Birthday ಅಂದರೆ ಭಯ ಬರುತ್ತದೆ…ಅಸಹ್ಯ ಆಗಿ ಬಿಟ್ಟಿದೆ: ಯಶ್ ನೋವಿನ ನುಡಿ
ಬೇಜಾರು ಮಾಡಿಕೊಂಡರೂ ಪರವಾಗಿಲ್ಲ...
Team Udayavani, Jan 8, 2024, 7:31 PM IST
ಗದಗ: ನನಗೆ ಬರ್ತ್ ಡೇ ಅಂದರೆ ಭಯ ಬರುತ್ತದೆ, ಅಸಹ್ಯ ಆಗಿ ಬಿಟ್ಟಿದೆ. ನಾವ್ಯಾರು ಕಟೌಟ್, ಬ್ಯಾನರ್ ಹಾಕಬೇಕೆಂದು ಇಷ್ಟಪಡುವುದಿಲ್ಲ ಎಂದು ರಾಕಿಂಗ್ ಸ್ಟಾರ್ ಯಶ್ ಅವರು ನೋವಿನ ನುಡಿಗಳನ್ನು ಸೋಮವಾರ ರಾತ್ರಿ ಆಡಿದ್ದಾರೆ.
ಯಶ್ ಅವರ ಫೋಟೋವಿದ್ದ ಜನ್ಮ ದಿನದ ಶುಭಾಶಯ ಕೋರುವ ಕಬ್ಬಿಣದ ರಾಡ್ ಗಳಿದ್ದ ಬೃಹತ್ ಕಟೌಟ್ ಗೆ ವಿದ್ಯುತ್ ತಂತಿ ತಗುಲಿ ಮೂವರು ಅಭಿಮಾನಿಗಳು ಮೃತಪಟ್ಟ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿಗೆ ಆಗಮಿಸಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಯಶ್ ”ಇಂತಹದ್ದನ್ನೂ ಯಾರೂ ಇಷ್ಟಪಡುವುದಿಲ್ಲ. ಬರ್ತ್ ಡೇ ಅಂದರೆ ಭಯ ಬರುತ್ತದೆ. ಅಸಹ್ಯ ಆಗಿ ಬಿಟ್ಟಿದೆ. ಕೆಲವು ದಿನಗಳ ಹಿಂದೆ ಕೋವಿಡ್.. ಕೋವಿಡ್.. ಎಂದ ಕಾರಣ ನಮ್ಮಿಂದ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಯಾರೂ ಬರಬೇಡಿ ಅಂದಿದ್ದೆ. ಬೇಡ ಅಂದರೂ ಬೇಜಾರು ಮಾಡಿಕೊಳ್ಳುತ್ತಾರೆ. ಆಚರಣೆ ಮಾಡಿದರೆ ಈ ರೀತಿ ಆಗುತ್ತದೆ ಎಂದು ನೋವು ಹೊರ ಹಾಕಿದರು.
ಸಾಂತ್ವನ ಏನು ಹೇಳುವುದು, ಮನೆ ಮಗ ಬರುತ್ತಾನಾ, ನಮ್ಮ ಮನೆಯಲ್ಲಿ ಆದರೂ ಹೀಗೆ ಅಲ್ಲವೇ? ಏನು ಕೊಟ್ಟರೂ ಮಗ ಬರುತ್ತಾನಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Tragedy ನಡೆದ ಸೂರಣಗಿ ಗ್ರಾಮಕ್ಕೆ ಬಂದ ಯಶ್; ಆಕ್ರಂದನ ಕಂಡು ಭಾವುಕ
ನನಗೆ ನನ್ನ ಹಿಂದೆ ಮುಂದೆ ಜನ ಓಡಾಡಿಸಿಕೊಳ್ಳುವುದು ಇಷ್ಟವಿಲ್ಲ. ಈ ಬ್ಯಾನರ್, ಕಟೌಟ್ ಹಾಕುವುದನ್ನು, ಬೈಕ್ ನಲ್ಲಿ ನನ್ನನ್ನು ಚೇಸ್ ಮಾಡುವುದನ್ನು ಬಿಟ್ಟು ಬಿಡಿ. ಜೀವನಕ್ಕೆ ಬೇಕಾದುದನ್ನು ಮಾಡಿ. ನಾವು ಕೆಲಸ ಮಾಡಿದ್ದನ್ನು ನೋಡಿ ಜನ ಆಶೀರ್ವಾದ ಮಾಡುತ್ತಾರೆ. ಅಭಿಮಾನಿಗಳು ಅವರ ಬದುಕಿನಲ್ಲಿ ಖುಷಿಯಾಗಿರುವುದೇ ದೊಡ್ಡ ಅಭಿಮಾನ ಎಂದರು.
ಯಾರು ಬೇಜಾರು ಮಾಡಿಕೊಂಡರೂ ಪರವಾಗಿಲ್ಲ,ತಂದೆ, ತಾಯಿಯ ಮೇಲಿರುವ ಗೌರವ ಉಳಿಸಿಕೊಳ್ಳಿ. ಜವಾಬ್ದಾರಿಯಿಂದ ನಡೆದುಕೊಳ್ಳಿ ಇಲ್ಲಿಗೆ ನಾನು ಬರುವಾಗಲೂ ಹಲವರು ನನ್ನನ್ನು ಬೈಕ್ ನಲ್ಲಿ ಚೇಸ್ ಮಾಡಿಕೊಂಡು ಬಂದರು. ಈ ರೀತಿಯ ಅಭಿಮಾನ ಬೇಡ. ಈ ವಿಚಾರದಲ್ಲಿ ರಾಜಕೀಯ ಬೇಡ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’