ಸ್ವಯಂ ನಿಯಂತ್ರಣದಿಂದ ಮಾತ್ರ ಪೈರಸಿ ತಡೆ ಸಾಧ್ಯ
Team Udayavani, Mar 11, 2021, 6:52 PM IST
ಬೆಂಗಳೂರು: ಇತ್ತೀಚೆಗಷ್ಟೇ ಬಿಡುಗಡೆಯಾದ ರಿಷಭ್ ಶೆಟ್ಟಿ ಅಭಿನಯದ “ಹೀರೋ’ ಚಿತ್ರಕ್ಕೆ ಪೈರಸಿ ಕಾಟ ಎದುರಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಚಿತ್ರದ ಪೈರಸಿ ಕಾಪಿಗಳು ಅಲ್ಲಲ್ಲಿ ಹರಿದಾಡಿ ಚಿತ್ರತಂಡಕ್ಕೆ ಒಂದಷ್ಟು ನಷ್ಟವನ್ನೂ ಉಂಟು ಮಾಡಿದೆ.
ಈ ಬಗ್ಗೆ ಮಾತನಾಡಿರುವ ನಟ ಪುನೀತ್ ರಾಜಕುಮಾರ್, “ದಿನದಿಂದ ದಿನಕ್ಕೆ ಮನು ಷ್ಯರನ್ನೂ ಮೀರಿ ತಂತ್ರಜ್ಞಾನ ಬೆಳೆಯುತ್ತಿದೆ. ಹೀಗಿರುವಾಗ ತಂತ್ರಜ್ಞಾನದಿಂದ ಪೈರಸಿ ತಡೆಯಲು ಸಾಧ್ಯವಿಲ್ಲ. ನಾವೇ Ó ಇÌ ಚ್ಛೆಯಿಂದ ಪೈರಸಿ ತಡೆಯಲು ಮುಂದಾಗಬೇಕು. ಪೈರಸಿ ಕಾಪಿಗಳನ್ನು ನೋಡದಿದ್ದರೆ, ಯಾರೂ ಪೈರಸಿ ಮಾಡೋದಕ್ಕೂ ಯಾರೂ ಮುಂದಾಗು ವುದಿಲ್ಲ’ ಎಂದಿದ್ದಾರೆ. “ಪೈರಸಿಯಂತಹ ಕೆಲಸಗಳು ಸಿನಿಮಾ ರಂಗಕ್ಕೆ ಮಾರಕ. ಈ ಬಗ್ಗೆ ಸಿನಿಮಾದವರು ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಇದಲ್ಲದೆ, ಪ್ರೇಕ್ಷಕರೇ ಎಚ್ಚೆತ್ತು ಕೊಂಡು ಪೈರಸಿ ಆಗಿರುವ ಕಾಪಿಗಳನ್ನು ನೋಡದಿರುವುದೇ ಪೈರಸಿ ತಡೆಗಿರುವ ಉತ್ತಮ ಮಾರ್ಗ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದರ ಬೆನ್ನಲ್ಲೆ ಮತ್ತೂಂದು ಬಿಗ್ ಬಜೆಟ್ ಚಿತ್ರ “ರಾಬರ್ಟ್’ ಕೂಡ ಗುರುವಾರ ಬಿಡುಗಡೆಯಾಗುತ್ತಿದ್ದು, “ರಾಬರ್ಟ್’ಗೂ ಪೈರಸಿ ಆತಂಕ ಎದುರಾಗಿದೆ. ಈಗಾಗಲೇ ಪೈರಸಿ ಮಾಡುವವರ ಎಚ್ಚರಿಕೆ ನೀಡಿರುವ “ರಾಬರ್ಟ್’ ನಿರ್ಮಾಪಕ ಉಮಾಪತಿ, ನಮ್ಮ ಸಿನಿಮಾಗಳ ಯಾವುದೇ ಭಾಗ ಪೈರಸಿ ಆಗಿರುವುದು ಕಂಡು ಬಂದರೆ ತಪ್ಪಿತಸ್ಥರನ್ನು ಖಂಡಿತವಾಗಿಯೂ ಕಾನೂನಿನ ಅಡಿಯಲ್ಲಿ ಶಿಕ್ಷಿಸದೆ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ