ಗುಳ್ಟು ತಂಡದೊಂದಿಗೆ ರಿಷಿ ಹೊಸ ಚಿತ್ರ
Team Udayavani, Oct 14, 2018, 11:52 AM IST
ನಟ ರಿಷಿ “ಆಪರೇಷನ್ ಅಲಮೇಲಮ್ಮ’ ಬಳಿಕ ಬಿಝಿಯಾಗಿದ್ದು ಗೊತ್ತೇ ಇದೆ. ಅವರೀಗ “ಕವಲುದಾರಿ’ ಮುಗಿಸಿದ್ದಾರೆ. ಆ ಚಿತ್ರವನ್ನು ಎದುರು ನೋಡುತ್ತಿರುವ ಬೆನ್ನಲ್ಲೇ, ಧನುಷ್ ಬ್ಯಾನರ್ನಲ್ಲೊಂದು ಚಿತ್ರ ಮಾಡುತ್ತಿರುವ ಸುದ್ದಿಯೂ ಗೊತ್ತು. ಈಗ ರಿಷಿ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಹೌದು, ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶಕರು. ಇವರಿಗಿದು ಮೊದಲ ಚಿತ್ರ.
ನಿರ್ದೇಶಕ ಅನೂಪ್ ರಾಮಸ್ವಾಮಿ ಈ ಹಿಂದೆ, “ಗುಳ್ಟು’ ಚಿತ್ರಕ್ಕೆ ಕೆಲಸ ಮಾಡಿದ್ದರು. ಅದಕ್ಕೂ ಮೊದಲು ಸಿಂಪಲ್ಸುನಿ ಜೊತೆ ಕೆಲಸ ಮಾಡಿದ ಅನುಭವ ಇದೆ. ಅನೂಪ್ ರಾಮಸ್ವಾಮಿ ಕಶ್ಯಪ್ಗೆ ಇದು ಮೊದಲ ಅನುಭವ. ಈ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ಈ ಚಿತ್ರದಲ್ಲಿ ರಿಷಿ ಜೋಡಿಯಾಗಿ ಧನ್ಯಾ ಬಾಲಕೃಷ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಅಪ್ಪಟ ಕನ್ನಡದ ಹುಡುಗಿ ಧನ್ಯಾ ಬಾಲಕೃಷ್ಣ, ಈಗಾಗಲೇ ತೆಲುಗು, ತಮಿಳು ಹಾಗು ಮಲಯಾಳಂ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡದಲ್ಲಿ ಇದು ಮೊದಲ ಚಿತ್ರ. ಇನ್ನು, ಈ ಚಿತ್ರದ ಮುಖ್ಯ ಆಕರ್ಷಣೆ ರಂಗಾಯಣ ರಘು ಹಾಗು ಮಿತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಶಾಲಿನಿ, ದತ್ತಣ್ಣ ಇತರರು ನಟಿಸುತ್ತಿದ್ದಾರೆ. ನಿರ್ದೇಶಕ ಅನೂಪ್ ರಾಮಸ್ವಾಮಿ ಕಶ್ಯಪ್ ಅವರು ಈ ಮೂಲಕ ಕಾಮಿಡಿ ಥ್ರಿಲ್ಲರ್ ಕಥೆ ಹೇಳಲು ಹೊರಟಿದ್ದಾರೆ. ಪಂಚ್ ಡೈಲಾಗ್ ಇಲ್ಲದೆ, ಸನ್ನಿವೇಶಕ್ಕನುಗುಣವಾದ ಕಾಮಿಡಿ ಒಳಗೊಂಡಂತೆ ಚಿತ್ರ ಮಾಡುತ್ತಿರುವ ಅವರು, “ಇಲ್ಲಿ ಯಾವುದೇ ಪಂಚಿಂಗ್ ಡೈಲಾಗ್ಗಳಿಲ್ಲದೆ, ಪ್ರತಿ ದೃಶ್ಯದಲ್ಲೂ ಸಿನಿಮಾ ನಗಿಸುತ್ತಲೇ ಸಾಗುತ್ತದೆ.
ಇಡೀ ಚಿತ್ರ ಕಾಮಿಡಿ ವ್ಯಾಲ್ಯು ಬಿಟ್ಟು ಹೋಗುವುದೇ ಇಲ್ಲ’ ಎಂಬುದು ನಿರ್ದೇಶಕ ಅನೂಪ್ ರಾಮಸ್ವಾಮಿ ಅವರ ಮಾತು. ಇನ್ನು ಈ ಚಿತ್ರವನ್ನು “ಗುಳ್ಟು’ ಚಿತ್ರ ನಿರ್ಮಿಸಿದ್ದ ಪ್ರಶಾಂತ್ರೆಡ್ಡಿ ಮತ್ತು ದೇವರಾಜ್ ಆರ್. ನಿರ್ಮಾಣ ಮಾಡುತ್ತಿದ್ದು, ಬಹುತೇಕ ಅದೇ ತಂಡ ಇಲ್ಲೂ ಕೆಲಸ ಮಾಡುತ್ತಿದೆ. ಸದ್ಯಕ್ಕೆ ಮೂರು ಶೀರ್ಷಿಕೆಗಳನ್ನು ಚಿತ್ರತಂಡ ಪಕ್ಕಾ ಮಾಡಿದ್ದು, ಆ ಪೈಕಿ ಒಂದು ಶೀರ್ಷಿಕೆಯನ್ನು ನವೆಂಬರ್ 4 ರಂದು ನಡೆಯಲಿರುವ ಮುಹೂರ್ತ ಸಮಾರಂಭದಲ್ಲಿ ಆನೌನ್ಸ್ ಮಾಡಲು ನಿರ್ಧರಿಸಿದೆ.
ಚಿತ್ರಕ್ಕೆ “ಗುಳ್ಟು’ ನಿರ್ದೇಶಕ ಜನಾರ್ದನ್ ಮತ್ತು ಹರಿಕೃಷ್ಣ ಅವರು ಕಥೆ ಬರೆದರೆ, ನಿರ್ದೇಶಕ ಅನೂಪ್ ರಾಮಸ್ವಾಮಿ ಕಶ್ಯಪ್ ಅವರ ಚಿತ್ರಕಥೆ, ಸಂಭಾಷಣೆ ಇದೆ. ಬಹುತೇಕ ಬೆಂಗಳೂರು ಮತ್ತು ಮಂಗಳೂರಲ್ಲಿ ಚಿತ್ರೀಕರಣ ನಡೆಯಲಿದೆ. ಬಾಲಿವುಡ್ನ “ಥಗ್ಸ್ ಆಫ್ ಹಿಂದುಸ್ತಾನ್’ ಚಿತ್ರಕ್ಕೆ ಛಾಯಾಗ್ರಹಣ ಸಹಾಯಕರಾಗಿದ್ದ ವಿಘ್ನೇಶ್ ರಾಜ್ ಚಿತ್ರಕ್ಕೆ ಛಾಯಾಗ್ರಾಹಕರು. ಕನ್ನಡದಲ್ಲಿ ಇದು ಅವರ ಮೊದಲ ಚಿತ್ರ. ಮಿಥುನ್ ಮುಕುಂದನ್ ಐದು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಶಾಂತು ಅವರ ಸಂಕಲನವಿದೆ. ವಿಕ್ರಮ್ ಸಾಹಸ ಸಂಯೋಜಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?