Television ಎಲ್ಲ ಸವಾಲುಗಳನ್ನು ಮೀರಿ ಬೆಳೆದಿದೆ ಕನ್ನಡ ಕಿರುತೆರೆ


Team Udayavani, Nov 3, 2023, 5:47 AM IST

1esasasaS

ಕರ್ನಾಟಕಕ್ಕೆ ಐವತ್ತು ವರ್ಷ ತುಂಬಿರುವ ಸಂದರ್ಭದಲ್ಲಿ ಕರ್ನಾ ಟಕದ ಬೇರೆ ಬೇರೆ ಕ್ಷೇತ್ರಗಳಂತೆ ಕಿರುತೆರೆ ಕ್ಷೇತ್ರ ಕೂಡ ಸಾಕಷ್ಟು ಹಿರಿದಾಗಿ ಬೆಳೆದಿದೆ. ಒಮ್ಮೆ ಹಿಂದಿರುಗಿ ನೋಡಿದರೆ, ನಾವು ಇಷ್ಟು ಮುಂದೆ ಬಂದಿದ್ದೇವಾ? ಎಂದು ನಮಗೇ ಆಶ್ಚರ್ಯವಾಗುವಂತೆ ಕನ್ನಡ ಕಿರುತೆರೆ ವಿಸ್ತಾರವಾಗಿದೆ.

1987ರಲ್ಲಿ ನಾನು ಕನ್ನಡ ಕಿರುತೆರೆ ಪ್ರವೇಶಿಸಿ ದಾಗ ಇದ್ದಿದ್ದು ದೂರದರ್ಶನ(ಡಿಡಿ)ಮಾತ್ರ. ಇಲ್ಲಿ ದಿನಕ್ಕೆ ಕೆಲವೇ ಗಂಟೆಗಳಷ್ಟು ಹೊತ್ತು ಮಾತ್ರ ಕನ್ನಡದ ಕಾರ್ಯಕ್ರಮಗಳು ಪ್ರಸಾರ ವಾಗುತ್ತಿದ್ದವು. ವಾರಕ್ಕೆ ಒಂದು ಎಪಿಸೋಡ್‌ನ‌ಂತೆ 30 ನಿಮಿಷದ ಅವಧಿಯ ಒಂದೊಂದು ಧಾರಾವಾಹಿ ಮಾತ್ರ ಬರುತ್ತಿತ್ತು. ಆಗ ಧಾರಾ ವಾಹಿಯ ಒಂದು ಸಂಚಿಕೆ ಸಿದ್ಧಪಡಿಸುವುದೇ ನಿರ್ಮಾಪಕರು, ನಿರ್ದೇಶಕರು ಮತ್ತು ತಂಡಕ್ಕೆ ದೊಡ್ಡ ಸವಾಲಾಗಿತ್ತು.

ಆಗ ಇಂಥ ಧಾರಾವಾಹಿಗಳಿಗೆ ಪ್ರಾಯೋ ಜಕರು ಕೂಡ ಇರುತ್ತಿರಲಿಲ್ಲ. 2-3 ನಿಮಿಷದ ಜಾಹೀರಾತುಗಳನ್ನೂ ಧಾರಾವಾಹಿ ಮಾಡು ವವರೇ ಹುಡುಕಿಕೊಳ್ಳಬೇಕಿತ್ತು. ಸುಮಾರು 90ರ ದಶಕದ ಆರಂಭದವರೆಗೂ ಕನ್ನಡ ಕಿರುತೆರೆ ಅಂದರೆ ಹೀಗೇ ಇತ್ತು. ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದವರು, ಕಿರುತೆರೆಯನ್ನು ನಂಬಿ ಕೊಂಡಿದ್ದವರು, ಕಿರುತೆರೆಗೆ ಬರುತ್ತಿದ್ದವರ ಸಂಖ್ಯೆ ತುಂಬಾ ಕಡಿಮೆಯಿತ್ತು. ಆಗ ಸಿನೆಮಾದಲ್ಲಿ ಅಭಿನಯಿಸುತ್ತಿದ್ದ ಕಲಾವಿದರು, ತಂತ್ರಜ್ಞರು

ಟಿವಿ ಕಾರ್ಯಕ್ರಮಗಳು, ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳಲು ಸಾಕಷ್ಟು ಹಿಂದೇಟು ಹಾಕುತ್ತಿದ್ದರು. ಕಿರುತೆರೆ ಬಗ್ಗೆ ಅನೇಕರಿಗೆ ಒಂಥರಾ ಕೀಳರಿಮೆಯ ಮನಃಸ್ಥಿತಿಯಿತ್ತು.

1992ರಲ್ಲಿ ಉದಯ ಟಿವಿ ಆರಂಭವಾದ ಮೇಲೆ ಧಾರಾವಾಹಿಗಳಿಗೆ ಒಂದು ದೊಡ್ಡ ವೇದಿಕೆ ಸೃಷ್ಟಿಯಾಯಿತು.  ಅಲ್ಲಿಂದ ಕನ್ನಡ ಕಿರು ತೆರೆಯಲ್ಲಿ ಮೆಗಾ ಸೀರಿಯಲ್‌ ಜಮಾನ ಶುರು ವಾಯಿತು. “ಶಕ್ತಿ’ ಎಂಬ ಕನ್ನಡದ ಮೊದಲ ಮೆಗಾ ಸೀರಿಯಲ್‌ ನಿರ್ದೇಶನ ಮಾಡುವ ಅವ ಕಾಶ ನನ್ನದಾಯಿತು. ಅದಾದ ಕೆಲವೇ ವರ್ಷ ಗಳಲ್ಲಿ ಒಂದರ ಹಿಂದೊಂದರಂತೆ ಹಲವು ಖಾಸಗಿ ವಾಹಿನಿಗಳು ಕಿರುತೆರೆಗೆ ತೆರೆದುಕೊಂಡವು.

ಕೇವಲ 35 ವರ್ಷದ ಹಿಂದೆ ನೂರಾರು ಜನ ಕೆಲಸ ಮಾಡುತ್ತಿದ್ದ, ಕೆಲವು ಲಕ್ಷಗಳಷ್ಟೇ ವೀಕ್ಷಕರಿದ್ದ ಕಿರುತೆರೆಯಲ್ಲಿ, ಇಂದು ಸಾವಿರಾರು ಮಂದಿ ಕೆಲಸ ಮಾಡುತ್ತಿದ್ದಾರೆ. ಕನ್ನಡ ಕಿರುತೆರೆಯನ್ನು ನೋಡುವ ವೀಕ್ಷಕರ ಸಂಖ್ಯೆ ಈಗ 3-4 ಕೋಟಿ ದಾಟಿದೆ!  ಕನ್ನಡ ಕಿರುತೆರೆಯಲ್ಲಿ ಈಗ ತಂತ್ರಜ್ಞಾನವೂ ಸ್ಮಾರ್ಟ್‌ ಆಗಿದೆ.  ಕನ್ನಡ ಕಿರುತೆರೆಯ ಮೂಲಕ ಪ್ರತೀ ದಿನ ಹೊಸ ಹೊಸ ಕಲಾವಿದರು, ತಂತ್ರಜ್ಞರು, ಬರಹಗಾರರು ಕನ್ನಡಿಗರಿಗೆ ಪರಿ ಚಯವಾಗುತ್ತಿದ್ದಾರೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕನ್ನಡ ಕಿರುತೆರೆಯನ್ನು ಒಂದು ಲಕ್ಷಕ್ಕೂ ಹೆಚ್ಚು ಜನ ಆಶ್ರಯಿಸಿದ್ದಾರೆ. ಕಲಾ ವಿದರು, ತಂತ್ರಜ್ಞರಿಗೂ ಒಳ್ಳೆಯ ಸಂಭಾವನೆ ನೀಡಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ.

ಇಂದು ಕನ್ನಡ ಕಿರುತೆರೆಯ ಕಲಾವಿದರು ಬೇರೆ ಬೇರೆ ಭಾಷೆಗಳಲ್ಲೂ ಬಹುಬೇಡಿಕೆಯ ಕಲಾವಿದರಾಗಿದ್ದಾರೆ. ತೆಲುಗಿನಲ್ಲಿ ಕನ್ನಡದ 280ಕ್ಕೂ ಹೆಚ್ಚಿನ ಕಲಾವಿದರು ಅಭಿನಯಿ ಸುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು!

ರವಿಕಿರಣ್‌, ಕಿರುತೆರೆ ನಟ, ನಿರ್ಮಾಪಕ ಮತ್ತು ನಿರ್ದೇಶಕ

ಟಾಪ್ ನ್ಯೂಸ್

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.