ಸ್ವಚ್ಛ ಭಾರತಕ್ಕೆ 5 ವರ್ಷ ಸಾಧಿಸಿದ್ದೆಷ್ಟು?

ಶೇ.99ರಷ್ಟು ಶೌಚಾಲಯ ನಿರ್ಮಾಣ

Team Udayavani, Oct 2, 2019, 5:22 AM IST

c-19

ಸ್ವಚ್ಛ ಭಾರತ ಯೋಜನೆ ಆರಂಭವಾಗಿ ಇಂದಿಗೆ (ಅ. 2) ಐದು ವರ್ಷ ಪೂರ್ಣ ವಾಗುತ್ತದೆ. ಈ ಯೋಜನೆ ಅಡಿಯಲ್ಲಿ ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬಯಲು ಶೌಚಾಲಯಕ್ಕೆ ಪೂರ್ಣ ವಿರಾಮ ಹಾಕಿ ಜನರ ಆರೋಗ್ಯ ವೃದ್ಧಿಸುವ ಧ್ಯೇಯದೊಂದಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದೀಗ 5 ವರ್ಷದಲ್ಲಿ ಶೇ. 99ರಷ್ಟು ಶೌಚಾಲಯವನ್ನು ನಿರ್ಮಿಸಲಾಗಿದೆ.

2014ರ ಅಕ್ಟೋಬರ್‌ 2ರಂದು ಕೇಂದ್ರ ಸರಕಾರ ತನ್ನ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ಮುಂದಡಿ ಇಟ್ಟಿತ್ತು. ಬಹುದೊಡ್ಡ ಅಭಿಯಾನವನ್ನಾಗಿ ಇದನ್ನು ರೂಪಿಸಿತ್ತು. ಈ ವರ್ಷ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆ ನಡೆಯುತ್ತಿದೆ. ಜತೆಗೆ ಸ್ವಚ್ಛ ಭಾರತ ಕಾರ್ಯಕ್ರಮಕ್ಕೂ 5 ವರ್ಷ ತುಂಬಿದೆ.

ಉತ್ತಮ ಪ್ರಗತಿ
2011ರಲ್ಲಿ ನಡೆದ ಜನಗಣತಿಯ ಅಂಕಿ-ಅಂಶ ಮತ್ತು 2019ರ ಅಂಕಿ-ಅಂಶವನ್ನು ಹೋಲಿಸಿದರೆ ಶೌಚಾಲಯಗಳ ನಿರ್ಮಾಣದಲ್ಲಿ ಭಾರೀ ಪ್ರಗತಿ ದಾಖಲಾಗಿದೆ. ರಾಷ್ಟ್ರದ ಕೆಲವು ರಾಜ್ಯಗಳಲ್ಲಿ ಶೇ. 10.5ರಷ್ಟು ಮನೆಗಳಲ್ಲಿ ಮಾತ್ರ ಶೌಚಾಲಯಗಳು ನಿರ್ಮಾಣವಾಗಿದ್ದವು. ಉತ್ತರ ಭಾರತದ ರಾಜ್ಯಗಳಾದ ಬಿಹಾರ ಮತ್ತು ಒಡಿಶಾ ರಾಜ್ಯಗಳಲ್ಲಿ ಬಯಲು ಮುಕ್ತ ಶೌಚಾಲಯದ ಕನಸು ಸಾಕಾರವಾಗಿದೆ. ಇಂದು ಬಹುತೇಕ ಜಿಲ್ಲೆಗಳಲ್ಲಿ ಬಯಲು ಮುಕ್ತ ಶೌಚಾಲಯಗಳಿವೆ.

ಬಯಲು ಮಲ ವಿಸರ್ಜನೆ ನಿಯಂತ್ರಣ
5 ವರ್ಷಗಳ ಹಿಂದಿನ ಅಂಕಿ-ಅಂಶಗಳಿಗೆ ಹೋಲಿಸಿದರೆ ಬಯಲು ಮಲ ವಿಸರ್ಜನೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. 2014ರಲ್ಲಿ ಶೇ. 77 ಮಂದಿ ಬಯಲನ್ನು ಆಶ್ರಯಿಸಿಕೊಂಡಿದ್ದರೆ 2018ರಲ್ಲಿ ಶೇ. 44ರಷ್ಟು ಮಂದಿ ಮಾತ್ರ ಬಯಲಿಗೆ ಹೋಗುತ್ತಿ ದ್ದಾರೆ. ಆದರೆ ಶೌಚಾಲಯ ಇದ್ದೂ ಬಯಲಿಗೆ ಹೋಗುತ್ತಿದ್ದವರು 2014-2018ರಲ್ಲಿಯೂ ಸಮಾನವಾಗಿದ್ದಾರೆ. ಅವರ ಮೇಲೆ ಸ್ವಚ್ಛ ಭಾರತ ಯಾವುದೇ ಪರಿಣಾಮ ಬೀರಿಲ್ಲ. ಬಯಲು ಮಲ ವಿಸರ್ಜನೆ ನಿಯಂತ್ರಣ 5 ವರ್ಷಗಳ ಹಿಂದಿನ ಅಂಕಿ-ಅಂಶಗಳಿಗೆ ಹೋಲಿಸಿದರೆ ಬಯಲು ಮಲ ವಿಸರ್ಜನೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. 2014ರಲ್ಲಿ ಶೇ. 77 ಮಂದಿ ಬಯಲನ್ನು ಆಶ್ರಯಿಸಿಕೊಂಡಿದ್ದರೆ 2018ರಲ್ಲಿ ಶೇ. 44ರಷ್ಟು ಮಂದಿ ಮಾತ್ರ ಬಯಲಿಗೆ ಹೋಗುತ್ತಿದ್ದಾರೆ. ಆದರೆ ಶೌಚಾಲಯ ಇದ್ದೂ ಬಯಲಿಗೆ ಹೋಗುತ್ತಿದ್ದವರು 2014-2018ರಲ್ಲಿಯೂ ಸಮಾನವಾಗಿದ್ದಾರೆ. ಅವರ ಮೇಲೆ ಸ್ವಚ್ಛ ಭಾರತ ಯಾವುದೇ ಪರಿಣಾಮ ಬೀರಿಲ್ಲ.

ಕೆಲವು ಕಡೆ ಇನ್ನೂ ಇದೆ ಹಳೆ ಚಾಳಿ
ದೇಶದ ಮನೆಗಳಲ್ಲಿ ಶೌಚಾಲಗಳ ಸಂಖ್ಯೆ ಹೆಚ್ಚಾಗಿದ್ದರೂ, ಬಯಲು ಶೌಚದ ಪ್ರಮಾಣ ಪೂರ್ಣವಾಗಿ ನಿಂತಿದೆ ಎಂದು ಹೇಳಲು ಬರುವುದಿಲ್ಲ. ಏಕೆಂದರೆ ಮನೆಯಲ್ಲಿ ಶೌಚಾಲಯ ಇದ್ದರೂ ಕೆಲವರು ಇನ್ನೂ ಬಯಲಿನಲ್ಲಿ ಶೌಚ ಮಾಡುತ್ತಿದ್ದಾರೆ. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಈ ಪ್ರವೃತ್ತಿ ಹೆಚ್ಚಾಗಿ ಕಂಡುಬರುತ್ತಿದೆ. ಚಿಕ್ಕಂದಿನಿಂದಲೂ ಬಯಲನ್ನೇ ಆಶ್ರಯಿಸಿಕೊಂಡು ಬಂದವರಿಗೆ ಅಭ್ಯಾಸ ಬದಲಾಯಿಸಲು ಕಷ್ಟವಾಗಿರುವುದು ಇದಕ್ಕೆ ಕಾರಣ. ಇದರಿಂದ ಸ್ವಚ್ಛ ಭಾರತ ಗುರಿಯನ್ನು ಶೇ. 100ರಷ್ಟು ಸಾಧಿಸುವುದು ಕಷ್ಟವಾಗಿದೆ. ಇಂದು ದೇಶದ ಪ್ರತಿ ಮನೆಯಲ್ಲಿ ಅಥವ ನಗರಗಳಲ್ಲಿಯೂ ಮನೆಗೆ ಒಂದರಂತೆ ಶೌಚಾಲಯ ಇದ್ದಿರಬಹುದು. ಆದರೆ ಕುಟುಂದ ಸದಸ್ಯರೆಲ್ಲರೂ ಅದನ್ನು ಬಳಸುತ್ತಿಲ್ಲ. ಅಂದರೆ ಶೌಚಾಲಯಗಳು ಶೇ. 100ರಷ್ಟು ನಿರ್ಮಾಣವಾದರೂ, ಬಯಲು ಮಲ ವಿಸರ್ಜನೆ ಸಂಪೂರ್ಣವಾಗಿ ನಿಲ್ಲುವುದು ಕಷ್ಟ. 2014 ಮತ್ತು 2018ರ ಅಂಕಿ ಅಂಶಗಳನ್ನು ನಾವು ಗಮನಿಸಿದರೆ ಈ ವರದಿ ಹೌದು ಎನುತ್ತದೆ.

ಶೇ.99ರಷ್ಟು ಸಾಧನೆ
ಸ್ವಚ್ಛ ಭಾರತ ಯೋಜನೆಯ ಬಳಿಕ ಇಂದು ದೇಶದ ಅಷ್ಟೂ ನಗರಗಳು ಮತ್ತು ಗ್ರಾಮಾಂತರ ಭಾಗಗಳಲ್ಲಿ ಶೌಚಾಲಯ ನಿರ್ಮಾಣದಲ್ಲಿ ವೇಗ ಕಂಡು ಬಂದಿದ್ದು, ಶೇ. 38ರಿಂದ ಶೇ. 99ಕ್ಕೆ ಜಿಗಿತ ಕಂಡಿದೆ. ಅಂದರೆ ಇಂದು ದೇಶದ ಬಹುತೇಕ ಮನೆಗಳಲ್ಲಿ ಶೌಚಾಲಯಗಳು ಸ್ಥಾಪನೆಯಾಗಿವೆ.

90 ಸಾವಿರ ಮರುಜೀವ
ಬಯಲು ಶೌಚಾಲಯದಿಂದ ಆರೋಗ್ಯದ ಮೇಲೆ ನೇರ ಪರಿಣಾಮ ಎಂದು ವಿಶ್ವ ಆರೋಗ್ಯ ಸಂಸ್ಥೆ ಬಹಳ ಹಿಂದೆಯೇ ಎಚ್ಚರಿಸಿತ್ತು. ಬಯಲು ವಿರ್ಜನೆಯಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತದೆ. ರೋಗ ಒಬ್ಬರಿಂದ ಮತ್ತೂಬ್ಬರಿಗೆ ಹರಡಲು ಇದೇ ಮೂಲ ಕಾರಣ ಎಂದು ಅಂಕಿ ಅಂಶ ಸಮೇತ ಹೇಳಿತ್ತು. 2014ರಲ್ಲಿ 1.40 ಲಕ್ಷ ಜನರು ಅತಿಸಾರ ಬೇಧಿಗೆ ಬಲಿಯಾಗುತ್ತಿದ್ದರು. 2018ರ ಅಂಕಿ ಅಂಶಗಳೇ ಹೇಳುವಂತೆ ಸುಮಾರು 50 ಸಾವಿರ ಜನ ಮಾತ್ರ ಈಗ ಅತಿಸಾರ ಬೇಧಿಗೆ ಒಳಗಾಗುತ್ತಿದ್ದಾರೆ. ಅಂದರೆ ಸುಮಾರು 90 ಸಾವಿರ ಜೀವ ಉಳಿದಿವೆ.

ಶೌಚಾಲಯ ನಿರ್ಮಾಣಕ್ಕೆ ಬಜೆಟ್‌ ವಿನಿಯೋಗ (ಕೋ.ರೂ.)

ಶೇ.38ರಷ್ಟು
2014ರಲ್ಲಿ ನಡೆಸಿದ ಅಧ್ಯಯನಗಳ ಪ್ರಕಾರ ದೇಶದಲ್ಲಿ ಶೇ. 38.07ರಷ್ಟು ಮನೆಗಳಲ್ಲಿ ಮಾತ್ರ ಶೌಚಾಲಯಗಳು ನಿರ್ಮಾಣವಾಗಿದ್ದವು.

  ಕಾರ್ತಿಕ್‌ ಅಮೈ

ಟಾಪ್ ನ್ಯೂಸ್

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಸ್ವಾತಂತ್ರ್ಯ ಅಮೃತಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಅಮೃತ ಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.