ಸಿನಿಮಾ ಪ್ರೇಮಿಗಳು ನನ್ನ ಕೈ ಬಿಡಲ್ಲ


Team Udayavani, Dec 31, 2017, 10:58 AM IST

cinima-premi.jpg

“ಅಂಜನಿಪುತ್ರ’ ಚಿತ್ರದಲ್ಲಿನ ಸಂಭಾಷಣೆ ವಕೀಲರನ್ನು ಅವಹೇಳನ ಮಾಡುವಂತಿದೆ ಎಂದು ವಕೀಲರೊಬ್ಬರು ಚಿತ್ರಕ್ಕೆ ತಡೆ ತಂದಿದ್ದರು. ಹಾಗಾಗಿ, ಚಿತ್ರ ಒಂದು ಪ್ರದರ್ಶನ ಕಂಡಿರಲಿಲ್ಲ. ಈಗ ಎಂದಿನಂತೆ ಚಿತ್ರ ಪ್ರದರ್ಶನವಾಗುತ್ತಿದೆ. ಹಾಗಾದರೆ, ಚಿತ್ರದ ಒಂದು ದಿನದ ಪ್ರದರ್ಶನ ನಿಂತಿದ್ದರಿಂದ ನಿರ್ಮಾಪಕ ಕುಮಾರ್‌ ಅವರಿಗಾದ ನಷ್ಟವೆಷ್ಟು ಎಂದರೆ ಅದಕ್ಕೆ ಅವರು ಉತ್ತರಿಸಲು ಸಿದ್ಧರಿಲ್ಲ.

“ಸಿನಿಮಾದಿಂದ ಒಂದಷ್ಟು ನಷ್ಟವಾಗಿರೋದು ನಿಜ. ಆದರೆ, ಮುಂದಿನ ದಿನಗಳಲ್ಲಿ ಅಭಿಮಾನಿಗಳು ಆ ನಷ್ಟವನ್ನು ಭರಿಸಿಕೊಡುತ್ತಾರೆಂಬ ವಿಶ್ವಾಸವಿದೆ. ಒಂದು ದಿನ ಶೋ ನಿಂತಿದೆ. ಆದರೆ ಚಿತ್ರಮಂದಿರದ ಮಾಲೀಕರು ಬೇರೆ ಸಿನಿಮಾ ಹಾಕಿಲ್ಲ. ಒಂದು ಚಿತ್ರಮಂದಿರ ಕೂಡಾ ಕಡಿಮೆಯಾಗಿಲ್ಲ. ಮೊದಲ ವಾರ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡಿದ್ದೆ.

ಈ ವಾರ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ. ವಕೀಲರು ಅವರಿಗಾದ ಬೇಸರದ ಬಗ್ಗೆ ಕೇಳಿದ್ದು ತಪ್ಪಲ್ಲ. ಆದರೆ, ಕೇಳಲು ಬಂದ ರೀತಿ ಸರಿ ಇರಲಿಲ್ಲ ಅನಿಸಿಲ್ಲ. ನೇರವಾಗಿ ಕೇಳಿದರೆ ನಾವೇ ಕಟ್‌ ಮಾಡೋಕೆ ರೆಡಿ ಇದ್ದೇವು. ಆಗಿದ್ದು ಆಗಿದ್ದು, ನನಗೆ ಬೇವು-ಬೆಲ್ಲ ಸ್ವಲ್ಪ ಬೇಗನೇ ಬಂದಿದೆ’ ಎನ್ನುವ ಅವರಿಗೆ ಕಷ್ಟದ ಸಮಯದಲ್ಲಿ ಬೆಂಬಲಕ್ಕೆ ಬಾರದ ಚಿತ್ರರಂಗದ ಮಂದಿಯ ಬಗ್ಗೆ ಬೇಸರವಿದೆ.

“ನಾನು ಅನೇಕರ ಕಷ್ಟಕ್ಕೆ ಸ್ಪಂಧಿಸಿದ್ದೇವೆ. ರಾತ್ರೋರಾತ್ರಿ ನಿಂತು ಸಿನಿಮಾ ಬಿಡುಗಡೆ ಕೂಡಾ ಮಾಡಿಸಿದ್ದೇವೆ.  ಅದು ನನ್ನ ಕರ್ತವ್ಯ. ಬೇರೆಯವರು ಬೆಂಬಲಕ್ಕೆ ಬರೋದು ಅವರ ಇಚ್ಛೆ. ನಾನು ಸಿನಿಮಾ ಪ್ರೇಮಿಗಳನ್ನು ಅಭಿಮಾನಿಗಳನ್ನು ನಂಬಿದ್ದೇನೆ. ಅವರು ನನ್ನ ಕೈ ಬಿಡೋದಿಲ್ಲ ಎಂಬ ನಂಬಿಕೆ ಇದೆ. ನನಗೆ ಸಿನಿಮಾ ಬಿಟ್ಟು ಬೇರೇನು ಕೆಲಸ ಗೊತ್ತಿಲ್ಲ.

ಏನೇ ಕಷ್ಟ ಬಂದರೂ ಸಿನಿಮಾ ಮಾಡುತ್ತಲೇ ಇರುತ್ತೇನೆ. ಸಿನಿಮಾ ಪ್ರೇಮಿಗಳು ನನ್ನ ಕೈ ಬಿಡೋದಿಲ್ಲ’ ಎಂಬ ನಂಬಿಕೆ ಇದೆ ಎಂಬುದು ಕುಮಾರ್‌ ಮಾತು. ಪುನೀತ್‌ ರಾಜಕುಮಾರ್‌ ಅವರಿಗೆ ಅಭಿಮಾನಿಗಳು ಈ ಸಿನಿಮಾವನ್ನು ಹಬ್ಬದ ರೀತಿ ಸಂಭ್ರಮಿಸಿದ ಬಗ್ಗೆ ಖುಷಿ ಇದೆ. ಜೊತೆಗೆ ಚಿತ್ರಕ್ಕೆ ಎದುರಾದ ಸಮಸ್ಯೆಯನ್ನು ಇಡೀ ಚಿತ್ರತಂಡ ಒಗ್ಗಟ್ಟಾಗಿ ನಿಂತು ಬಗೆಹರಿಸಿಕೊಂಡಿದೆ.

“ಸಮಸ್ಯೆ ಬಗೆಹರಿದಿದೆ. ಮತ್ತೆ ಸಿನಿಮಾ ಆರಂಭವಾಗಿದೆ. ಬಂದು ನೋಡಿ’ ಎಂದರು. ನಿರ್ದೇಶಕ ಹರ್ಷ ಸಿನಿಮಾದ ಸಮಸ್ಯೆ ಬಗೆಹರಿದಿರುವ ಬಗ್ಗೆ ನಿರಾಳರಾಗಿದ್ದರು. ಚಿತ್ರದ ವಿತರಕ ಜಾಕ್‌ ಮಂಜು ಅವರು ಚಿತ್ರದ ಕಲೆಕ್ಷನ್‌ನಿಂದ ಖುಷಿಯಾಗಿದ್ದಾರೆ. ಟಿಕೆಟ್‌ ಬೆಲೆಗೆ ಜಿಎಸ್‌ಟಿ ಸೇರಿದ್ದರೂ ಅಭಿಮಾನಿಗಳು ಖುಷಿಯಿಂದ ಟಿಕೆಟ್‌ ಪಡೆದು ಸಿನಿಮಾ ನೋಡಿದರು ಎಂಬುದು ಅವರ ಮಾತು. 

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.