ಸೆನ್ಸಾರ್‌ನವರು ನಮ್ಮ ಸೇವಕರು: ನವರಸನ್‌


Team Udayavani, Sep 28, 2017, 7:00 PM IST

Navarasan-(1).jpg

ನವರಸನ್‌ ಮೊದಲ ಬಾರಿಗೆ ನಿರ್ದೇಶಿಸಿರುವ ಮತ್ತು ನಾಯಕನಾಗಿ ಕಾಣಿಸಿಕೊಂಡಿರುವ “ವೈರ’ ಚಿತ್ರವು ಮುಂದಿನ ಶುಕ್ರವಾರ (ಅಕ್ಟೋಬರ್‌ 5) ಬಿಡುಗಡೆಯಾಗುತ್ತಿದೆ. ಈ ಚಿತ್ರದ ಬಗ್ಗೆ ಸೆನ್ಸಾರ್‌ ಮಂಡಳಿಯಿಂದ ಆದ ಅನುಭವಗಳ ಬಗ್ಗೆ ನವರಸನ್‌ ಕಿಡಿಕಾರಿದ್ದಾರೆ. ಗುರುವಾರ ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸೆನ್ಸಾರ್‌ ಮಂಡಳಿಯವರು ಹಿಗ್ಗಾಮುಗ್ಗಾ ಝಾಡಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, “ನಮ್ಮ ಸಿನಿಮಾದಲ್ಲಿ ನಾಯಕಿ ಬೆನ್ನು ತೋರಿಸಿದ್ದಾಳೆ ಎಂಬ ಒಂದೇ ಕಾರಣಕ್ಕೆ “ಎ’ ಸರ್ಟಿಫಿಕೇಟ್‌ ಕೊಟ್ಟಿದ್ದಾರೆ. ನನಗಿರುವುದು ಒಂದೇ ಪ್ರಶ್ನೆ, ನಾವು ಸಿನಿಮಾ ಮಾಡಬೇಕಾಗಿರುವುದು ಸೆನ್ಸಾರ್‌ ಮಂಡಳಿಗಾ ಅಥವಾ ಪ್ರೇಕ್ಷಕರಿಗಾ ಎಂದರು. ಆ ದೃಶ್ಯ ಚಿತ್ರಕ್ಕೆ ಅವಶ್ಯಕತೆ ಇತ್ತು. ಅದರ ಹಿಂದೆ ಒಂದು ಮೆಸೇಜ್‌ ಸಹ ಇದೆ. ಅದನ್ನು ಸೆನ್ಸಾರ್‌ ಮಂಡಳಿಯವರು ಸಹ ಒಪ್ಪಿದ್ದಾರೆ. ಆದರೂ ನಮಗೆ “ಎ’ ಪ್ರಮಾಣಪತ್ರ ಕೊಟ್ಟಿದ್ದಾರೆ.

ಅದು ತಪ್ಪು ಎನ್ನುವುದಾದರೆ, ಒಂದು ಚಿತ್ರ ಹೇಗೆ ಮಾಡಬೇಕು ಎಂದು ಅವರೇ ಹೇಳಲಿ ಅಥವಾ ಅವರೇ ಸ್ಕ್ರಿಪ್ಟ್ ಕೊಡಲಿ. ನಮ್ಮ ಸಿನಿಮಾಗೆ ಕೊಟ್ಟರು ಸರಿ. “ಬಾಹುಬಲಿ’ ಚಿತ್ರದಲ್ಲೂ ಅಂಥದ್ದೊಂದು ದೃಶ್ಯ ಇದೆ. ಅಲ್ಲಿ ಯಾಕೆ ಕೊಟ್ಟಿಲ್ಲ. ನಾವೇನು ಮುಠಾuಳರಾ? ಅಶ್ಲೀಲತೆ ಇದ್ದರೆ ಕೊಡಲಿ. ಬೆನ್ನು ತೋರಿಸಿದರು ಎಂಬ ಕಾರಣಕ್ಕೆ ಕೊಡುವುದು ಸರಿಯಲ್ಲ. ಇದು ಬರೀ ನನ್ನ ಚಿತ್ರದ ಸಮಸ್ಯೆ ಅಲ್ಲ. “ಉಪೇಂದ್ರ ಮತ್ತೆ ಬಾ’ ಚಿತ್ರಕ್ಕೆ “ಎ’ ಸಿಕ್ಕಿದೆ.

“ಮಂತ್ರಂ’ ಎಂಬ ಚಿತ್ರಕ್ಕೂ “ಎ’ ಸಿಕ್ಕಿದೆ. ಅಷ್ಟೇ ಅಲ್ಲ, ಇತ್ತೀಚೆಗೆ “ದಯವಿಟ್ಟು ಗಮನಿಸಿ’ ಚಿತ್ರತಂಡದವರನ್ನು ಸೆನ್ಸಾರ್‌ ಮಂಡಳಿಯಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ. ನಮ್ಮ ಚಿತ್ರದಲ್ಲಿ ಮೋದಿ ಎಂಬ ಹೆಸರು ಇತ್ತು. ಅದನ್ನು ತೆಗೆದುಹಾಕಲು ಹೇಳಿದರು. “ಜೈ ಲವ ಕುಶ’ ಚಿತ್ರ ಪೂರ್ತಿ ಮೋದಿ ಎಂಬ ಹೆಸರು ಇದೆ. ಸೆನ್ಸಾರ್‌ ನಿಯಮಗಳು ಇಡೀ ದೇಶಕ್ಕೆ ಅನ್ವಯಿಸುವುದಾರೆ, ಬೇರೆ ರಾಜ್ಯಗಳಿಗೆ ಒಂದು ತರಹ, ನಮಗೆ ಮಾತ್ರ ಒಂದು ತರಹ ಯಾಕೆ’ ಎಂದು ಪ್ರಶ್ನಿಸುತ್ತಾರೆ ನವರಸನ್‌.

ಸೆನ್ಸಾರ್‌ನವರು ನಮ್ಮ ಸೇವಕರು ಎನ್ನುವ ಅವರು, “ಸೆನ್ಸಾರ್‌ನವರು ಸುಮ್ಮನೆ ಚಿತ್ರ ನೋಡುವುದಿಲ್ಲ. ಒಂದು ಚಿತ್ರ ನೋಡುವುದಕ್ಕೆ 30 ಸಾವಿರ ಡಿಡಿ ಕಟ್ಟಬೇಕು. ಎಸಿ ಚಿತ್ರಮಂದಿರದಲ್ಲಿ ಚಿತ್ರ ತೋರಿಸಬೇಕು. ಇಷ್ಟೆಲ್ಲಾ ಮಾಡಿರುತ್ತೇವೆ. ಅವರ ಕೆಲಸವೇ ಚಿತ್ರ ನೋಡಿ ಸೆನ್ಸಾರ್‌ ಮಾಡುವುದು. ಅವರು ನಮ್ಮ ಸೇವಕರು. ನಮ್ಮ ಮೇಲೆ ಅಧಿಕಾರ ಚಲಾಯಿಸಬಾರದು. ಸುಮ್ಮನೆ ಕಾರಣವಿಲ್ಲದೆ “ಎ’ ಪ್ರಮಾಣ ಪತ್ರ ಕೊಡುವುದರಿಂದ ಸಾಕಷ್ಟು ಸಮಸ್ಯೆ ಆಗುತ್ತದೆ.

ಮೊದಲೇ ಕನ್ನಡ ಚಿತ್ರಗಳನ್ನು ನೋಡುವವರು ಕಡಿಮೆ. “ಎ’ ಅಂದರೆ ಇನ್ನೂ ಹೆದರುತ್ತಾರೆ. ಇದರ ಹಿಂದೆ ಯಾರಧ್ದೋ ದೊಡ್ಡ ಕೈವಾಡ ಇದೆ. ಅದನ್ನು ಪತ್ತೆ ಮಾಡುತ್ತಿದ್ದೀನಿ. ನಾನು “ಎ’ ಕೊಡಬೇಡಿ ಎಂದು ಹೇಳುತ್ತಿಲ್ಲ. ನೋಡಿಕೊಂಡು ಕೊಡಿ ಅಂತಷ್ಟೇ ಹೇಳಿ. ಮೊದಲು ನಮ್ಮ ಚಿತ್ರದಲ್ಲಿ ಸಾಕಷ್ಟು ಗ್ಲಾಮರಸ್‌ ದೃಶ್ಯಗಳಿದ್ದವು. ಒಂದು ಲಿಪ್‌ಲಾಕ್‌ ಸೀನ್‌ ಇತ್ತು. ನಿರ್ಮಾಪಕರು ಅದೆಲ್ಲವನ್ನೂ ಕಿತ್ತು ಹಾಕುವುದಕ್ಕೆ ಹೇಳಿದರು.

ಎಲ್ಲಾ ಕಿತ್ತು ಹಾಕಿದ್ದೆ. ಆದರೂ “ಎ’ ಕೊಟ್ಟರು. ಇದರ ಬಗ್ಗೆ ಸೆನ್ಸಾರ್‌ ಅಧಿಕಾರಿ ಶ್ರೀನಿವಾಸಪ್ಪ ಅವರನ್ನು ಕೇಳಿದರೆ, ಅವರಲ್ಲಿ ಉತ್ತರವೇ ಇಲ್ಲ. ಈ ವಿಷಯವನ್ನು ಇಷ್ಟಕ್ಕೇ ಬಿಡುವುದಿಲ್ಲ. ಇದರ ವಿರುದ್ಧ ಹೋರಾಟ ಮಾಡುತ್ತೀನಿ. ಬರೀ ನನ್ನ ಸಿನಿಮಾ ಅಂತ ಮಾಡುವುದಿಲ್ಲ. ಬೇರೆ ಯಾವ ನಿರ್ಮಾಪಕರ ಚಿತ್ರಕ್ಕೆ ಸೆನ್ಸಾರ್‌ ಸಮಸ್ಯೆಯಾದರೆ ಖಂಡಿತಾ ನಾನೂ ಹೋರಾಟ ಮಾಡುತ್ತೀನಿ’ ಎನ್ನುತ್ತಾರೆ ನವರಸನ್‌.

ಟಾಪ್ ನ್ಯೂಸ್

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.