ಫಸ್ಟ್ ಲವ್: ಲವ್ ಗುರುವಿನ ಮೊದಲ ಪ್ರೇಮ ಪ್ರಕರಣ


Team Udayavani, Aug 17, 2017, 11:50 AM IST

first-love.jpg

ಇದುವರೆಗೂ ಅವರ ಧ್ವನಿ ಮಾತ್ರ ಜನರಿಗೆ ಗೊತ್ತಿತ್ತು. ಈಗ ಕೊನೆಗೆ “ಲವ್‌ ಗುರು’ ರಾಜೇಶ್‌ ಅವರ ಮುಖ ಪರಿಚಯ ಕನ್ನಡಿಗರಿಗಾಗುತ್ತಿದೆ. ಈ ಶುಕ್ರವಾರ (ಆಗಸ್ಟ್‌ 18) ಬಿಡುಗಡೆಯಾಗುತ್ತಿರುವ “ಫ‌ಸ್ಟ್‌ ಲವ್‌’ ಎಂಬ ಚಿತ್ರದ ಮೂಲಕ “ಲವ್‌ ಗುರು’ ರಾಜೇಶ್‌ ಹೀರೋ ಆಗುತ್ತಿದ್ದಾರೆ. ಈ ಚಿತ್ರವನ್ನು ಅಶೋಕ್‌ ಲಮಾಣಿ ಅವರು ನಿರ್ಮಿಸಿದರೆ, ಮಲ್ಲಿಕಾರ್ಜುನ್‌ ಅಲಿಯಾಸ್‌ ಮಲ್ಲಿ ಎನ್ನುವವರು ಚಿತ್ರಕ್ಕೆ ಕಥೆ-ಚಿತ್ರಕಥೆಯನ್ನು ರಚಿಸಿದ್ದಾರೆ. ಇಷ್ಟಕ್ಕೂ ಏನೀ “ಫ‌ಸ್ಟ್‌ ಲವ್‌’ ಎಂಬ ಕುತೂಹಲ ಬರದೇ ಇರದು. ಇದು ಪ್ರತಿಯೊಬ್ಬರ ಜೀವನದ ಮೊದಲ ಪ್ರೇಮ ಎನ್ನುತ್ತಾರೆ ನಿರ್ದೇಶಕ ಮಲ್ಲಿ.

“ಪ್ರತಿಯೊಬ್ಬರ ಜೀವನದಲ್ಲೂ ಒಮ್ಮೆಯಾದರೂ ಪ್ರೇಮಾಂಕುರವಾಗುತ್ತದೆ ಮತ್ತು ಅಂತಹ ಪ್ರೇಮದ ಕಥೆಯೇ ಈ ಚಿತ್ರ’ ಎನ್ನುತ್ತಾರೆ ಅವರು. ಇದೇನು ಅವರ ಪ್ರೇಮಕಥೆಯಾ ಎಂದರೆ, ಅಲ್ಲಲ್ಲ ನಿರ್ಮಾಪಕರ ಮಿತ್ರರದು ಎನ್ನುತ್ತಾರೆ ಅವರು.  ಮಲ್ಲಿ, ನಿರ್ಮಾಪಕ ಅಶೋಕ್‌ ಲಮಾಣಿ ಅವರಿಗೆ ಒಂದು ಕಥೆ ಹೇಳಿ ಒಪ್ಪಿಸುವುದಕ್ಕೆ ಹೋಗಿದ್ದರಂತೆ. ಕಥೆ ಕೇಳಿದ ಅಶೋಕ್‌ ಲಮಾಣಿ, “ಕಥೆಯೇನೋ ಚೆನ್ನಾಗಿದೆ. ಆದರೆ,
ಇದಕ್ಕಿಂತ ಇನ್ನೂ ಒಂದು ಚೆಂದದ ಕಥೆ ಇದೆ’ ಎಂದರಂತೆ. ಯಾವುದದು ಕಥೆ ಎಂದು ನೋಡಿದರೆ, ಅದು ನಿರ್ಮಾಪಕರ ಸ್ನೇಹಿತರ ಜೀವನದಲ್ಲಾದ ಒಂದು ನೈಜ ಘಟಣೆ. ಆ ಘಟನೆಯನ್ನು ಅಶೋಕ್‌ ಲಮಾಣಿ ಒಮ್ಮೆ ಕೇಳಿಸಿದರಂತೆ. ಕಥೆ ಕೇಳಿ ಖುಷಿಯಾದ
ಮಲ್ಲಿ, ತಮ್ಮ ಕಥೆ ಪಕ್ಕಕ್ಕಿಟ್ಟು, ಈ ಕಥೆಗೆ ಚಿತ್ರ ಬರೆದು ನಿರ್ದೇಶನ ಮಾಡಿದ್ದಾರೆ. ಈ ಕಥೆಯಲ್ಲೊಂದು ಅದ್ಭುತವಾದ ಸಂದೇಶವಿದೆಯಂತೆ. ಅದೇ ಈ ಚಿತ್ರದ ಹೈಲೈಟ್‌ ಎನ್ನುತ್ತಾರೆ ಅವರು. ಇನ್ನು ಚಿತ್ರದ ಹಾಡುಗಳು ಮತ್ತು ಲೊಕೇಶನ್‌ ಗಳ ಬಗ್ಗೆಯೂ ಅವರಿಗೆ ಖುಷಿಯಿದೆ.

ಬಿಜಾಪುರ, ಚಿಕ್ಕಮಗಳೂರು, ಬೆಂಗಳೂರು ಮುಂತಾದ ಕಡೆ ಅವರು ಹಾಡುಗಳನ್ನು ಚಿತ್ರೀಕರಣ ಮಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಹಿಮದ ನಡುವೆ ಚಿತ್ರೀಕರಣ ಮಾಡಿದ್ದು ಮರೆಯಲಾರದ ಅನುಭವ ಎನ್ನುತ್ತಾರೆ ಅವರು. ಇನ್ನು “ಲವ್‌ ಗುರು’ ರಾಜೇಶ್‌ ಅವರಿಗೆ ಇದು ಮೊದಲ ಸಿನಿಮಾ. ಇದಕ್ಕೂ ಮುನ್ನ ಅವರಿಗೆ ಅಭಿನಯದ ಗಂಧ-ಗಾಳಿ ಗೊತ್ತಿರಲಿಲ್ಲವಂತೆ.

ಆದರೂ ನಿರ್ದೇಶಕರ ಮೇಲಿನ ನಂಬಿಕೆಗೆ ಕ್ಯಾಮೆರಾ ಮುಂದೆ ಬಂದು ನಿಂತರಂತೆ. “ನಮ್ಮ ನಿರ್ದೇಶಕರು ಯಾವತ್ತೂ ಒಂದು ಮಾತು ಹೇಳುತ್ತಿದ್ದರು. ಪಾತ್ರವನ್ನು ಜೀವಿಸಬೇಕು ಅಂತ. ಹಾಗೆಂದರೆ ಏನು ಅಂತ ನನಗೆ ಅರ್ಥವಾಗೋಕೆ ಒಂದು ಹಂತದ ಚಿತ್ರೀಕರಣ
ಬೇಕಾಯ್ತು. ಸಾಮಾನ್ಯವಾಗಿ ಎಲ್ಲರೂ ಚಿತ್ರೀಕರಣದ ಸಂದರ್ಭವನ್ನು ಪಿಕ್‌ನಿಕ್‌ಗೆ ಹೋಲಿಸುತ್ತಾರೆ.

ಚಿತ್ರೀಕರಣ ಒಳ್ಳಿ ಪಿಕ್‌ನಿಕ್‌ ಇದ್ದ ಹಾಗಿತ್ತು ಎನ್ನುತ್ತಾರೆ. ಆದರೆ, ನನಗೆ ಖಂಡಿತಾ ಹಾಗನಿಸಲಿಲ್ಲ. ಏಕೆಂದರೆ, ಸಮಯ ಕಳೆಯೋಕೆ ಅವಕಾಶವೇ ಇರಲಿಲ್ಲ. ಹೊಸಬನಾದ್ದರಿಂದ ಕಲಿಯೋದು ತುಂಬಾ ಇತ್ತು. ಹಾಗಾಗಿ ಒಂದು ನಿಮಿಷ ವೇಸ್ಟ್‌ ಮಾಡದೆ, ಸತತವಾಗಿ
ಕಲಿತಿದ್ದೀನಿ. ಇನ್ನು ಮೊದಲೇ ಹೇಳಿದಂತೆ ನನಗೆ ನಟನೆ ಗೊತ್ತಿರಲಿಲ್ಲ. ನಿರ್ದೇಶಕರ ಸಹಕಾರವಿಲ್ಲದಿದ್ದರೆ ನಟಿಸೋಕೆ ಸಾಧ್ಯತೆ ಇರಲಿಲ್ಲ’ ಎನ್ನುತ್ತಾರೆ ರಾಜೇಶ್‌.

“ಫ‌ಸ್ಟ್‌ ಲವ್‌’ ಚಿತ್ರದಲ್ಲಿ ರೇಡಿಯೋ ಜಾಕಿ ರಾಜೇಶ್‌, ಕವಿತಾ ಗೌಡ, ಸ್ನೇಹ ನಾಯರ್‌, ವೆಂಕಟ್‌ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಶ್ರೀಧರ್‌ ವಿ. ಸಂಭ್ರಮ್‌ ಅವರ ಸಂಗೀತ, ಸುರೇಶ್‌ ಬಾಬು ಅವರ ಛಾಯಾಗ್ರಹಣವಿದೆ. 

ಟಾಪ್ ನ್ಯೂಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.