![modi (4)](https://www.udayavani.com/wp-content/uploads/2024/07/modi-4-4-415x256.jpg)
ಹಸೆಮಣೆ ಏರಲು ತಯಾರಾದ ಚೇತನ್
ಅಸ್ಸಾಂ ಹುಡುಗಿಯನ್ನು ವರಿಸಲಿರುವ ನಟ
Team Udayavani, Jan 2, 2020, 7:01 AM IST
![chetan](https://www.udayavani.com/wp-content/uploads/2020/01/chetan-620x339.jpg)
ಹೊಸವರ್ಷ ಆರಂಭದಲ್ಲಿಯೇ ಸ್ಯಾಂಡಲ್ವುಡ್ನ ನಾಯಕ ನಟ, “ಆ ದಿನಗಳು’ ಖ್ಯಾತಿಯ ಚೇತನ್ ಕುಮಾರ್ ಮದುವೆ ಸುದ್ದಿ ಹೊರಬಿದ್ದಿದೆ. ಹೌದು, ಚೇತನ್ ಕುಮಾರ್ ಸದ್ದಿಲ್ಲದೆ ಹಸೆಮಣೆ ಏರುವ ತಯಾರಿಯಲ್ಲಿದ್ದಾರೆ. ಅಂದಹಾಗೆ, ಚೇತನ್ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್ ಅಂತೆ. ಸುಮಾರು ಎರಡು ವರ್ಷಗಳಿಂದ ಚೇತನ್ ಕುಮಾರ್, ಅಸ್ಸಾಂ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದಾರೆ ಎನ್ನಲಾಗುತ್ತಿದ್ದು, ಈ ಇಬ್ಬರ ಪ್ರೀತಿಗೆ ಎರಡೂ ಕುಟುಂಬಗಳು ಸಮ್ಮತಿ ನೀಡಿದ್ದು, ಇದೇ ಫೆಬ್ರವರಿ ವೇಳೆಗೆ ಮದುವೆ ನಡೆಯಲಿದೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿರುವ ಚೇತನ್, “ಸದ್ಯಕ್ಕೆ ಮದುವೆ ಆಗುತ್ತಿರುವುದು ಮತ್ತು ಮದುವೆಯ ಒಂದಷ್ಟು ತಯಾರಿಗಳು ನಡೆಯುತ್ತಿರುವುದು ನಿಜ. ನಾನು ಸರಳವಾಗಿ ಮದುವೆಯಾಗಬೇಕು ಅನ್ನೋದು ನನ್ನ ಮತ್ತು ಮನೆಯವರ ಆಶಯ. ಅದರಂತೆ ಸರಳವಾಗಿ ವಿವಾಹಕ್ಕೆ ಪ್ಲಾನಿಂಗ್ ಮಾಡಿಕೊಳ್ಳುತ್ತಿದ್ದೇನೆ. ನಾನು ಮದುವೆಯಾಗುತ್ತಿರುವ ಹುಡುಗಿ ಚಿತ್ರರಂಗದವರಲ್ಲ. ಆದಷ್ಟು ಬೇಗ ಆ ಹುಡುಗಿ, ಮದುವೆಯ ಬಗ್ಗೆ ಎಲ್ಲ ವಿವರಗಳನ್ನು ಹಂಚಿಕೊಳ್ಳುತ್ತೇನೆ’ ಎಂದಿದ್ದಾರೆ. ಇನ್ನು ಚೇತನ್ ಅನಾಥಾಶ್ರಮದ ಮಕ್ಕಳ ಸಮ್ಮುಖದಲ್ಲಿ ಮದುವೆ ಆಗಲು ನಿರ್ಧರಿಸಿದ್ದಾರಂತೆ.
ಜೊತೆಗೆ ತಾನು ಮದುವೆಯಾಗುತ್ತಿರುವ ಹುಡುಗಿಗೂ ಕನ್ನಡ ಕಲಿಸುತ್ತಿದ್ದಾರಂತೆ. ಒಟ್ಟಾರೆ ಕಳೆದ ವರ್ಷ ಸ್ಯಾಂಡಲ್ವುಡ್ನಲ್ಲಿ ಧ್ರುವ ಸರ್ಜಾ, ರಿಷಿ, ಕಿರಣ್, ಹಿತಾ ಚಂದ್ರಶೇಖರ್, ನಿತ್ಯ ರಾಮ್ ಹೀಗೆ ಅನೇಕ ತಾರೆಯರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ವರ್ಷ ಆರಂಭದಲ್ಲಿಯೇ ಚೇತನ್ ಮದುವೆ ಸುದ್ದಿ ಹೊರಬೀಳುವ ಮೂಲಕ ಸ್ಯಾಂಡಲ್ವುಡ್ನಲ್ಲಿ ತಾರೆಯರ ವಿವಾಹ ಪ್ರಾರಂಭವಾಗಿದ್ದು, ಇನ್ನು ಯಾವ್ಯಾವ ತಾರೆಯರು ಈ ವರ್ಷ ಹಸೆಮಣೆ ಏರುತ್ತಾರೆ ಅನ್ನೋದು ಕಾದು ನೋಡಬೇಕು.
ಟಾಪ್ ನ್ಯೂಸ್
![modi (4)](https://www.udayavani.com/wp-content/uploads/2024/07/modi-4-4-415x256.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![modi (4)](https://www.udayavani.com/wp-content/uploads/2024/07/modi-4-4-150x92.jpg)
NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!
![Exam](https://www.udayavani.com/wp-content/uploads/2024/07/Exam-8-150x84.jpg)
NEET ಟಾಪರ್ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!
![1-assam](https://www.udayavani.com/wp-content/uploads/2024/07/1-assam-150x84.jpg)
UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
![New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’](https://www.udayavani.com/wp-content/uploads/2024/07/POLICE-5-12-150x79.jpg)
New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’
![1-kanwar-msid](https://www.udayavani.com/wp-content/uploads/2024/07/1-kanwar-msid-150x84.jpg)
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.