ಸ್ಯಾಂಡಲ್ವುಡ್ಗೊಂದು ಮೂವಿ ಗ್ಯಾರೇಜ್
Team Udayavani, Sep 12, 2021, 3:24 PM IST
“ಮೂವಿ ಗ್ಯಾರೇಜ್’- ಇದು ಸಂಪೂರ್ಣ ಹೊಸಬರ ಕನಸು.ಕನ್ನಡ ಚಿತ್ರರಂಗಕ್ಕೆ ಸಹಾಯವಾಗಬೇಕೆಂಬ ಉದ್ದೇಶದಿಂದ ಹೊಸಬರ ತಂಡವೊಂದು “ಮೂವಿ ಗ್ಯಾರೇಜ್’ ಆರಂಭಿಸಿದೆ.
ಏನಿದು ಮೂವಿ ಗ್ಯಾರೇಜ್ ಎಂದು ನೀವುಕೇಳಬಹುದು. ಇದು ಪಕ್ಕಾ ದೇಸಿಯಾಗಿರುವ ಓಟಿಟಿ ವೇದಿಕೆ. ಯಕ್ಷಗಾನ, ಭರತನಾಟ್ಯ, ನಾಟಕ, ಶೋ ಮತ್ತಿತರ ಪ್ರಮುಖ ಕಲೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆರಂಭವಾಗಿರುವ ಈ ವೇದಿಕೆ ಈಗಕನ್ನಡ ಚಿತ್ರರಂಗಕ್ಕೆ
ಎಂಟ್ರಿಕೊಟ್ಟಿದೆ. ಇತ್ತೀಚೆಗೆ ಈ ಆ್ಯಪ್ ಲೋಕಾರ್ಪಣೆಯಾಗಿದೆ.
ಸುಜಾತಾಕಾಮತ್ ಅವರ ಆರ್.ಪಿ .ಕೆ ಎಂಟರ್ಪ್ರೈಸಸ್ನಡಿ ಈ “ಮೂವಿ ಗ್ಯಾರೇಜ್’ ಬರುತ್ತಿದೆ. ಇತ್ತೀಚೆಗೆ ಕರ್ನಾಟಕ ವಾಣಿಜ್ಯ
ಮಂಡಳಿಯ ಅಧ್ಯಕ್ಷರಾದ ಜೈರಾಜ್, ಚಲನಚಿತ್ರ ಆಕಾಡೆಮಿ ಅಧ್ಯಕ್ಷರಾದ ಸುನೀಲ್ ಪುರಾಣಿಕ್, ಮಂಡಳಿ ಕಾರ್ಯದರ್ಶಿ ಎನ್. ಎಂ ಸುರೇಶ್, ಹಿರಿಯ ನಿರ್ದೇಶಕರಾದ ದಿನೇಶ್ ಬಾಬು “ಮೂವಿ ಗ್ಯಾರೇಜ್’ ಅನ್ನು ಲೋಕಾರ್ಪಣೆ ಮಾಡಿದರು.
ಇದನ್ನೂ ಓದಿ:ಕುಟುಂಬ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದೇ ಇಂದಿರಾ ಗಾಂಧಿ : ನಟ ಚೇತನ್
ಕನ್ನಡ ನಿರ್ಮಾಪಕರ ಸಹಕಾರಕ್ಕೆ “ಮೂವಿ ಗ್ಯಾರೇಜ್’ ವೇದಿಕೆಯಾಗಲಿದ್ದು, ಮುಂದಿನ ದಿನಗಳಲ್ಲಿ ಸಿನಿಮಾ ವೀಕ್ಷಕರಿಗೆ ಒಳ್ಳೆಯ ಸಿನಿಮಾ ಗಳನ್ನು ನೀಡುವ ಉದ್ದೇಶ ಹೊಂದಿದ್ದೇವೆ ಎಂಬುದು ತಂಡದ ಮಾತು. ಹಿರಿಯ ನಟರಾದ ಶ್ರೀನಿವಾಸ್ ಪ್ರಭು ಒಬ್ಬರೇ ನಟಿಸಿರುವ “ಬಿಂಬ ಆ ತೊಂಬತ್ತು ನಿಮಿಷಗಳು’ ಎಂಬ ಉತ್ತಮ ಚಿತ್ರವನ್ನು ಮೂವಿ ಗ್ಯಾರೇಜ್ ತಮ್ಮ ಮೊದಲ ಚಿತ್ರವೆಂದು ಘೋಷಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ