ಭೂತಯ್ಯನ ಮೊಮ್ಮಗ ಅಯ್ಯುಗೆ ಸೃಜನ್ ಧ್ವನಿ
Team Udayavani, Aug 9, 2017, 10:50 AM IST
ಬೇರೆ ನಟರಿಂದ ಈಗ ಸಿನಿಮಾಕ್ಕೆ ಕಾಮೆಂಟರಿ ಕೊಡಿಸೋದು ಹೆಚ್ಚುತ್ತಿದೆ. ಅದರಲ್ಲೂ ಹೊಸಬರಂತೂ ಸ್ಟಾರ್ಗಳಿಂದ ಅಥವಾ ಹೆಸರು ಮಾಡಿದ ನಟರಿಂದ ಚಿತ್ರಕ್ಕೆ ಧ್ವನಿ ಕೊಡಿಸುತ್ತಲೇ ಇರುತ್ತಾರೆ. ಮೊನ್ನೆಯಷ್ಟೇ “ಭರ್ಜರಿ’ ಚಿತ್ರಕ್ಕೆ ದರ್ಶನ್ ಕೊಟ್ಟಿದ್ದು ನಿಮಗೆ ಗೊತ್ತೇ ಇದೆ. ಈಗ ಸೃಜನ್ ಲೋಕೇಶ್ ಕೂಡಾ ಚಿತ್ರವೊಂದಕ್ಕೆ ಧ್ವನಿ ನೀಡಿದ್ದಾರೆ. ಅದು “ಭೂತಯ್ಯನ ಮೊಮ್ಮಗ ಅಯ್ಯು’ ಚಿತ್ರಕ್ಕೆ.
ನಾಗರಾಜ ಪೀಣ್ಯ ನಿರ್ದೇಶನದ ಈ ಚಿತ್ರಕ್ಕೆ ಸೃಜನ್ ಲೋಕೇಶ್ ಕಾಮೆಂಟರಿ ಕೊಟ್ಟಿದ್ದಾರೆ. ಒಂದರ್ಥದಲ್ಲಿ ಅವರನ್ನು ಈ ಸಿನಿಮಾದ ನಿರೂಪಕರು ಎಂದರೆ ತಪ್ಪಲ್ಲ. ಚಿತ್ರದ ಆರಂಭದಿಂದ ಕೊನೆವರೆಗೂ ಇವರ ನಿರೂಪಣೆ ಇದೆ. “ಚಿತ್ರಕ್ಕೆ ಯಾರಿಂದ ಧ್ವನಿ ಕೊಡಿಸೋದು ಎಂದು ಆಲೋಚಿಸುತ್ತಿದ್ದಾಗ ನಮಗೆ ಹೊಳೆದಿದ್ದು ಸೃಜನ್ ಲೋಕೇಶ್. ಅದರಂತೆ ಅವರನ್ನು ಕೇಳಿಕೊಂಡಾಗ, ಖುಷಿಯಿಂದ ಒಪ್ಪಿಕೊಂಡು ಬಂದು ಧ್ವನಿ ನೀಡಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ನಾಗರಾಜ್ ಪೀಣ್ಯ.
ಚಿತ್ರದಲ್ಲಿ ಸೃಜನ್ ಅವರ ತಾಯಿ ಗಿರಿಜಾ ಲೋಕೇಶ್ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. “ಭೂತಯ್ಯನ ಮೊಮ್ಮಗ ಅಯ್ಯು’ ಒಂದು ಹಳ್ಳಿ ಸೊಗಡಿನಲ್ಲೇ ಸಾಗುವ ಸಿನಿಮಾವಾಗಿದ್ದು,ಚಿತ್ರದ ತುಂಬ ಹಾಸ್ಯ ಕಲಾವಿದರ ದಂಡೇ ಇದೆ.ಹೊನ್ನವಳ್ಳಿ ಕೃಷ್ಣ, ರಾಕ್ಲೈನ್ ಸುಧಾಕರ್, ಉಮೇಶ್, ಮನ್ದೀಪ್ರಾಯ್, ಚಿಕ್ಕಣ್ಣ ನಟಿಸಿದ್ದಾರೆ. “ಭೂತಯ್ಯನ ಮೊಮ್ಮಗ ಅಯ್ಯು’ ಎಂಬ ಶೀರ್ಷಿಕೆ ನೋಡಿದಾಗ, ಆ ಚಿತ್ರಕ್ಕೂ ಈ ಚಿತ್ರಕ್ಕೂ ಏನಾದರೂ ಸಂಬಂಧವಿರಬಹುದಾ ಎಂಬ ಪ್ರಶ್ನೆ ಎದುರಾಗಬಹುದು.
ಆದರೆ, ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಅದು ಗಂಭೀರವಾಗಿದ್ದರೆ, ಇದು ಸಂಪೂರ್ಣ ಹಾಸ್ಯಮಯವಾಗಿರಲಿದೆಯಂತೆ. ಇಲ್ಲಿ ಬರುವ ಪ್ರತಿಯೊಂದು ಪಾತ್ರಗಳದ್ದೂ ಒಂದೊಂದು ಟ್ರ್ಯಾಕ್ ಓಪನ್ ಆಗುತ್ತದೆ. “ಭೂತಯ್ಯನ ಮಗ ಅಯ್ಯು’ ಚಿತ್ರದಲ್ಲಿ ಎಂ.ಪಿ.ಶಂಕರ್ ಭೂತಯ್ಯನಾಗಿ, ಲೋಕೇಶ್ ಅಯ್ಯು ಆಗಿ ಕಾಣಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್