ಲಕ್ಷ್ಮೀ ರೈ ಎಂಗೇಜ್ಮೆಂಟ್ ಟ್ವಿಸ್ಟ್!
Team Udayavani, Apr 8, 2021, 7:50 AM IST
ಕನ್ನಡ, ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿರುವ ನಟಿ ರಾಯ್ ಲಕ್ಷ್ಮೀ (ಲಕ್ಷ್ಮೀ ರೈ) ಇತ್ತೀಚೆಗೆ ತಮ್ಮ ಎಂಗೇಜ್ ಮೆಂಟ್ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ದರು.
ಈ ಟ್ವೀಟ್ ನೋಡಿದ ಅಭಿಮಾನಿಗಳು ರಾಯ್ ಲಕ್ಷ್ಮೀಗೆ ಶುಭಾಶಯ ಕೋರುವುದರ ಜೊತೆಗೆ, ಹುಡುಗ ಯಾರು ಎಂದು ಪ್ರಶ್ನಿಸುತ್ತಿದ್ದರು. ಈಗ ಅದಕ್ಕೆ ಲಕ್ಷ್ಮೀ ಉತ್ತರಿಸಿದ್ದಾರೆ.
“ನಿಮ್ಮ ಕೈಗಳನ್ನು ಆಗಾಗ ನೀರಿನಿಂದ ತೊಳೆಯುತ್ತಿರಿ. ಅಗತ್ಯವಿದ್ದಾಗ ಸ್ಯಾನಿಟೈಸರ್ ಬಳಸಿ ಎಂಬುದನ್ನು ನಿಮಗೆ ನೆನಪಿಸಲು ನಾನು ಈ ಪೋಸ್ಟ್ ಅನ್ನು ಬೇರೊಬ್ಬರಿಂದ ಕದ್ದಿದ್ದೇನೆ’ ಎಂದು ರಾಯ್ ಲಕ್ಷ್ಮೀ ಬರೆದುಕೊಂಡಿದ್ದಾರೆ.
ಕೊರೊನಾ ವೈರಸ್ ತಡೆಯಲು ಸ್ವತ್ಛತೆ ಬಹಳ ಮುಖ್ಯ. ಹೀಗಾಗಿ, ಜನರಲ್ಲಿ ಅರಿವು ಮೂಡಿಸುವ ಸಲುವಾಗಿ, ಎಂಗೇಜ್ಮೆಂಟ್ ಅಂತ ಕಥೆ ಹೇಳಿದ್ದೇನೆ ಎಂದು ತಮ್ಮ ಎಂಗೇಜ್ಮೆಂಟ್ ಸುದ್ದಿಗೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.