ಸುದೀಪ್ಗೆ “ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ
Team Udayavani, Feb 10, 2021, 3:28 PM IST
ಹರಿಹರ: ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಮಂಗಳವಾರ ನಡೆದ ಮೂರನೇ ವಾಲ್ಮೀಕಿ ಜಾತ್ರೆಯಲ್ಲಿ ಸಹಸ್ರಾರು ಅಭಿಮಾನಿಗಳ ಹರ್ಷೋದ್ಘಾರದ ಮಧ್ಯೆ ಚಿತ್ರ ನಟ ಕಿಚ್ಚ ಸುದೀಪ್ ಅವರಿಗೆ ಪ್ರಥಮ ವಾಲ್ಮೀಕಿ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಸಂಖ್ಯ ಅಭಿಮಾನಿ ಗಳನ್ನು ಕಂಡು ಪುಳಕಿತ ರಾದ ಸುದೀಪ್, ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರುತ್ತಾರೆ ಎಂದು ಕೊಂಡಿರಲಿಲ್ಲ ಎಂದು ಮಾತು ಆರಂಭಿಸುವಷ್ಟರಲ್ಲಿ ಅಭಿಮಾನಿಗಳ ಕೇಕೆ, ಕುಣಿತ ಹೆಚ್ಚಾಯಿತು. ನಾನು ಚಿತ್ರರಂಗದವನು, ಚಿತ್ರರಂಗವೇ ನನಗೆ ಜಗತ್ತು ಎಂದಷ್ಟೇ ಹೇಳಿ ಸುದೀಪ್ ಮಾತು ಮುಗಿಸಿದರು.
ಅಭಿಮಾನಿಗಳು ಅತಿರೇಕದ ವರ್ತನೆ ತೋರಿದ್ದರಿಂದ ಸುದೀಪ್ ಅವರನ್ನು ಹೆಲಿಪ್ಯಾಡ್ಗೆ ಕಳುಹಿಸಲಾಯಿತು. ಸಿಎಂ ಬಂದು ಹೋದ ನಂತರ ಸುದೀಪ್ ಹೆಲಿಕಾಪ್ಟರ್ ನಲ್ಲಿ ಆಗಮಿಸಿದರು. ಆಗ ಜನರು ಹುಚ್ಚೆದ್ದು ಕುಣಿಯುತ್ತಾ, ಕೇಕೆ ಹಾಕತೊಡಗಿದರು. ಸಿಎಂ ಇದ್ದಾಗ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದ ಪೊಲೀಸರು, ನಂತರ ನಿರ್ಲಕ್ಷ್ಯ ತೋರಿದ್ದರಿಂದ ಅಭಿಮಾನಿಗಳ ಮಹಾಪೂರವನ್ನು ನಿಯಂತ್ರಿಸಲಾಗಲಿಲ್ಲ.
ಸುದೀಪ್ ವೇದಿಕೆ ಏರುತ್ತಿದ್ದಂತೆ ಅಭಿಮಾನಿಗಳು ವೇದಿಕೆಯತ್ತ ಅಕ್ಷರಶಃ ದಾಳಿ ಇಟ್ಟರು. ವೇದಿಕೆ ಪಕ್ಕದ ಪ್ರೆಸ್ ಗ್ಯಾಲರಿಯಲ್ಲಿದ್ದ ಮಾಧ್ಯಮದವರು ತಮ್ಮ ಲ್ಯಾಪ್ಟಾಪ್, ಪರಿಕರ ಎತ್ತಿಕೊಂಡು ಓಡಿದರು. ಈ ಗಡಿಬಿಡಿಯಲ್ಲಿ ಹಲವರ ಎಲೆಕ್ಟ್ರಾನಿಕ್ ಸಲಕರಣೆಗಳು ಕಳೆದು ಹೋದವು. ಪೊಲೀಸರು 3-4 ಸಲ ಲಘು ಲಾಠಿ ಪ್ರಹಾರ ನಡೆಸಿದರೂ ಜನ ಸಮೂಹ ಬಗ್ಗಲಿಲ್ಲ. ವೇದಿಕೆ ಸುತ್ತ ಹಾಕಿದ್ದ ಕುರ್ಚಿಗಳು ಮುರಿದವು. ಮಕ್ಕಳು, ಮಹಿಳೆಯರು ನೂಕು, ನುಗ್ಗಾಟದಿಂದ ತಲ್ಲಣಗೊಂಡರು. ಕಳೆದ ಎರಡು ಬಾರಿಯ ಜಾತ್ರೆಯಲ್ಲಿ ಸುದೀಪ್ ಆಗಮಿಸಿದಾಗ ಅಭಿಮಾನಿಗಳ ಅತಿ ಉತ್ಸಾಹವನ್ನು ಕಂಡಿದ್ದ ಪೊಲೀಸರು, ಈ ಬಾರಿ ಮುನ್ನೆಚ್ಚರಿಕೆ ಕೈಗೊಳ್ಳುವಲ್ಲಿ ವಿಫಲರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rachana inder: ಮರ್ಡರ್ ಮಿಸ್ಟರಿ 4 ಎನ್ 6
Sandalwood: ರಿಲಯನ್ಸ್ ತೆಕ್ಕೆಗೆ ʼಜಡ್ಜ್ ಮೆಂಟ್ʼ
Sandalwood: ಸ್ಪಂದನಾ ಇದ್ದಿದ್ದರೆ ಬಹಳ ಖುಷಿಪಡುತ್ತಿದ್ದಳು.. ವಿಜಯ ರಾಘವೇಂದ್ರ ಭಾವುಕ
ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ
Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್ʼ
MUST WATCH
ಹೊಸ ಸೇರ್ಪಡೆ
Udupi: ಸಾಲ ಪ್ರಕರಣ: ಆರೋಪಿಗಳು ದೋಷಮುಕ್ತ
Students; ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ಘಾಸಿ!; ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಹಿಂಸೆ
IPL 2024; ಲಕ್ನೋ, ಹೈದ್ರಾಬಾದ್ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ
ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ
ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ