ಸೇರಲು ಹಲವು ಮಾರ್ಗಗಳಿರುವಂತೆ, ಒಂದೇ ಸತ್ಯ ವಸ್ತುವನ್ನು ಅರಿಯಲು ವಿವಿಧ ಮತ, ಪಂಥಗಳೂ ಹುಟ್ಟಿದವು. ಈ ಒಂದೊಂದು ಪಂಥದವರೂ ಆ ಪರಾತ್ಪರ ವಸ್ತುವನ್ನು, ಭಗವಂತನನ್ನು ಒಂದೊಂದು ಹೆಸರಿನಿಂದ ಕರೆದು ಉಪಾಸನೆ ಮಾಡತೊಡಗಿದರು.
ಹೀಗಾಗಿ ಹಲಕೆಲವು ಕ್ಷುದ್ರದೇವತೆಗಳ ಪೂಜೋಪಾಸನೆಗಳೂ ಹಿಂದೂ ಸಮಾಜದಲ್ಲಿ ರೂಢಿಗೆ ಬಂದವು. ಅಗ ಇವುಗಳನ್ನೆಲ್ಲಾ ಖಂಡಿಸಿ “ಗಣಪತಿ, ಸೂರ್ಯ, ಶಿವ, ವಿಷ್ಣು, ಶಕ್ತಿ, ಸುಬ್ರಹ್ಮಣ್ಯ’ ಎಂಬ ಆರು ದೇವರುಗಳು ಮಾತ್ರ ಪೂಜಾಯೋಗ್ಯರೆಂಬುದಾಗಿ ಶ್ರೀಶಂಕರ ಭಗವತ್ಪಾದರು ಒಂದು ನಿರ್ಣಯವನ್ನು ಪ್ರಚಾರಪಡಿಸಿದರು. ಅಂದಿನಿಂದ ಈ ಆರು ದೇವರುಗಳ ಪೂಜಾಪಂಥವು ರೂಢಿಯಲ್ಲಿ ಬಂದಿದೆ. ಆದರೆ, ಜನಜೀವನದಲ್ಲಿ ಗರ್ಭಾದಾನ ಮೊದಲುಗೊಂಡು ಪೂಂಸವನ, ಸೀಮಂತೋನ್ನಯನ, ಜಾತಕರ್ಮ, ನಾಮಕರಣ, ನಿಷðಮಣ, ಅನ್ನಪ್ರಾಶನ, ಚೂಡಾಕರ್ಮ, ಶರ್ಣವೇಧ, ವಿದ್ಯಾರಂಭ, ಉಪನಯನ, ವೇದಾರಂಭ, ಕೇಶಾಂತ, ಸಮಾವರ್ತನ, ವಿವಾಹ (ಅಂತ್ಯೇಷ್ಟಿ)ದ ವರೆಗಿನ ಎಲ್ಲಾ ಷೋಡಶ ಸಂಸ್ಕಾರಗಳಲ್ಲಿ ಮತ್ತು ವ್ಯಾವಹಾರಿಕವಾದ ಕೆರೆ, ಭಾವಿ, ತಟಾಕಗಳ ನಿರ್ಮಾಣ, ಗೃಹನಿರ್ಮಾಣ ಮತ್ತು ಪ್ರವೇಶ ಸಕಲ ಕಲೆ ಮತ್ತು ಸಾಹಿತ್ಯಗಳ ನಿರ್ಮಾಣ ಮತ್ತು ಅದರ ಪ್ರದರ್ಶನ ಕಾಲದಲ್ಲಿ ಅಲ್ಲದೆ ಬೇರೆ ಬೇರೆ ದೇವದೇವಿಯರ ಪೂಜಾನುಷ್ಠಾನದಲ್ಲಿ ಕೂಡ ಶಕ್ತಿ, ಶಿವ, ವಿಷ್ಣು ಮೊದಲಾದ ದೇವತೆಗಳಿಗಿಂತಲೂ ಮೊದಲು ಅಗ್ರಪೂಜೆ ಸಲ್ಲುವುದು ಗಣಪತಿಗೇ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ