ಗದ್ದೆಗೆ ಇಳಿದು ಬೆಳೆ ಕಟಾವು ಮಾಡಿದ ನಟಿ ರಕ್ಷಿತಾ ಪುತ್ರ
Team Udayavani, Jun 28, 2021, 12:51 PM IST
ಬೆಂಗಳೂರು: ಕೆಲವು ಪೋಷಕರು ತಮ್ಮ ಮಕ್ಕಳು ಸದಾ ಓದಿನಲ್ಲೇ ಮಗ್ನರಾಗಿರಬೇಕೆಂದು ಬಯಸುತ್ತಾರೆ. ಅದರಲ್ಲೂ ನಗರ ವಾಸಿಗಳ ಮಕ್ಕಳು ಶಾಲೆ, ಟ್ಯೂಷನ್, ಡಾನ್ಸ್ ಕ್ಲಾಸು ಹೀಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿಯೇ ಬ್ಯುಸಿಯಾಗಿರುತ್ತವೆ. ಆದರೆ, ಚಿತ್ರ ನಟಿ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ಅವರ ಪುತ್ರ ಮಾತ್ರ ಗದ್ದೆಗೆ ಇಳಿದು ಕೃಷಿಕನಾಗಿದ್ದಾನೆ
ರಕ್ಷಿತಾ-ಪ್ರೇಮ್ ದಂಪತಿಯ ಪುತ್ರ ಸೂರ್ಯ ತಮ್ಮ ತೋಟದಲ್ಲಿ ಬೆಳೆ ಕಟಾವು ಮಾಡಿದ್ದಾನೆ. ಈ ದೃಶ್ಯದ ವಿಡಿಯೋವನ್ನು ವನ್ನು ರಕ್ಷಿತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಈ ವಯಸ್ಸಿನಲ್ಲಿ ಅವನು ಕೃಷಿಯಲ್ಲಿ ಆಸಕ್ತಿ ಹೊಂದಿರುವುದು ಮತ್ತು ಸುಲಲಿತವಾಗಿ ಕಟಾವು ಮಾಡುವುದು ನೋಡಿ ಅವನ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ರಕ್ಷಿತಾ ಬರೆದುಕೊಂಡಿದ್ದಾರೆ.
ಇನ್ನು ಪ್ರೇಮ್ ಅವರು ರಕ್ಷಿತಾ ಅವರ ಸಹೋದರನಿಗೆ ಏಕ್ ಲವ್ ಯಾ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ವಿಭಿನ್ನ ಲುಕ್ ಗಳು ಹಾಗೂ ಸಾಂಗ್ ಗಳಿಂದ ಈ ಸಿನಿಮಾ ಸಿನಿರಸಿಕರ ಗಮನ ಸೆಳೆದಿದೆ. ಈ ಚಿತ್ರಕ್ಕೆ ರಕ್ಷಿತಾ ಪ್ರೇಮ್ ಅವರೇ ನಿರ್ಮಾಪಕಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ