“ಶಕ್ತಿಧಾಮ”ದಲ್ಲಿ ನಿರ್ಗತಿಕ ಮಹಿಳೆಯರು,ಮಕ್ಕಳಿಗೆ ಆಸರೆಯಾಗಿದ್ದ ಅಮ್ಮ
Team Udayavani, May 31, 2017, 11:43 AM IST
ಮೈಸೂರು : ಬಹು ಅಂಗಾಂಗವೈಫಲ್ಯಗಳಿಂದ 77ರ ಹರೆಯದಲ್ಲಿ ಕೊನೆಯುಸಿರೆಳೆದಿರುವ ವರನಟ ಡಾ.ರಾಜ್ ಕುಮಾರ್ ಧರ್ಮಪತ್ನಿ, ಹಿರಿಯ ನಿರ್ಮಾಪಕಿ ಡಾ.ಪಾರ್ವತಮ್ಮ ರಾಜ್ಕುಮಾರ್ ಅವರು ಕೇವಲ ನಿರ್ಮಾಪಕಿಯಾಗಿ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಗಳ ಮೂಲಕವೂ ಗುರುತಿಸಿಕೊಂಡವರು.
ಮೈಸೂರಿನ ನಂಜನಗೂಡು ರಸ್ತೆಯಲ್ಲಿ 2010 ರ ಮೇ 20 ರಂದು ನಿರ್ಗತಿಕ ಮಹಿಳೆಯರು ಮತ್ತು ಮಕ್ಕಳಿಗಾಗಿ ಶಕ್ತಿಧಾಮ ಎನ್ನುವ ಟ್ರಸ್ಟ್ ಮೂಲಕ ಪುನರ್ವಸತಿ ಕೇಂದ್ರವನ್ನು ತೆರೆದಿದ್ದರು. ಈ ಕೇಂದ್ರ ಆರಂಭವಾದುದರಿಂದ ಇಲ್ಲಿಯವರೆಗೆ ಸಾವಿವಾರು ಮಹಿಳೆಯರು,ಮಕ್ಕಳು ಕಳೆದುಹೋದ ಬದುಕನ್ನು ಮರಳಿ ಪಡೆದಿದ್ದಾರೆ.ಪ್ರಸಕ್ತ ಈ ಕೇಂದ್ರದಲ್ಲಿ 35 ಮಹಿಳೆಯರು ಮತ್ತು 100 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಶಕ್ತಿಧಾಮದಲ್ಲಿ ಪಾರ್ವತಮ್ಮ ಅವರ ನಿಧನದ ವಾರ್ತೆ ಕೇಳಿ ನೀರವ ಮೌನ ಆವರಿಸಿದ್ದು ಅನ್ನದಾತೆ ಇಲ್ಲದೆ ಮಹಿಳೆಯರು ಮಕ್ಕಳು ಕಂಬನಿ ಮಿಡಿದಿದ್ದಾರೆ. ಪಾರ್ವತಮ್ಮ ಅವರ ಭಾವ ಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ದೀಪ ಬೇಳಗಿ ಮೌನಾಚರಣೆ ಮಾಡುತ್ತಿದ್ದಾರೆ.
ಅಶಕ್ತರ ಸೇವೆ ಮಾಡಬೇಕೆಂಬ,ಶೋಷಿತರ ಪರ ಧನಿಯಾಗಬೇಕೆಂಬ ತುಡಿತ ಹೊಂದಿದ್ದ ಪಾರ್ವತಮ್ಮ ಸಮಯ ಸಿಕ್ಕಾಗೆಲ್ಲಾ ಶಕ್ತಿಧಾಮಕ್ಕೆ ಭೇಟಿ ನೀಡಿ ನೊಂದವರಿಗೆ ಸಾಂತ್ವನ ಹೇಳಿ ಜೀವನ ಭರವಸೆ ತುಂಬುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ