ಮಳೆನದಿ- ಹಿಮನದಿ ಆಲಿಂಗನ; ಹೊಸ ರೀತಿಯ ನದಿ ಜೋಡಣೆ ಯೋಜನೆ ಆರಂಭ
Team Udayavani, Jun 13, 2022, 6:55 AM IST
ಹಿಮಾಲಯ ಪ್ರದೇಶಗಳ ನೀರಿನ ಬವಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ “ಹಿಮನದಿಗಳನ್ನು ಮಳೆಯಾಶ್ರಿತ ನದಿಗಳೊಂದಿಗೆ ಜೋಡಣೆ’ ಮಾಡುವ ಯೋಜನೆಯನ್ನು ಉತ್ತರಾಖಂಡ ಸರ್ಕಾರ ಕೈಗೆತ್ತಿಕೊಂಡಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ನದಿ ಜೋಡಣೆ ಪ್ರಾಜೆಕ್ಟ್ ಸಾಕಾರಗೊಳ್ಳಲಿದ್ದು, ಪ್ರಾಜೆಕ್ಟ್ನ ಆರಂಭಿಕ ಕೆಲಸಗಳು ಈಗಾಗಲೇ ಶುರುವಾಗಿವೆ. ಇನ್ನೆರಡು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ.
ಏನಿದು ಯೋಜನೆ?
ಉತ್ತರಾಖಂಡದ ಕುಮಾವುನ್ ಪ್ರದೇಶದಲ್ಲಿರುವ ಹಿಮನದಿಗಳನ್ನು ಅದೇ ಪ್ರದೇಶದಲ್ಲಿರುವ ಮಳೆಯಾಶ್ರಿತ ನದಿಗಳೊಂದಿಗೆ ಜೋಡಣೆ ಮಾಡುವ ಯೋಜನೆಯಿದು.
ಯಾವ ನದಿಗಳ ಜೋಡಣೆ?
ಪಿಂಡಾರಿ ನೀರ್ಗಲ್ಲುಗಳಿಂದ ಹುಟ್ಟುವಂಥ 105 ಕಿ.ಮೀ. ಉದ್ದದ ಪಿಂಡಾರ್ ನದಿಯ ಪ್ರಮುಖ ಉಪನದಿಗಳಾದ ಸುಂದರ್ದುಂಗಾ ಮತ್ತು ಶಂಭು ನದಿಗಳನ್ನು ಬಾಂಗೇಶ್ವರ ಜಿಲ್ಲೆಯ ಬೈಜನಾಥ್ ಕಣಿವೆ ಪ್ರದೇಶದ ಗೋಮತಿ ನದಿ, ಅಲ್ಮೋರಾ ಜಿಲ್ಲೆಯಲ್ಲಿರುವ ಕೋಸಿ, ಲೋಧ್ ಮತ್ತು ಗಾಗಾಸ್ ನದಿಗಳ ಮೇಲಾ^ಗದ ಜಲಾನಯನ ಪ್ರದೇಶಗಳೊಂದಿಗೆ ಜೋಡಣೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ.
ನದಿ ಜೋಡಣೆ ಹೇಗೆ?
ಮೊದಲಿಗೆ ಪಿಂಡಾರಿ ನದಿಯಲ್ಲಿರುವ ನೀರನ್ನು ಹೊರತೆಗೆಯಲಾಗುತ್ತದೆ. ನಂತರ ಅದನ್ನು ಸುರಂಗಗಳು ಮತ್ತು ಪೈಪ್ಗ್ಳ ಮೂಲಕ ಗೋಮತಿ, ಕೋಸಿ, ಲೋಧ್ ಮತ್ತು ಗಾಗಾಸ್ ನದಿಗಳಿಗೆ ಪಂಪ್ ಮಾಡಲಾಗುತ್ತದೆ. ಜೂ.8ರಿಂದಲೇ ಎಂಜಿನಿಯರ್ಗಳು ಮತ್ತು ಭೂಗರ್ಭಶಾಸ್ತ್ರಜ್ಞರ ತಂಡವು ಸರ್ವೇ ಕೆಲಸ ಆರಂಭಿಸಿದೆ.
ಅನುಕೂಲತೆಗಳು
ಹವಾಮಾನ ವೈಪರೀತ್ಯ ಹಾಗೂ ಇತರೆ ಪರಿಸರೀಯ ಕಾರಣಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಹಿಮಾಲಯ ಪ್ರದೇಶಗಳಲ್ಲಿನ ಮಳೆಯಾಶ್ರಿತ ನದಿಗಳು ಬತ್ತಿ ಹೋಗಲಾರಂಭಿಸಿವೆ. ಹೀಗಾಗಿ, ಈ ಪ್ರದೇಶದಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಹಿಮನದಿಗಳೊಂದಿಗೆ ಮಳೆಯಾಶ್ರಿತ ನದಿಗಳನ್ನು ಜೋಡಣೆ ಮಾಡುವುದರಿಂದ ಅಲ್ಮೋರಾ ಮತ್ತು ಬಾಗೇಶ್ವರ ಜಿಲ್ಲೆಗಳ ಜನರ ನೀರಿನ ಸಮಸ್ಯೆ ಪರಿಹಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sunil Chhetri ಸರಿಸಾಟಿಯಿಲ್ಲದ ಆಟಗಾರ; ಭಾರತ ಫುಟ್ಬಾಲ್ನ ತೆಂಡುಲ್ಕರ್ ಚೆಟ್ರಿ
ಈಗಿನ ಬಿಜೆಪಿಯಲ್ಲಿ ಚಮಚಾಗಿರಿಗೆ ಟಿಕೆಟ್!: ಟಿಕೆಟ್ ವಂಚಿತ ರಘುಪತಿ ಭಟ್ ಬಿರುನುಡಿ
POK ಆಜಾದಿ ರಣಕಹಳೆ! ಪಾಕಿಸ್ಥಾನ ದೌರ್ಜನ್ಯ ವಿರುದ್ಧ ಬೀದಿಗಿಳಿದ ಪಾಕ್ ಆಕ್ರಮಿತ ಕಾಶ್ಮೀರ ಜನ
Karachi ಭಾರತೀಯ ಮಹಿಳೆಯ ವಡಾಪಾವ್, ಪಾವ್ಭಾಜಿ ಕಮಾಲ್!
World Mother’s Day 2024: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
ಅವ್ಯವಸ್ಥೆ… ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ
PU ಕಂಪ್ಯೂಟರ್ ಸೈನ್ಸ್, ಸೈಕಾಲಜಿಗೂ ಎನ್ಸಿಇಆರ್ಟಿ ಪಠ್ಯ
ಕೇರಳದಲ್ಲಿ 2 ವಾರದಲ್ಲಿ 2 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ; 10 ಸಾವು
Karkala ಸಾಗರದಾಚೆಯಿಂದ ತವರಿಗೆ ಕರೆ ತಂದ ಕೃಷಿ ಪ್ರೀತಿ
Hyderabad: ನಟಿ ಪವಿತ್ರ ಜಯರಾಂ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ, ಗೆಳೆಯ ಚಂದು ಆತ್ಮಹತ್ಯೆ