- Saturday 14 Dec 2019
“ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದ ಮತ್ತೊಂದು ಲಿರಿಕಲ್ ವಿಡಿಯೋ ರಿಲೀಸ್
ಟಾಕಿಂಗ್ಸ್ಟಾರ್ ಟೀಸರ್ ಆಯ್ತು, ಈಗ ಹಾಡು
Team Udayavani, Sep 10, 2019, 3:04 AM IST
ಸೃಜನ್ ಲೋಕೇಶ್ ಅಭಿನಯದ “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರ ಈಗಾಗಲೇ ಒಂದಷ್ಟು ಸದ್ದು ಮಾಡುತ್ತಿದೆ. ಚಿತ್ರ ಆರಂಭದಿಂದ ಒಂದಿಲ್ಲೊಂದು ಸುದ್ದಿಗೆ ಕಾರಣವಾಗುತ್ತಿದ್ದ ಚಿತ್ರ ಈಗ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್ಗೆ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಅಷ್ಟೇ ಅಲ್ಲ, ಮೊದಲ ಹಾಡು ಕೇಳಿದ ಬಹುತೇಕರು ಮೆಲೋಡಿಗೆ ಫಿದಾ ಆಗಿದ್ದು, ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ವಿಜಯ ಪ್ರಕಾಶ್ ಹಾಡಿದ ಹಾಡಿಗೂ ಸಾಕಷ್ಟು ಮೆಚ್ಚುಗೆ ಬಂದಿದ್ದು, ಖುಷಿಯ ಅಲೆಯಲ್ಲಿರುವ ಚಿತ್ರತಂಡ, ಸೋಮವಾರ ಸಂಜೆ ಮತ್ತೊಂದು ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿದೆ. ಹೌದು, “ಟಾಕಿಂಗ್ ಸ್ಟಾರ್…’ ಎಂದು ಶುರುವಾಗು ಹಾಡು ಹೊರಬಂದಿದ್ದು, ಆ ಹಾಡಿಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ಸಿಕ್ಕಿದೆ. ಈ ಹಿಂದೆ ಬಿಡುಗಡೆಯಾದ ಎರಡು ಹಾಡುಗಳಿಗೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕ ಹಿನ್ನೆಲೆಯಲ್ಲಿ ಚಿತ್ರತಂಡ ಈಗ ಸೃಜನ್ ಲೋಕೇಶ್ ಅವರ ಮೇಲೆಯೇ ಒಂದು ಹಾಡು ಮಾಡಿ ಬಿಡುಗಡೆ ಮಾಡಿದೆ.
ಸಂತೋಷ್ ವೆಂಕಿ ಹಾಡಿರುವ ಹಾಡಿಗೆ ಸೃಜನ್ ಅಭಿಮಾನಿಗಳು ಒಳ್ಳೆಯ ಕಾಮೆಂಟ್ ಮಾಡುತ್ತಿದ್ದಾರೆ ಎಂದು ನಿರ್ದೇಶಕ ತೇಜಸ್ವಿ, ಮುಂದಿನ ವಾರ ಇನ್ನೊಂದು ಹಾಡು ಮತ್ತು ಒಂದು ಟ್ರೇಲರ್ ಬಿಡುಗಡೆ ಮಾಡಲು ಯೋಚಿಸಿದ್ದಾರೆ. ಕಾಮಿಡಿ, ರೊಮ್ಯಾನ್ಸ್ ಹಾಗಯ ಆ್ಯಕ್ಷನ್ ಮಿಕ್ಸ್ ಮಾಡಿ ಒಂದು ಟ್ರೇಲರ್ ಹೊರತರಲು ನಿರ್ಧರಿಸಿರುವ ತೇಜಸ್ವಿ, ಸೆಪ್ಟೆಂಬರ್ 20 ರಂದು ಟ್ರೇಲರ್ ಬಿಡುಗಡೆ ಮಾಡಲು ತಯಾರು ಮಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಸೃಜನ್ ಈ ಚಿತ್ರದಲ್ಲಿ ನಾಯಕ ನಟನಾಗಿ ಮತ್ತು ನಿರ್ಮಾಪಕರಾಗಿಯೂ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಹೆಚ್.ಸಿ ವೇಣು ಛಾಯಾಗ್ರಹಣ ಮಾಡಿದರೆ, ರಾಕೇಶ್. ಸಿ.ಎ ಚಿತ್ರಕ್ಕೆ ಸಂಭಾಷಣೆ ಒದಗಿಸಿದ್ದಾರೆ. ಒಟ್ಟಾರೆ ಇಂದಿನ ಪ್ರೇಕ್ಷಕರಿಗೆ ಇಷ್ಟವಾಗುವಂಥ ರೊಮ್ಯಾಂಟಿಕ್ ಕಾಮಿಡಿ ಕಥೆ ಹೆಣೆದು ಮಾಡಿರುವ ಚಿತ್ರದಲ್ಲಿ ನವಿರಾದ ಹಾಸ್ಯ ಹೈಲೈಟ್. ಚಿತ್ರದಲ್ಲಿ ನಾಯಕ ಸೃಜನ್ ಲೋಕೇಶ್ಗೆ ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದಾರೆ.
ಈ ವಿಭಾಗದಿಂದ ಇನ್ನಷ್ಟು
-
ಬೆಂಗಳೂರು: ಸ್ಯಾಂಡಲ್ ವುಡ್ ನ ಬ್ಲಾಕ್ ಬಾಸ್ಟರ್ ಚಿತ್ರ ಕೆಜಿಎಫ್ ನ ಎರಡನೇ ಭಾಗಕ್ಕೆ ದೇಶದ ಜನ ಕಾತರಿಸುತ್ತಿದ್ದಾರೆ. ಕೆಜಿಎಫ್ ನ ಮೊದಲ ಭಾಗ ಬಿಡುಗಡೆಯಾಗಿ ಒಂದು...
-
ಸಲ್ಮಾನ್ ಖಾನ್ ನಾಯಕರಾಗಿರುವ "ದಬಾಂಗ್-3' ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರ ಮಾಡಿರೋದು ಗೊತ್ತೇ ಇದೆ. ಚಿತ್ರದಲ್ಲಿ ಬಲ್ಲಿ ಸಿಂಗ್ ಎಂಬ ಪಾತ್ರದಲ್ಲಿ...
-
"ದುನಿಯಾ' ವಿಜಯ್ ಇದೇ ಮೊದಲ ಬಾರಿಗೆ "ಸಲಗ' ಚಿತ್ರ ನಿರ್ದೇಶನ ಮಾಡುತ್ತಿರುವುದು ಗೊತ್ತೇ ಇದೆ. ಅವರ ಮೊದಲ ನಿರ್ದೇಶನದ ಚಿತ್ರ ಆಗಿರುವುದರಿಂದ ಎಲ್ಲರಿಗೂ ನಿರೀಕ್ಷೆ...
-
ಬಹುತೇಕ ಹೊಸ ಪ್ರತಿಭೆಗಳು ಸೇರಿ ನಿರ್ಮಿಸುತ್ತಿರುವ "ಲಕ್ಷ್ಯ' ಚಿತ್ರದ ಎರಡು ಲಿರಿಕಲ್ ಹಾಡುಗಳು ಮತ್ತು ಮೋಶನ್ ಪೋಸ್ಟರ್ ಅನ್ನು ನಟ ಅನಿರುದ್ಧ್ ಇತ್ತೀಚೆಗೆ...
-
ನಟಿ ಸುಮಲತಾ ಅಂಬರೀಶ್ ಕಳೆದೊಂದು ವರ್ಷದಿಂದ ಚಿತ್ರರಂಗಕ್ಕಿಂತ ಹೆಚ್ಚಾಗಿ ಸುದ್ದಿಯಾಗುತ್ತಿರುವುದು ರಾಜಕೀಯ ರಂಗದಲ್ಲಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ...
ಹೊಸ ಸೇರ್ಪಡೆ
-
ತುಮಕೂರು: ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಮತ್ತು ಚೆನ್ನರಾಯ ದುರ್ಗ ಹೋಬಳಿಯ 18 ಹಳ್ಳಿಗಳಿಗೆ ಹೇಮಾವತಿ ನೀರು ಹರಿಸಬೇಕು ಎಂದು ಆಗ್ರಹಿಸಿ ಶ್ರೀ...
-
ನವದೆಹಲಿ/ಶ್ರೀನಗರ್: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಗೃಹ ಬಂಧನವನ್ನು ಮತ್ತೆ ಮೂರು ತಿಂಗಳ ಕಾಲ ಮುಂದುವರಿಸುವುದಾಗಿ ಸಬ್ ಜೈಲು ಅಧಿಕಾರಿಗಳು...
-
ತರೀಕೆರೆ: ಜನವರಿ 14 ಮತ್ತು 15 ರಂದು ಅಜ್ಜಂಪುರ ತಾಲೂಕಿನ ಸೊಲ್ಲಾಪುರದ ಶ್ರೀ ಸಿದ್ದರಾಮೇಶ್ವರ ದೇವಾಲಯದ ಆವರಣದಲ್ಲಿ 847ನೇ ಶ್ರೀ ಸಿದ್ದರಾಮೇಶ್ವರರ ಜಯಂತ್ಯುತ್ಸವವನ್ನು...
-
ಹೊಸದಿಲ್ಲಿ: ಈರುಳ್ಳಿ ಬೆಲೆ ತಹಬಂದಿಗೆ ತರಲು ಇನ್ನಿಲ್ಲದ ಯತ್ನ ಮಾಡುತ್ತಿರುವ ಕೇಂದ್ರ ಸರಕಾರ ಈಗ ಅಫ್ಘಾನಿಸ್ಥಾನದಿಂದಲೂ ಆಮದು ಮಾಡುತ್ತಿದೆ. ಪಾಕಿಸ್ಥಾನದ...
-
ಮಣಿಪಾಲ: ಐಪಿಎಲ್ ಹರಾಜಿನಲ್ಲಿ ಈ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಯಾವ ಆಟಗಾರರನ್ನು ಖರೀದಿಸಿದರೆ ಯಶಸ್ಸು ಗಳಿಸಬಹುದು ಎಂಬ ಪ್ರಶ್ನೆಯನ್ನು...